ಮಂಗಳೂರು:ಸಾಹಿತಿ ಯು.ಎ. ಖಾಸಿಮ್ ಉಳ್ಳಾಲ (74) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿ ಯರು ಇದ್ದಾರೆ. ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿ ದ್ದಾರೆ. ಬ್ಯಾರಿ ಸಾಹಿತ್ಯ ಚಳವಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದು ಉಳ್ಳಾಲ, ಬ್ಯಾರಿ ಆಂದೋಲನದ ಮುಂಚೂಣಿಯಲ್ಲಿದ್ದರು.