ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮಂಗಳೂರು ದಸರಾಕ್ಕೆ ಅ.3ರಂದು ಚಾಲನೆ: ಎಚ್.ಎಸ್. ಸಾಯಿರಾಂ

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶಾರದೆ, ನವದುರ್ಗೆಯರ ಪ್ರತಿಷ್ಠಾಪನೆ
Published : 30 ಸೆಪ್ಟೆಂಬರ್ 2024, 14:29 IST
Last Updated : 30 ಸೆಪ್ಟೆಂಬರ್ 2024, 14:29 IST
ಫಾಲೋ ಮಾಡಿ
Comments
ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ವೈಭವೋಪೇತವಾಗಿ ನಡೆಯುತ್ತಿರುವುದಕ್ಕೆ ಮುಖ್ಯ ಕಾರಣ ಕ್ಷೇತ್ರದ ಭಕ್ತಾದಿಗಳು. ಶ್ರೀ ಗೋಕರ್ಣನಾಥೇಶ್ವರ ದೇವರ ಆಶೀರ್ವಾದದಿಂದ ಇದೆಲ್ಲವೂ ಸಾಧ್ಯವಾಗಿದೆ
ಬಿ.ಜನಾರ್ದನ ಪೂಜಾರಿ ಶ್ರಿಗೋಕರ್ಣನಾಥೇಶ್ವರ ಕ್ಷೇತ್ರದ ಅಭಿವೃದ್ಧಿಯ ರೂವಾರಿ
‘ದಸರಾ ಶೋಭಾಯಾತ್ರೆ 13ರಂದು’‌
ಇದೇ 13ರಂದು ಸಂಜೆ 4ರಿಂದ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಹಾಗಣಪತಿ ನವದುರ್ಗೆಯರು ಹಾಗೂ ಶ್ರೀಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಚೆಂಡೆ ವಾದನ ರಾಜ್ಯದ ನಾನಾ ಕಡೆಯ ಜಾನಪದ ಸಾಂಸ್ಕೃತಿಕ ಕಲಾ ತಂಡಗಳು ಟ್ಯಾಬ್ಲೊಗಳು ಹುಲಿವೇಷಗಳು ಭಾಗವಹಿಸಲಿವೆ. ಇದೇ 14ರಂದು ಮುಂಜಾನೆ ಮಂಟಪ ಪೂಜೆ ಬಳಿಕ ಮೂರ್ತಿಗಳ ವಿಸರ್ಜನೆ ನಡೆಯಲಿದೆ ಎಂದು ಎಚ್.ಎಸ್. ಸಾಯಿರಾಂ ತಿಳಿಸಿದರು. ‘ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೊಗಳಲ್ಲಿ ಧ್ವನಿವರ್ಧಕವನ್ನು ಬೇಕಾಬಿಟ್ಟಿ ಬಳಸುವಂತಿಲ್ಲ. ಆರು ಡಿ.ಜೆ/ ವೂಫರ್‌ಗಳನ್ನು ಮಾತ್ರ ಬಳಸಬಹುದು. ಶೋಭಾಯಾತ್ರೆಯು ಶಿಸ್ತುಬದ್ಧವಾಗಿರುವಂತೆ ಎಚ್ಚರವಹಿಸಬೇಕು. ಕ್ಷೇತ್ರದ ಘನತೆಗೆ ಕುಂದು ಉಂಟುಮಾಡುವಂತಹ ಪ್ರದರ್ಶನಗಳಿಗೆ ಅವಕಾಶವಿಲ್ಲ. ಎಲ್ಲರೂ ಇದಕ್ಕೆ ಸಹಕರಿಸಬೇಕು’ ಎಂದು ಪದ್ಮರಾಜ್‌ ಕೋರಿದರು.  ‘ದಸರಾದಲ್ಲಿ ದೇಶ-ವಿದೇಶದ ಪ್ರವಾಸಿಗರು ಭಾಗವಹಿಸುವ ನಿರೀಕ್ಷೆ ಇದೆ. ಭಕ್ತಾದಿಗಳ ಭದ್ರತೆ ಬಗ್ಗೆ ಪೊಲೀಸ್‌ ಇಲಾಖೆ ಜೊತೆಯೂ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.  
ಹಾಫ್ ಮ್ಯರಥಾನ್‌ 6ರಂದು 
‘ಮಂಗಳೂರು ದಸರಾ ಅಂಗವಾಗಿ ಇದೇ 6ರಂದು ಬೆಳಿಗ್ಗೆ 5.30ರಿಂದ ಹಾಫ್ ಮ್ಯಾರಥಾನ್ ನಡೆಯಲಿದ್ದು 2 ಸಾವಿರಕ್ಕೂ ಅಧಿಕ ಮಂದಿ  ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಪ್ರತಿವರ್ಷವೂ ಹಾಫ್ ಮ್ಯಾರಥಾನ್‌ ಹಮ್ಮಿಕೊಳ್ಳಲಿದ್ದೇವೆ. 5 ಕಿ.ಮೀ ವರೆಗಿನ ಓಟದಲ್ಲಿ ಭಾಗವಹಿಸುವವರಿಗೆ ಶುಲ್ಕವಿಲ್ಲ. ಅದಕ್ಕಿಂತ ಹೆಚ್ಚು ದೂರದ ಓಟಗಳಿಗೆ ಪ್ರವೇಶ ಶುಲ್ಕವಿದೆ. ದೇಶದ ನಾನಾ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ’ ಎಂದು ಪದ್ಮರಾಜ್ ಆರ್‌. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT