<p>ಮೂಡುಬಿದಿರೆ: ಇಲ್ಲಿನ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಡಿ.21ರಿಂದ 27 ರವರೆಗೆ ಅಂತರರಾಷ್ಟ್ರೀಯ ಸ್ಕೌಟ್ಸ್ –ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯಲಿದ್ದು, ವಿಶ್ವಕ್ಕೆ ಒಳ್ಳೆ ಸಂದೇಶವನ್ನು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಕೌಟ್ಸ್ –ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ ಆಳ್ವ ಹೇಳಿದರು.</p>.<p>ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ವಿದ್ಯಾಗಿರಿಯ 100 ಎಕರೆ ಜೊತೆ ಸಮೀಪದ 50 ಎಕ್ರೆ ಖಾಸಗಿ ಜಾಗದಲ್ಲಿ ಜಾಂಬೂರಿ ನಡೆಯಲಿದೆ. 7 ಎಕರೆಯಲ್ಲಿ 42 ವಿವಿಧ ಕಸರತ್ತುಗಳು ನಡೆಯಲಿವೆ. ಕೃಷಿ, ಕಲಾ, ವಿಜ್ಞಾನ, ಆಹಾರ , ಪುಸ್ತಕ, ಸ್ವದೇಶಿ ಮೇಳಗಳು ಆಕರ್ಷಣೆಯಾಗಿವೆ. 12 ಎಕರೆಯಲ್ಲಿ ತೋಟಗಾರಿಕಾ ಬೆಳೆಗಳು, ತರಕಾರಿ, ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ರಕ್ಷಣಾ ಇಲಾಖೆ ಮತ್ತು ಇಸ್ರೊ ಸಹಕಾರದೊಂದಿಗೆ ವಿಜ್ಞಾನದ ಮಾದರಿ ಪ್ರದರ್ಶನ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದರು.</p>.<p>ಜನಪದ ಮತ್ತು ಆಧುನಿಕ ಶೈಲಿಯ ಕಲಾ ಕೃತಿಗಳ ರಚನೆ ಮತ್ತು ಪ್ರದರ್ಶನ ನಡೆಯಲಿವೆ. ಛಾಯಾಚಿತ್ರ ಸರ್ಧೆಗೆ ಬಂದಿದ್ದ 9 ಸಾವಿರ ಕಲಾಕೃತಿಗಳ ಪೈಕಿ ಆಯ್ದ 300 ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದರು.</p>.<p>10 ಎಕರೆ ಖಾಸಗಿ ಜಾಗದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಅರಣ್ಯ ನಿರ್ಮಿಸಲಾಗಿದೆ. 30 ಶ್ರೇಷ್ಠ ಜಾದೂಗಾರರಿಂದ ಪ್ರದರ್ಶನ, ಗಾಳಿಪಟಗಳ ಹಾರಾಟ, ಗೊಂಬೆಯಾಟಗಳ ಪ್ರದರ್ಶನವಿದೆ. 500 ವಿವಿಧ ಮಳಿಗೆಗಳು ಮಾರಾಟ ಪ್ರದರ್ಶನ ನಡೆಯಲಿವೆ ಎಂದರು.</p>.<p>ಪುರಸಭೆ ಸಹಯೋಗದೊಂದಿಗೆ ಪ್ರಮುಖ 8 ರಸ್ತೆಗಳಲ್ಲಿ ಸ್ವಚ್ಛತಾ ಅಂದೋಲನ, 3 ಸಾವಿರ ವಿದ್ಯಾರ್ಥಿಗಳಿಂದ ಯುವ ಮ್ಯಾರಥನ್ ನಡೆಯಲಿವೆ.</p>.<p>50 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಕುಳಿತು ಕೊಳ್ಳುವ ಬಯಲು ಮಂದಿರ ನಿರ್ಮಿಸಿದ್ದು, ಅಲ್ಲಿ ಯೋಗ, ಧ್ಯಾನ, ಶಂಕರ್ ಮಹದೇವನ್, ವಿಜಯ ಪ್ರಕಾಶ್ ಮತ್ತಿತರ ಪ್ರಮುಖರಿಂದ ಸಂಗೀತ ಸಂಜೆ ನಡೆಯಲಿದೆ ಎಂದರು.</p>.<p>ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳುವರು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡುಬಿದಿರೆ: ಇಲ್ಲಿನ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಡಿ.21ರಿಂದ 27 ರವರೆಗೆ ಅಂತರರಾಷ್ಟ್ರೀಯ ಸ್ಕೌಟ್ಸ್ –ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ನಡೆಯಲಿದ್ದು, ವಿಶ್ವಕ್ಕೆ ಒಳ್ಳೆ ಸಂದೇಶವನ್ನು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸ್ಕೌಟ್ಸ್ –ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ ಆಳ್ವ ಹೇಳಿದರು.</p>.<p>ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ವಿದ್ಯಾಗಿರಿಯ 100 ಎಕರೆ ಜೊತೆ ಸಮೀಪದ 50 ಎಕ್ರೆ ಖಾಸಗಿ ಜಾಗದಲ್ಲಿ ಜಾಂಬೂರಿ ನಡೆಯಲಿದೆ. 7 ಎಕರೆಯಲ್ಲಿ 42 ವಿವಿಧ ಕಸರತ್ತುಗಳು ನಡೆಯಲಿವೆ. ಕೃಷಿ, ಕಲಾ, ವಿಜ್ಞಾನ, ಆಹಾರ , ಪುಸ್ತಕ, ಸ್ವದೇಶಿ ಮೇಳಗಳು ಆಕರ್ಷಣೆಯಾಗಿವೆ. 12 ಎಕರೆಯಲ್ಲಿ ತೋಟಗಾರಿಕಾ ಬೆಳೆಗಳು, ತರಕಾರಿ, ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ರಕ್ಷಣಾ ಇಲಾಖೆ ಮತ್ತು ಇಸ್ರೊ ಸಹಕಾರದೊಂದಿಗೆ ವಿಜ್ಞಾನದ ಮಾದರಿ ಪ್ರದರ್ಶನ ನಡೆಯಲಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದರು.</p>.<p>ಜನಪದ ಮತ್ತು ಆಧುನಿಕ ಶೈಲಿಯ ಕಲಾ ಕೃತಿಗಳ ರಚನೆ ಮತ್ತು ಪ್ರದರ್ಶನ ನಡೆಯಲಿವೆ. ಛಾಯಾಚಿತ್ರ ಸರ್ಧೆಗೆ ಬಂದಿದ್ದ 9 ಸಾವಿರ ಕಲಾಕೃತಿಗಳ ಪೈಕಿ ಆಯ್ದ 300 ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದರು.</p>.<p>10 ಎಕರೆ ಖಾಸಗಿ ಜಾಗದಲ್ಲಿ ಅರಣ್ಯ ಇಲಾಖೆ ಸಹಯೋಗದೊಂದಿಗೆ ಅರಣ್ಯ ನಿರ್ಮಿಸಲಾಗಿದೆ. 30 ಶ್ರೇಷ್ಠ ಜಾದೂಗಾರರಿಂದ ಪ್ರದರ್ಶನ, ಗಾಳಿಪಟಗಳ ಹಾರಾಟ, ಗೊಂಬೆಯಾಟಗಳ ಪ್ರದರ್ಶನವಿದೆ. 500 ವಿವಿಧ ಮಳಿಗೆಗಳು ಮಾರಾಟ ಪ್ರದರ್ಶನ ನಡೆಯಲಿವೆ ಎಂದರು.</p>.<p>ಪುರಸಭೆ ಸಹಯೋಗದೊಂದಿಗೆ ಪ್ರಮುಖ 8 ರಸ್ತೆಗಳಲ್ಲಿ ಸ್ವಚ್ಛತಾ ಅಂದೋಲನ, 3 ಸಾವಿರ ವಿದ್ಯಾರ್ಥಿಗಳಿಂದ ಯುವ ಮ್ಯಾರಥನ್ ನಡೆಯಲಿವೆ.</p>.<p>50 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ಕುಳಿತು ಕೊಳ್ಳುವ ಬಯಲು ಮಂದಿರ ನಿರ್ಮಿಸಿದ್ದು, ಅಲ್ಲಿ ಯೋಗ, ಧ್ಯಾನ, ಶಂಕರ್ ಮಹದೇವನ್, ವಿಜಯ ಪ್ರಕಾಶ್ ಮತ್ತಿತರ ಪ್ರಮುಖರಿಂದ ಸಂಗೀತ ಸಂಜೆ ನಡೆಯಲಿದೆ ಎಂದರು.</p>.<p>ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯಪಾಲರು ಬರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪಾಲ್ಗೊಳ್ಳುವರು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>