<p><strong>ಮಂಗಳೂರು</strong>: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಬೆಳ್ಚಾಡ, ಮಲೆಯಾಳಿ ಬಿಲ್ಲವ ಸಮುದಾಯಕ್ಕೆ ಸೇರಿದವರು ಒಂಬತ್ತನೇ ಕಾಲಂನಲ್ಲಿ ‘ತೀಯಾ’ ಎಂದೇ ನಮೂದಿಸಬೇಕು’ ಎಂದು ಭಾರತೀಯ ತೀಯಾ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು, ಸಮುದಾಯದವರು ಹಿಂದೆ ಮಾಡಿದಂತೆ ತಪ್ಪು ಮಾಡಬಾರದು. ಸಮೀಕ್ಷೆಗೆ ಬರುವವರು ಸರಿಯಾಗಿ ಜಾತಿ ನಮೂದಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಸರ್ಕಾರಿ ಸೌಲಭ್ಯಗಳಿಗಾಗಿ ರಾಜ್ಯದಲ್ಲಿರುವ 4 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ತೀಯಾ ಸಮಾಜದವರು ಜನಬಲ ತೋರಿಸಬೇಕಿದೆ’ ಎಂದು ತಿಳಿಸಿದರು. </p>.<p>ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಮುಖಂಡರಾದ ರಾಜ್ಗೋಪಾಲ್, ದಿನೇಶ್ ಕುಂಪಲ, ಚಿದಾನಂದ ಗುರಿಕಾರ, ಉಮೇಶ್, ಸುರೇಶ್ ಭಟ್ನಗರ, ವಿಶ್ವನಾಥ, ಪ್ರೇಮ್ಚಂದ್, ಜಯಂತ್ ಕೊಂಡಾಣ, ರಾಕೇಶ್, ಮೋನಪ್ಪ ಮಜಿ, ಸರಳಾ ನಾಗೇಶ್, ಸುಕೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಬೆಳ್ಚಾಡ, ಮಲೆಯಾಳಿ ಬಿಲ್ಲವ ಸಮುದಾಯಕ್ಕೆ ಸೇರಿದವರು ಒಂಬತ್ತನೇ ಕಾಲಂನಲ್ಲಿ ‘ತೀಯಾ’ ಎಂದೇ ನಮೂದಿಸಬೇಕು’ ಎಂದು ಭಾರತೀಯ ತೀಯಾ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.</p>.<p>ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು, ಸಮುದಾಯದವರು ಹಿಂದೆ ಮಾಡಿದಂತೆ ತಪ್ಪು ಮಾಡಬಾರದು. ಸಮೀಕ್ಷೆಗೆ ಬರುವವರು ಸರಿಯಾಗಿ ಜಾತಿ ನಮೂದಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಸರ್ಕಾರಿ ಸೌಲಭ್ಯಗಳಿಗಾಗಿ ರಾಜ್ಯದಲ್ಲಿರುವ 4 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ತೀಯಾ ಸಮಾಜದವರು ಜನಬಲ ತೋರಿಸಬೇಕಿದೆ’ ಎಂದು ತಿಳಿಸಿದರು. </p>.<p>ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ, ಮುಖಂಡರಾದ ರಾಜ್ಗೋಪಾಲ್, ದಿನೇಶ್ ಕುಂಪಲ, ಚಿದಾನಂದ ಗುರಿಕಾರ, ಉಮೇಶ್, ಸುರೇಶ್ ಭಟ್ನಗರ, ವಿಶ್ವನಾಥ, ಪ್ರೇಮ್ಚಂದ್, ಜಯಂತ್ ಕೊಂಡಾಣ, ರಾಕೇಶ್, ಮೋನಪ್ಪ ಮಜಿ, ಸರಳಾ ನಾಗೇಶ್, ಸುಕೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>