<p>ಪುಣೆ: ಮುಂಬರುವ ರಣಜಿ ಟ್ರೋಫಿಗಾಗಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ ತಮ್ಮ ಮಾಜಿ ಸಹ ಆಟಗಾರ ಮುಂಬೈನ ಮುಶೀರ್ ಖಾನ್ ವಿರುದ್ಧ ವಾಗ್ವಾದ ನಡೆಸಿ ಅವರ ಮೇಲೆ ಬ್ಯಾಟ್ ಬೀಸಿರುವ ಘಟನೆ ಮಂಗಳವಾರ ನಡೆದಿದೆ.</p><p>ರಣಜಿ ಟ್ರೋಫಿ 2025-26ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ. ಹೀಗಾಗಿ ಮುಂಬೈನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ 3 ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ.</p><p>ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ 181 ರನ್ ಬಾರಿಸಿ ಮುಶೀರ್ ಖಾನ್ ಬೌಲಿಂಗ್ನಲ್ಲಿ ಔಟ್ ಆಗುತ್ತಾರೆ.</p><p><strong>ನಡೆದಿದ್ದೇನು?</strong></p><p>ಕ್ರೀಸ್ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುಶೀರ್ ಖಾನ್ ಟಾಟಾ ಎಂದು ಸನ್ನೆ ಮಾಡಿ ವಿದಾಯ ಹೇಳಿ ಸಂಭ್ರಮಾಚರಣೆ ಮಾಡಿದರು. ಇದು ಪೃಥ್ವಿ ಶಾ ಅವರನ್ನು ಕೋಪಗೊಳ್ಳುವಂತೆ ಮಾಡುತ್ತದೆ.</p><p>ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಔಟ್ ಆಗಿ ಪೆವಿಲಿಯನ್ನತ್ತ ಹೋಗುವಾಗ ಶಾ ಹಲವು ಆಟಗಾರರೊಂದಿಗೆ ವಾಗ್ವಾದ ನಡೆಸುತ್ತಿರುವುದು ಹಾಗೂ ಮುಶೀರ್ ಖಾನ್ ಕಡೆಗೆ ಬ್ಯಾಟ್ ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. </p>. <p>ಬಳಿಕ ಮಧ್ಯೆ ಪ್ರವೇಶಿಸಿದ ಅಂಪೈರ್ಗಳು ಉಭಯ ಆಟಗಾರರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಇದಾದ ಬಳಿಕವೂ ಮುಂಬೈನ ಆಟಗಾರ ಸಿದ್ಧೇಶ್ ಲಾಡ್ ಪೃಥ್ವಿ ಶಾ ಪೆವಿಲಿಯನ್ಗೆ ಹಿಂತಿರುಗುವಾಗ ಅವರನ್ನು ಹಿಂಬಾಲಿಸಿ ಹೋಗುವುದನ್ನು ಕಾಣಬಹುದು.</p><p>ಪೃಥ್ವಿ ಶಾ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲನೇ ದಿನ 220 ಎಸೆತಗಳನ್ನು ಎದುರಿಸಿದ 21 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 181 ರನ್ ಬಾರಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುಣೆ: ಮುಂಬರುವ ರಣಜಿ ಟ್ರೋಫಿಗಾಗಿ ಅಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ ತಮ್ಮ ಮಾಜಿ ಸಹ ಆಟಗಾರ ಮುಂಬೈನ ಮುಶೀರ್ ಖಾನ್ ವಿರುದ್ಧ ವಾಗ್ವಾದ ನಡೆಸಿ ಅವರ ಮೇಲೆ ಬ್ಯಾಟ್ ಬೀಸಿರುವ ಘಟನೆ ಮಂಗಳವಾರ ನಡೆದಿದೆ.</p><p>ರಣಜಿ ಟ್ರೋಫಿ 2025-26ನೇ ಆವೃತ್ತಿ ಸದ್ಯದಲ್ಲೇ ಆರಂಭವಾಗಲಿದೆ. ಹೀಗಾಗಿ ಮುಂಬೈನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ 3 ದಿನಗಳ ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ.</p><p>ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಪರ ಆಡುತ್ತಿರುವ ಪೃಥ್ವಿ ಶಾ 181 ರನ್ ಬಾರಿಸಿ ಮುಶೀರ್ ಖಾನ್ ಬೌಲಿಂಗ್ನಲ್ಲಿ ಔಟ್ ಆಗುತ್ತಾರೆ.</p><p><strong>ನಡೆದಿದ್ದೇನು?</strong></p><p>ಕ್ರೀಸ್ನಿಂದ ತೆರಳುತ್ತಿದ್ದ ಪೃಥ್ವಿ ಶಾ ಅವರಿಗೆ ಮುಶೀರ್ ಖಾನ್ ಟಾಟಾ ಎಂದು ಸನ್ನೆ ಮಾಡಿ ವಿದಾಯ ಹೇಳಿ ಸಂಭ್ರಮಾಚರಣೆ ಮಾಡಿದರು. ಇದು ಪೃಥ್ವಿ ಶಾ ಅವರನ್ನು ಕೋಪಗೊಳ್ಳುವಂತೆ ಮಾಡುತ್ತದೆ.</p><p>ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಔಟ್ ಆಗಿ ಪೆವಿಲಿಯನ್ನತ್ತ ಹೋಗುವಾಗ ಶಾ ಹಲವು ಆಟಗಾರರೊಂದಿಗೆ ವಾಗ್ವಾದ ನಡೆಸುತ್ತಿರುವುದು ಹಾಗೂ ಮುಶೀರ್ ಖಾನ್ ಕಡೆಗೆ ಬ್ಯಾಟ್ ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿದೆ. </p>. <p>ಬಳಿಕ ಮಧ್ಯೆ ಪ್ರವೇಶಿಸಿದ ಅಂಪೈರ್ಗಳು ಉಭಯ ಆಟಗಾರರನ್ನು ಸಮಾಧಾನಪಡಿಸಲು ಮುಂದಾಗುತ್ತಾರೆ. ಇದಾದ ಬಳಿಕವೂ ಮುಂಬೈನ ಆಟಗಾರ ಸಿದ್ಧೇಶ್ ಲಾಡ್ ಪೃಥ್ವಿ ಶಾ ಪೆವಿಲಿಯನ್ಗೆ ಹಿಂತಿರುಗುವಾಗ ಅವರನ್ನು ಹಿಂಬಾಲಿಸಿ ಹೋಗುವುದನ್ನು ಕಾಣಬಹುದು.</p><p>ಪೃಥ್ವಿ ಶಾ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲನೇ ದಿನ 220 ಎಸೆತಗಳನ್ನು ಎದುರಿಸಿದ 21 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 181 ರನ್ ಬಾರಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>