ವೆಂಕಟರಮಣ ದೇವಸ್ಥಾನದ ದೇವರ ಉತ್ಸವದಲ್ಲಿ ಬಳಸುವ ಸಲುವಾಗಿ ನಿರ್ಮಿಸಿರುವ ನೂತನ ಸ್ವರ್ಣ ಲಾಲ್ಕಿಯನ್ನು ಸಂಯಮಿಂದ್ರ ತೀರ್ಥ ಸ್ವಾಮೀಜಿ ವೀಕ್ಷಿಸಿದರು. ಲಾಲ್ಕಿಯ ಸೂಕ್ಷ್ಮ ಕುಸರಿ ಕಲೆಯ ಬಗ್ಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಉದ್ಯಮಿ ಪಿ . ದಯಾನಂದ ಪೈ ಮತ್ತಿತರರು ಭಾಗವಹಿಸಿದ್ದರು.