ಮಂಗಳೂರು: ನಗರದ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್, ಮಾರುವೇಷದಲ್ಲಿ ಮಂಗಳೂರಿನಿಂದ ಲಾರಿಯಲ್ಲಿ ಬೆಂಗಳೂರಿಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ನಗರದ ಚಿಲಿಂಬಿಯಲ್ಲಿ ವಾಸಿಸುತ್ತಿದ್ದ ಆದಿತ್ಯ ರಾವ್, ಕೆಲ ದಿನಗಳ ಹಿಂದೆ ಹೋಟೆಲ್ ನಲ್ಲಿ ಬಿಲ್ಲಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದ. ಹೋಟೆಲ್ನಲ್ಲಿಯೇಬಾಂಬ್ ತಯಾರಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ದೊರೆತಿದೆ.
ಹೋಟೆಲ್ ಸಿಬ್ಬಂದಿಯನ್ನು ವಿಚಾರಿಸಿದಾಗ ಈ ಎಲ್ಲ ಮಾಹಿತಿ ಬಹಿರಂಗವಾಗಿವೆ. ಆನ್ಲೈನ್ ಮೂಲಕ ಪೌಡರ್ ತರಿಸಿದ್ದು, ಅದರಿಂದ ಬಾಂಬ್ ತಯಾರಿಸಿದ್ದ. ಹೋಟೆಲ್ನರೂಮ್ನಲ್ಲಿಬಾಂಬ್ ತಯಾರಿಕೆಗೆ ಬಳಸಿದ್ದ ಪೌಡರ್ ಪತ್ತೆಯಾಗಿದೆ.
ವಿಚಿತ್ರವಾಗಿ ವರ್ತಿಸುತ್ತಿದ್ದಆದಿತ್ಯ ರಾವ್, ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ತನ್ನಷ್ಟಕ್ಕೆ ಇರುತ್ತಿದ್ದ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ.
ಬಾಂಬ್ ಪ್ರಕರಣದ ಕುರಿತಂತೆ ಸಿಸಿಟಿವಿ ದೃಶ್ಯಾವಳಿ ಹಾಗೂ ಶಂಕಿತನ ಫೋಟೊ ಬಿಡುಗಡೆ ಮಾಡಿದ್ದ ಪೊಲೀಸರು, ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದರು. ಎಲ್ಲ ಆಯಾಮಗಳಿಂದ ತನಿಖೆ ನಡೆಸಿದಾಗ, ಆದಿತ್ಯರಾವ್ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿತ್ತು.
ತನ್ನ ಬಂಧನಬಹುತೇಕ ಖಚಿತ ಎನ್ನುವ ಪರಿಸ್ಥಿತಿ ಸೃಷ್ಟಿಯಾದ ನಂತರಬೆಂಗಳೂರಿಗೆ ಪರಾರಿಯಾಗಿದ್ದ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಸೋಮವಾರ ಬೆಳಿಗ್ಗೆ ‘ಬಾಕ್ಸ್ ಬಾಂಬ್’ ಇರಿಸಿರುವ ದುಷ್ಕರ್ಮಿಗಳು, ಜನನಿಬಿಡ ಸ್ಥಳದಲ್ಲೇ ಸ್ಫೋಟಕ್ಕೆ ಯತ್ನ ನಡೆಸಿದ್ದಾರೆ.#Karnataka #MangaloreAirport #HighAlerthttps://t.co/7M3P5g8orl
— ಪ್ರಜಾವಾಣಿ | Prajavani (@prajavani) January 21, 2020
ಕಾರ್ಯಾಚರಣೆಗೆ ತಂದಿದ್ದ ವೈರ್ ಸರಿಯಾಗಿ ಕೆಲಸ ಮಾಡದ ಕಾರಣ ಬಾಂಬ್ ಸ್ಫೋಟ್ ಮತ್ತಷ್ಟು ವಿಳಂಬವಾಯಿತು. #Mangalore #BombDetectedInMangalorehttps://t.co/wA2ttyuojc
— ಪ್ರಜಾವಾಣಿ | Prajavani (@prajavani) January 21, 2020
ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಬ್ಯಾಗ್ನಲ್ಲಿ ಸುಧಾರಿತ ಬಾಂಬ್ಗಳು ಪತ್ತೆಯಾಗಿದ್ದು ಬಾಂಬ್ ನಿಷ್ಕ್ರಿಯ ದಳದ ತಜ್ಞ ಸಿಬ್ಬಂದಿಗಳು ಬಾಂಬ್ ಚೀಲವನ್ನೇ ಸ್ಫೋಟಿಸಿದ್ದಾರೆ.#MangaloreAirport #Bombhttps://t.co/FFdFf0wWoA
— ಪ್ರಜಾವಾಣಿ | Prajavani (@prajavani) January 20, 2020
ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಆಟೊ ರಿಕ್ಷಾದಲ್ಲಿ ಬಂದು ಸುಧಾರಿತ ಬಾಂಬ್ಗಳಿರುವ ಬ್ಯಾಗ್ ಅನ್ನು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.#MangaloreAirport #Bombhttps://t.co/UkiucMlNzR
— ಪ್ರಜಾವಾಣಿ | Prajavani (@prajavani) January 20, 2020
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಆಟೊದಲ್ಲಿ ಬಂದು, ಬ್ಯಾಗ್ ಇಟ್ಟಿರೋದು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು ತನಿಖೆಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.#BasavarajBommai #MangaloreAirport #Bombhttps://t.co/6QeAO5bzsm
— ಪ್ರಜಾವಾಣಿ | Prajavani (@prajavani) January 20, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.