<p><strong>ಪುತ್ತೂರು:</strong> ‘ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಈ ಬಾರಿಯ ಬಜೆಟ್ನಲ್ಲಿ ಪ್ರಸ್ತಾವನೆ ಆಗಿದೆ. ನಾನು ಶಾಸಕಿಯಾಗಿದ್ದ ಅವಧಿಯಲ್ಲಿ ಹಾಕಿದ ಬೀಜ ಇಂದು ಮೊಳಕೆ ಒಡೆಯಲಾರಂಭಿಸಿದೆ. ಬಜೆಟ್ನಲ್ಲಿ ಒಂದು ಬಾರಿ ಪ್ರಸ್ತಾಪವಾದರೆ ಅದು ಜಾರಿಯಾಗುತ್ತದೆ. ಮೆಡಿಕಲ್ ಕಾಲೇಜು ನಿರ್ಮಾಣವಾಗುವಾಗ ಪುತ್ತೂರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ’ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.</p>.<p>ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಿಂತಲೂ ಪುತ್ತೂರು ಜಿಲ್ಲೆ ಆಗಬೇಕೆಂಬ ಹೋರಾಟ ನಡೆಯುತ್ತಿತ್ತು. ಆಗ ನಾನೂ ಜಿಲ್ಲೆ ಆಗಬೇಕೆಂದು ಹೋರಾಟಕ್ಕೆ ಇಳಿದಿದ್ದೆ. ಆ ಸಂದರ್ಭದಲ್ಲಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಸ್ಥಾಪಿಸುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದರು. ಆಗ ನಾನು ಜಿಲ್ಲೆಯ ಬದಲು ಮೆಡಿಕಲ್ ಕಾಲೇಜು ಪುತ್ತೂರಿಗೆ ನೀಡುವ ಕುರಿತು ಮುಖ್ಯಮಂತ್ರಿ ಅವರಲ್ಲಿ ಬೇಡಿಕೆಯಿಟ್ಟಿದ್ದೆ. ನಿಮ್ಮ ಕ್ಷೇತ್ರದಲ್ಲಿ 8 ಮೆಡಿಕಲ್ ಕಾಲೇಜು ಇದೆ. ಅದರ ನಡುವೆ ಇನ್ನೊಂದು ಮೆಡಿಕಲ್ ಕಾಲೇಜು ಯಾಕೆ. ಈಗ ಮೊದಲು ಒಂದೇ ಒಂದು ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲೆಗೆ ಕೊಡುತ್ತೇನೆ. ನಿನ್ನ ಕ್ಷೇತ್ರಕ್ಕೂ ಕೊಡುತ್ತೇನೆ. ನೀನು ಮೊದಲು ಜಾಗ ಹುಡುಕಿ ಇಡು ಎಂದು ಹೇಳಿದ್ದರು’ ಎಂದರು.</p>.<p>ಮೆಡಿಕಲ್ ಕಾಲೇಜಿಗೆ 40 ಎಕರೆ ಹುಡುಕಾಟ ಆರಂಭಿಸಿದ ಸಮಯ ಯಾರೂ ಜಾಗ ಕೊಡಲು ಮುಂದೆ ಬರಲಿಲ್ಲ. ಈ ಸಂದರ್ಭ ವಿಶ್ವನಾಥ ನಾಯಕ್ ಮತ್ತು ಕೌಶಲಪ್ರಸಾದ್ ಅವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗ ಹುಡುಕುತ್ತಿದ್ದರು. ನಾನು ಡಿಪ್ಲೊಮಾ ಕಾಲೇಜು ಮಾಡುವ ಕುರಿತು ಪ್ರಸ್ತಾಪಿಸಿದಾಗ ಮುರಳೀಧರ ರೈ ಮಠಂತಬೆಟ್ಟು ಅವರು ನಮ್ಮಲ್ಲಿ ಜಾಗ ಇದೆ ಎಂದಿದ್ದರು. ಆ ವೇಳೆ ಬನ್ನೂರು ವಿ.ಎ ಅವರು ಸೇಡಿಯಾಪು ಎಂಬಲ್ಲಿ 50 ಎಕರೆ ಕುಮ್ಕಿ ಜಾಗ ಇದೆ ಎಂದು ಹೇಳಿದ್ದರು. ಸೇಡಿಯಾಪು ಜನಾರ್ದನ ಭಟ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೆ ಎಂದರು.</p>.<p>ಬಳಿಕ ಜನಾರ್ದನ ಭಟ್, ವಿಷ್ಣುಪ್ರಸನ್ನ ಹಾಗೂ ಸಹೋದರರು ಮೆಡಿಕಲ್ ಕಾಲೇಜಿಗಾಗಿ ಜಾಗ ಬಿಟ್ಟು ಕೊಡಲು ಒಪ್ಪಿಗೆ ನೀಡಿದ್ದರು. ಆ ಬಳಿಕ ನಾನು ನೇರವಾಗಿ ಆಗಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಲ್ಲಿಗೆ 2015ರ ಆ.24ರಂದು ತೆರಳಿ 40 ಎಕರೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಶೈಕ್ಷಣಿಕ ಉದ್ದೇಶಕ್ಕಾಗಿ ಕಾದಿರಿಸಿ, ಪಹಣಿ ಪತ್ರ ಮಾಡಿಸಿದ್ದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು:</strong> ‘ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಈ ಬಾರಿಯ ಬಜೆಟ್ನಲ್ಲಿ ಪ್ರಸ್ತಾವನೆ ಆಗಿದೆ. ನಾನು ಶಾಸಕಿಯಾಗಿದ್ದ ಅವಧಿಯಲ್ಲಿ ಹಾಕಿದ ಬೀಜ ಇಂದು ಮೊಳಕೆ ಒಡೆಯಲಾರಂಭಿಸಿದೆ. ಬಜೆಟ್ನಲ್ಲಿ ಒಂದು ಬಾರಿ ಪ್ರಸ್ತಾಪವಾದರೆ ಅದು ಜಾರಿಯಾಗುತ್ತದೆ. ಮೆಡಿಕಲ್ ಕಾಲೇಜು ನಿರ್ಮಾಣವಾಗುವಾಗ ಪುತ್ತೂರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ’ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.</p>.<p>ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಿಂತಲೂ ಪುತ್ತೂರು ಜಿಲ್ಲೆ ಆಗಬೇಕೆಂಬ ಹೋರಾಟ ನಡೆಯುತ್ತಿತ್ತು. ಆಗ ನಾನೂ ಜಿಲ್ಲೆ ಆಗಬೇಕೆಂದು ಹೋರಾಟಕ್ಕೆ ಇಳಿದಿದ್ದೆ. ಆ ಸಂದರ್ಭದಲ್ಲಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಸ್ಥಾಪಿಸುವ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದರು. ಆಗ ನಾನು ಜಿಲ್ಲೆಯ ಬದಲು ಮೆಡಿಕಲ್ ಕಾಲೇಜು ಪುತ್ತೂರಿಗೆ ನೀಡುವ ಕುರಿತು ಮುಖ್ಯಮಂತ್ರಿ ಅವರಲ್ಲಿ ಬೇಡಿಕೆಯಿಟ್ಟಿದ್ದೆ. ನಿಮ್ಮ ಕ್ಷೇತ್ರದಲ್ಲಿ 8 ಮೆಡಿಕಲ್ ಕಾಲೇಜು ಇದೆ. ಅದರ ನಡುವೆ ಇನ್ನೊಂದು ಮೆಡಿಕಲ್ ಕಾಲೇಜು ಯಾಕೆ. ಈಗ ಮೊದಲು ಒಂದೇ ಒಂದು ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲೆಗೆ ಕೊಡುತ್ತೇನೆ. ನಿನ್ನ ಕ್ಷೇತ್ರಕ್ಕೂ ಕೊಡುತ್ತೇನೆ. ನೀನು ಮೊದಲು ಜಾಗ ಹುಡುಕಿ ಇಡು ಎಂದು ಹೇಳಿದ್ದರು’ ಎಂದರು.</p>.<p>ಮೆಡಿಕಲ್ ಕಾಲೇಜಿಗೆ 40 ಎಕರೆ ಹುಡುಕಾಟ ಆರಂಭಿಸಿದ ಸಮಯ ಯಾರೂ ಜಾಗ ಕೊಡಲು ಮುಂದೆ ಬರಲಿಲ್ಲ. ಈ ಸಂದರ್ಭ ವಿಶ್ವನಾಥ ನಾಯಕ್ ಮತ್ತು ಕೌಶಲಪ್ರಸಾದ್ ಅವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗ ಹುಡುಕುತ್ತಿದ್ದರು. ನಾನು ಡಿಪ್ಲೊಮಾ ಕಾಲೇಜು ಮಾಡುವ ಕುರಿತು ಪ್ರಸ್ತಾಪಿಸಿದಾಗ ಮುರಳೀಧರ ರೈ ಮಠಂತಬೆಟ್ಟು ಅವರು ನಮ್ಮಲ್ಲಿ ಜಾಗ ಇದೆ ಎಂದಿದ್ದರು. ಆ ವೇಳೆ ಬನ್ನೂರು ವಿ.ಎ ಅವರು ಸೇಡಿಯಾಪು ಎಂಬಲ್ಲಿ 50 ಎಕರೆ ಕುಮ್ಕಿ ಜಾಗ ಇದೆ ಎಂದು ಹೇಳಿದ್ದರು. ಸೇಡಿಯಾಪು ಜನಾರ್ದನ ಭಟ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೆ ಎಂದರು.</p>.<p>ಬಳಿಕ ಜನಾರ್ದನ ಭಟ್, ವಿಷ್ಣುಪ್ರಸನ್ನ ಹಾಗೂ ಸಹೋದರರು ಮೆಡಿಕಲ್ ಕಾಲೇಜಿಗಾಗಿ ಜಾಗ ಬಿಟ್ಟು ಕೊಡಲು ಒಪ್ಪಿಗೆ ನೀಡಿದ್ದರು. ಆ ಬಳಿಕ ನಾನು ನೇರವಾಗಿ ಆಗಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಲ್ಲಿಗೆ 2015ರ ಆ.24ರಂದು ತೆರಳಿ 40 ಎಕರೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಶೈಕ್ಷಣಿಕ ಉದ್ದೇಶಕ್ಕಾಗಿ ಕಾದಿರಿಸಿ, ಪಹಣಿ ಪತ್ರ ಮಾಡಿಸಿದ್ದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>