‘ಎಲ್ಲ ಮಕ್ಕಳ ಸಂಘ ಹಾಗೂ ಭೀಮ ಸಂಘದ ಪ್ರತಿನಿಧಿಗಳಾಗಿ ಅಂತರರಾಷ್ಟ್ರೀಯ ಮಟ್ಟದ ಮಕ್ಕಳು ಮತ್ತು ಯುವ ಜನರ ಸಲಹಾ ಗುಂಪಿನ ಸದಸ್ಯರಾಗಿ ಉಡುಪಿ ನಾಡ ಮಕ್ಕಳ ಸಂಘದ ಶ್ರೀರಕ್ಷಾ ಮತ್ತು ತನುಷ್, ಉಳ್ಳೂರು ಕಾಮನಬಿಲ್ಲು ಮಕ್ಕಳ ಸಂಘದ ನಿಶ್ಮಿತಾ, ಹಾಲಾಡಿ ಮಕ್ಕಳ ಸಂಘದ ಅಂಜಲಿ, ವಿಜಯನಗರ ಭೀಮ ಸಂಘದ ಮಹೇಶ್ವರಿ ಪಾಲ್ಗೊಂಡಿದ್ದರು. ನಮ್ಮ ಸಂಸ್ಥೆಯ ಮಾರ್ಗದರ್ಶನ ಹಾಗೂ ಬೆಂಬಲದೊಂದಿಗೆ ಮಕ್ಕಳು ಸಮರ್ಥವಾಗಿ ಹಕ್ಕೊತ್ತಾಯ ಮಂಡಿಸಿದ್ದರು. ಆಟವು ಮಕ್ಕಳ ಸಮಗ್ರ ಅಭಿವೃದ್ಧಿಗೆ ಮೂಲ ಅಗತ್ಯವಾಗಿದೆ ಎಂಬುದನ್ನು ಮಕ್ಕಳು ನಿರೂಪಿಸಿದ್ದರು’ ಎಂದು ಸಿಡಬ್ಲ್ಯುಸಿ ಸಂಯೋಜಕಿ ಕೃಪಾ ಎಂ.ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.