‘ದಸರಾ ಶೋಭಾಯಾತ್ರೆ 13ರಂದು’
ಇದೇ 13ರಂದು ಸಂಜೆ 4ರಿಂದ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಹಾಗಣಪತಿ ನವದುರ್ಗೆಯರು ಹಾಗೂ ಶ್ರೀಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಚೆಂಡೆ ವಾದನ ರಾಜ್ಯದ ನಾನಾ ಕಡೆಯ ಜಾನಪದ ಸಾಂಸ್ಕೃತಿಕ ಕಲಾ ತಂಡಗಳು ಟ್ಯಾಬ್ಲೊಗಳು ಹುಲಿವೇಷಗಳು ಭಾಗವಹಿಸಲಿವೆ. ಇದೇ 14ರಂದು ಮುಂಜಾನೆ ಮಂಟಪ ಪೂಜೆ ಬಳಿಕ ಮೂರ್ತಿಗಳ ವಿಸರ್ಜನೆ ನಡೆಯಲಿದೆ ಎಂದು ಎಚ್.ಎಸ್. ಸಾಯಿರಾಂ ತಿಳಿಸಿದರು. ‘ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಟ್ಯಾಬ್ಲೊಗಳಲ್ಲಿ ಧ್ವನಿವರ್ಧಕವನ್ನು ಬೇಕಾಬಿಟ್ಟಿ ಬಳಸುವಂತಿಲ್ಲ. ಆರು ಡಿ.ಜೆ/ ವೂಫರ್ಗಳನ್ನು ಮಾತ್ರ ಬಳಸಬಹುದು. ಶೋಭಾಯಾತ್ರೆಯು ಶಿಸ್ತುಬದ್ಧವಾಗಿರುವಂತೆ ಎಚ್ಚರವಹಿಸಬೇಕು. ಕ್ಷೇತ್ರದ ಘನತೆಗೆ ಕುಂದು ಉಂಟುಮಾಡುವಂತಹ ಪ್ರದರ್ಶನಗಳಿಗೆ ಅವಕಾಶವಿಲ್ಲ. ಎಲ್ಲರೂ ಇದಕ್ಕೆ ಸಹಕರಿಸಬೇಕು’ ಎಂದು ಪದ್ಮರಾಜ್ ಕೋರಿದರು. ‘ದಸರಾದಲ್ಲಿ ದೇಶ-ವಿದೇಶದ ಪ್ರವಾಸಿಗರು ಭಾಗವಹಿಸುವ ನಿರೀಕ್ಷೆ ಇದೆ. ಭಕ್ತಾದಿಗಳ ಭದ್ರತೆ ಬಗ್ಗೆ ಪೊಲೀಸ್ ಇಲಾಖೆ ಜೊತೆಯೂ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.