ಬಡಗನ್ನೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ
ಬಾವದಬೈಲು ಶಾಲೆ ಸ್ಥಗಿತ
ಮೂಡುಬಿದಿರೆ ತಾಲ್ಲೂಕಿನ ಪುಚ್ಚೆಮೊಗರು ಗ್ರಾಮದ ಬಾವದಬೈಲು ಗ್ರಾಮೀಣ ಪ್ರದೇಶದಲ್ಲಿರುವ ನಿತ್ಯಾನಂದ ಅನುದಾನಿತ ಹಿ.ಪ್ರಾ.ಶಾಲೆಯ ಏಕೈಕ ಶಿಕ್ಷಕಿ ಅನುಪಮಾ ಜುಲೈನಲ್ಲಿ ನಿವೃತ್ತಿಯಾಗಲಿದ್ದಾರೆ. ಸರ್ಕಾರ ಹೊಸ ಶಿಕ್ಷಕರನ್ನು ನೇಮಿಸದ ಕಾರಣ ಈ ಶಾಲೆಯ 21 ವಿದ್ಯಾರ್ಥಿಗಳು ಬೇರೆಡೆ ದಾಖಲಾಗಿದ್ದಾರೆ. ಈ ಶಾಲೆಯ ಕಟ್ಟಡವೂ ಶಿಥಿಲವಾಗಿದ್ದು, ಚಾವಣಿಗೆ ಪ್ಲಾಸ್ಟಿಕ್ ಹೊದಿಸಲಾಗಿದೆ. 75 ವರ್ಷಗಳ ಹಿಂದೆ ತ್ಯಾಂಪಣ್ಣ ಶೆಟ್ಟಿ ನೇತೃತ್ವದಲ್ಲಿ ಈ ಶಾಲೆಯನ್ನು ಆರಂಭಿಸಲಾಗಿತ್ತು.
ಶಿಥಿಲಗೊಂಡ ಕಟ್ಟಡಗಳಲ್ಲಿ ತರಗತಿ ನಡೆಸದಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದೇವೆ. ದುರಸ್ತಿ ಅಗತ್ಯವಿರುವ ಶಾಲಾ ಕಟ್ಟಡಗಳ ಪಟ್ಟಿ ತಯಾರಿಸಿ, ಕ್ರಿಯಾಯೋಜನೆ ತಯಾರಿಸಿದ್ದೇವೆ