<p><strong>ಕಾಸರಗೋಡು</strong>: ಆಲಂಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಧ್ಯಾಹ್ನ ವಿತರಿಸಲಾದ ಆಹಾರ ಸೇವಿಸಿ 60 ಮಕ್ಕಳು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.</p>.<p>ಆಹಾರ ಸೇವಿಸಿದ ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳು ವಾಂತಿ ಮಾಡಿದ್ದರು. ಚಿಕಿತ್ಸೆ ಬಳಿಕ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p>ಈ ಸಂಬಂಧ ಜಿಲ್ಲಾ ಮಟ್ಟದ ಆರ್ಆರ್ಟಿ ಸಭೆ ಕರೆಯಲಾಗಿದ್ದು, ಶಾಲೆಗೆ ವಿತರಣೆಯಾಗುತ್ತಿರುವ ಹಾಲು ಮತ್ತಿತರ ಸಾಮಗ್ರಿಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು, ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮಾಹಿತಿ ಸಂಗ್ರಹಿಸಿದ್ದಾರೆ.</p>.<p>ಆರೋಪಿ ಬಂಧನ</p>.<p>ಕಾಸರಗೋಡು: ಮಜೀರ್ ಪಳ್ಳ ಪ್ರದೇಶದ ದೇವಾಲಯ ಮತ್ತು ಮಸೀದಿಯ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಿದ ಆರೋಪದಲ್ಲಿ ಮುಹಮ್ಮದ್ ಅಶ್ರಫ್ (37) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಕಳವು ಪ್ರಕರಣ ನಡೆದಿತ್ತು.</p>.<p>ಗಾಯಾಳು ಸಾವು</p>.<p>ಕಾಸರಗೋಡು: ಪಳ್ಳಿಕ್ಕರೆ ಮೇಲ್ಸೇತುವೆ ಬಳಿ ನ.19ರಂದು ರಾತ್ರಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಆರಂಗಾಡಿ ನಿವಾಸಿ ಸಿ.ಎಚ್.ಅಬೂಬಕ್ಕರ್ (76) ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಇಲ್ಲಿನ ಮರದ ಮಿಲ್ನಲ್ಲಿ ಕಾವಲುಗಾರರಾಗಿದ್ದರು.</p>.<p>ಕುಸಿದು ಬಿದ್ದು ಸಾವು</p>.<p>ಕಾಸರಗೋಡು: ಕಳ್ಳಾರ್ ಅರಿಂಗಲ್ ನಿವಾಸಿ ಪಿ.ಕುಂಞಿಕಣ್ಣನ್ (51) ಹಿತ್ತಿಲಲ್ಲಿ ಕುಸಿದು ಮೃತಪಟ್ಟಿದ್ದಾರೆ. ಅವರನ್ನು ತಕ್ಷಣ ಪೂಡಂಗಲ್ಲು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಆಲಂಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಧ್ಯಾಹ್ನ ವಿತರಿಸಲಾದ ಆಹಾರ ಸೇವಿಸಿ 60 ಮಕ್ಕಳು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.</p>.<p>ಆಹಾರ ಸೇವಿಸಿದ ಹಿರಿಯ ಪ್ರಾಥಮಿಕ ವಿಭಾಗದ ಮಕ್ಕಳು ವಾಂತಿ ಮಾಡಿದ್ದರು. ಚಿಕಿತ್ಸೆ ಬಳಿಕ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.</p>.<p>ಈ ಸಂಬಂಧ ಜಿಲ್ಲಾ ಮಟ್ಟದ ಆರ್ಆರ್ಟಿ ಸಭೆ ಕರೆಯಲಾಗಿದ್ದು, ಶಾಲೆಗೆ ವಿತರಣೆಯಾಗುತ್ತಿರುವ ಹಾಲು ಮತ್ತಿತರ ಸಾಮಗ್ರಿಗಳ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದೆ. ಶಾಸಕ ಎನ್.ಎ.ನೆಲ್ಲಿಕುನ್ನು, ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮಾಹಿತಿ ಸಂಗ್ರಹಿಸಿದ್ದಾರೆ.</p>.<p>ಆರೋಪಿ ಬಂಧನ</p>.<p>ಕಾಸರಗೋಡು: ಮಜೀರ್ ಪಳ್ಳ ಪ್ರದೇಶದ ದೇವಾಲಯ ಮತ್ತು ಮಸೀದಿಯ ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಿದ ಆರೋಪದಲ್ಲಿ ಮುಹಮ್ಮದ್ ಅಶ್ರಫ್ (37) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಕಳವು ಪ್ರಕರಣ ನಡೆದಿತ್ತು.</p>.<p>ಗಾಯಾಳು ಸಾವು</p>.<p>ಕಾಸರಗೋಡು: ಪಳ್ಳಿಕ್ಕರೆ ಮೇಲ್ಸೇತುವೆ ಬಳಿ ನ.19ರಂದು ರಾತ್ರಿ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಆರಂಗಾಡಿ ನಿವಾಸಿ ಸಿ.ಎಚ್.ಅಬೂಬಕ್ಕರ್ (76) ಕಾಞಂಗಾಡಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಇಲ್ಲಿನ ಮರದ ಮಿಲ್ನಲ್ಲಿ ಕಾವಲುಗಾರರಾಗಿದ್ದರು.</p>.<p>ಕುಸಿದು ಬಿದ್ದು ಸಾವು</p>.<p>ಕಾಸರಗೋಡು: ಕಳ್ಳಾರ್ ಅರಿಂಗಲ್ ನಿವಾಸಿ ಪಿ.ಕುಂಞಿಕಣ್ಣನ್ (51) ಹಿತ್ತಿಲಲ್ಲಿ ಕುಸಿದು ಮೃತಪಟ್ಟಿದ್ದಾರೆ. ಅವರನ್ನು ತಕ್ಷಣ ಪೂಡಂಗಲ್ಲು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದು, ಅಷ್ಟರಲ್ಲಿ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>