ಇಳಿಜಾರು ಪ್ರದೇಶದಲ್ಲಿ ಅಪಾಯಕಾರಿ ತಿರುವಿಗೆ ಗೋಡೆಯಾಗಲಿ ಸೂಚನಾ ಫಲಕವಾಗಲಿ ಇಲ್ಲ
ಹಸಿರಿನಿಂದ ಕೂಡಿದ ಸುಂದರ ಪ್ರದೇಶದ ರಸ್ತೆಬದಿಯಲ್ಲಿ ಪರಿಸರ ವಾತಾವರಣವನ್ನು ಹದಗೆಡಿಸುವ ಕಸದ ರಾಶಿ
ಪ್ರಯತ್ನ ಆಗಿದೆ; ಸಮಸ್ಯೆ ಇದೆ
ಅಪಾಯ ಕಾದಿರುವ ಜಾಗದ ಕೆಲವು ಭಾಗಗಳು ಖಾಸಗಿಯವರಿಗೆ ಸೇರಿದ್ದು. ಆದ್ದರಿಂದ ಗೋಡೆ ನಿರ್ಮಿಸಲು ಅನೇಕ ತೊಂದರೆಗಳು ಇವೆ. ಈ ಕುರಿತು ಅನೇಕ ಸುತ್ತಿನ ಮಾತುಕತೆ ನಡೆದಿದೆ. ಇದು ಹೆದ್ದಾರಿಯನ್ನು ಸುಲಭವಾಗಿ ಸಂಪರ್ಕಿಸುವ ರಸ್ತೆಯಾಗಿರುವುದರಿಂದ ಬಹಳ ಮಂದಿ ಈ ಮೂಲಕವೇ ಸಾಗಲು ಬಯಸುತ್ತಾರೆ. ಹೀಗಾಗಿ ಈ ರಸ್ತೆಯ ಬಳಕೆ ಈಚೆಗೆ ತುಂಬ ಹೆಚ್ಚಾಗಿದೆ. ಅಪಾಯಕಾರಿ ತಿರುವು ಇರುವಲ್ಲಿ ಮತ್ತು ಆಳ ಇರುವಲ್ಲಿ ವಾಹನ ಸವಾರರಿಗೆ ಅನುಕೂಲ ಆಗುವಂಥ ಸೌಲಭ್ಯಗಳನ್ನು ಕಲ್ಪಿಸಲಾಗುವುದು. -ಚಂದ್ರಾವತಿ ವಿಶ್ವನಾಥ್ ಮಹಾನಗರ ಪಾಲಿಕೆ ಸದಸ್ಯೆ