<p><strong>ಉಜಿರೆ</strong>: ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಹಲವು ವರ್ಷಗಳಿಂದ ವಾಸ್ತವ್ಯ ಇದ್ದ ಒ.ಪಿ.ಜಾರ್ಜ್ ಎಂಬುವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ತೆರವು ಮಾಡಿ ಗಿಡ ನೆಟ್ಟ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮಾಹಿತಿ ಪಡೆದರು.</p>.<p>ಈ ಸಂಬಂಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ಪಡೆಯಲು ಸಹಕರಿಸುವುದಾಗಿ ಭರವಸೆ ನೀಡಿದರು.</p>.<p>ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಶಾಸಕ, 184 ಸರ್ವೆ ನಂಬರ್ ಜಾಗದಲ್ಲಿ ವಾಸ್ತವ್ಯ ಇರುವವರೆಲ್ಲರೂ ಒಟ್ಟಾಗಿ ತಮ್ಮ ದಾಖಲೆಗಳನ್ನು ನೀಡಿ. ಈ ಬಗ್ಯೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಆದೇಶ ಪಡೆಯಲು ಅವಕಾಶವಿದೆ. ಇದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.</p>.<p>ಶಿಬಾಜೆಯ ಮುಖಂಡರಾದ ರತೀಶ್ ಬಿ., ವಿನಯಚಂದ್ರ ಜತೆಗಿದ್ದರು.</p>.<p>ಚಿನ್ನಾಭರಣ ಕಳವು</p>.<p>ಉಜಿರೆ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರ ನಿವಾಸಿ ಅವಿನಾಶ್ ಎಂಬುವರ ಮನೆಯ ಬೀಗ ಒಡೆದು, ಸುಮಾರು ₹9.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.</p>.<p>ಮನೆಯವರೆಲ್ಲ ಅ.2ರಂದು ಮನೆಗೆ ಬೀಗ ಹಾಕಿ ಹೋಗಿದ್ದು ಅ.6ರಂದು ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ.</p>.<p>ಕಪಾಟಿನಲ್ಲಿಟ್ಟಿದ್ದ ಎರಡು ಎಳೆಯ ಚಿನ್ನದ ಕರಿಮಣಿಸರ, ಮುತ್ತಿನಹಾರ, ಬ್ರಾಸ್ಲೆಟ್, ಮಕ್ಕಳ ಎರಡು ಸರಗಳು, ಮೂರು ಚಿನ್ನದ ಉಂಗುರ ಸೇರಿ 149 ಗ್ರಾಂ. ಚಿನ್ನಾಭರಣ ಕಳವಾಗಿದೆ. ಅವಿನಾಶ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ನೆರಿಯ: ಮನೆ ಬೆಂಕಿಗಾಹುತಿ</p>.<p>ಉಜಿರೆ: ನೆರಿಯ ಗ್ರಾಮದ ನಿವಾಸಿ ಹರೀಶ್ ಎಂಬುವರ ಮನೆಗೆ ಸೋಮವಾರ ರಾತ್ರಿ ಬೆಂಕಿ ತಗುಲಿ ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ.</p>.<p>ಮನೆಯವರೆಲ್ಲ ಬೇರೆ ಕಡೆ ಹೋಗಿದ್ದಾಗ ಅವಘಡ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಕಿರಣ್ಚಂದ್ರ ಪುಷ್ಪಗಿರಿ ಅವರು ಹಾನಿಯಾದ ಮನೆಯ ಕುಟುಂಬದವರಿಗೆ ₹ 25 ಸಾವಿರ ನೆರವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಜಿರೆ</strong>: ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಗ್ರಾಮದ ಅರಂಪಾದೆ ಎಂಬಲ್ಲಿ ಹಲವು ವರ್ಷಗಳಿಂದ ವಾಸ್ತವ್ಯ ಇದ್ದ ಒ.ಪಿ.ಜಾರ್ಜ್ ಎಂಬುವರ ರಬ್ಬರ್ ಕೃಷಿ ತೋಟವನ್ನು ಅರಣ್ಯ ಇಲಾಖೆಯವರು ತೆರವು ಮಾಡಿ ಗಿಡ ನೆಟ್ಟ ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಮಾಹಿತಿ ಪಡೆದರು.</p>.<p>ಈ ಸಂಬಂಧ ನ್ಯಾಯಾಲಯದ ಮೂಲಕ ತಡೆಯಾಜ್ಞೆ ಪಡೆಯಲು ಸಹಕರಿಸುವುದಾಗಿ ಭರವಸೆ ನೀಡಿದರು.</p>.<p>ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ಶಾಸಕ, 184 ಸರ್ವೆ ನಂಬರ್ ಜಾಗದಲ್ಲಿ ವಾಸ್ತವ್ಯ ಇರುವವರೆಲ್ಲರೂ ಒಟ್ಟಾಗಿ ತಮ್ಮ ದಾಖಲೆಗಳನ್ನು ನೀಡಿ. ಈ ಬಗ್ಯೆ ಹೈಕೋರ್ಟ್ನಲ್ಲಿ ತಡೆಯಾಜ್ಞೆ ಆದೇಶ ಪಡೆಯಲು ಅವಕಾಶವಿದೆ. ಇದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.</p>.<p>ಶಿಬಾಜೆಯ ಮುಖಂಡರಾದ ರತೀಶ್ ಬಿ., ವಿನಯಚಂದ್ರ ಜತೆಗಿದ್ದರು.</p>.<p>ಚಿನ್ನಾಭರಣ ಕಳವು</p>.<p>ಉಜಿರೆ: ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ಲೂರು ಗ್ರಾಮದ ಮಂಜುಶ್ರೀನಗರ ನಿವಾಸಿ ಅವಿನಾಶ್ ಎಂಬುವರ ಮನೆಯ ಬೀಗ ಒಡೆದು, ಸುಮಾರು ₹9.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.</p>.<p>ಮನೆಯವರೆಲ್ಲ ಅ.2ರಂದು ಮನೆಗೆ ಬೀಗ ಹಾಕಿ ಹೋಗಿದ್ದು ಅ.6ರಂದು ಬಂದು ನೋಡಿದಾಗ ಕಳವಾಗಿರುವುದು ಗೊತ್ತಾಗಿದೆ.</p>.<p>ಕಪಾಟಿನಲ್ಲಿಟ್ಟಿದ್ದ ಎರಡು ಎಳೆಯ ಚಿನ್ನದ ಕರಿಮಣಿಸರ, ಮುತ್ತಿನಹಾರ, ಬ್ರಾಸ್ಲೆಟ್, ಮಕ್ಕಳ ಎರಡು ಸರಗಳು, ಮೂರು ಚಿನ್ನದ ಉಂಗುರ ಸೇರಿ 149 ಗ್ರಾಂ. ಚಿನ್ನಾಭರಣ ಕಳವಾಗಿದೆ. ಅವಿನಾಶ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.</p>.<p>ನೆರಿಯ: ಮನೆ ಬೆಂಕಿಗಾಹುತಿ</p>.<p>ಉಜಿರೆ: ನೆರಿಯ ಗ್ರಾಮದ ನಿವಾಸಿ ಹರೀಶ್ ಎಂಬುವರ ಮನೆಗೆ ಸೋಮವಾರ ರಾತ್ರಿ ಬೆಂಕಿ ತಗುಲಿ ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ.</p>.<p>ಮನೆಯವರೆಲ್ಲ ಬೇರೆ ಕಡೆ ಹೋಗಿದ್ದಾಗ ಅವಘಡ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಕಿರಣ್ಚಂದ್ರ ಪುಷ್ಪಗಿರಿ ಅವರು ಹಾನಿಯಾದ ಮನೆಯ ಕುಟುಂಬದವರಿಗೆ ₹ 25 ಸಾವಿರ ನೆರವು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>