ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾಯ್ತು ಕೊಲೆ ರಹಸ್ಯ: ಸಾಲ ಮರಳಿಸುವಂತೆ ಕೇಳಿದ್ದಕ್ಕೆ ಹತ್ಯೆ

ಪ್ರಕರಣ ಭೇದಿಸಿದ ಪೊಲೀಸರು
Last Updated 15 ಮೇ 2019, 7:06 IST
ಅಕ್ಷರ ಗಾತ್ರ

ಮಂಗಳೂರು: ಭಾನುವಾರ ನಗರದ ಪತ್ತೆಯಾಗಿದ್ದ ಮಹಿಳೆಯ ಭೀಕರ ಕೊಲೆ ಪ್ರಕರಣ ಭೇದಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶ್ರೀಮತಿ‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಟರ್ ಪೇಟೆಯ ಜೋನಸ್ ಸ್ಯಾಮ್ಸನ್ ಹಾಗೂ ಆತನ ಪತ್ನಿ ವಿಕ್ಟೋರಿಯಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ಭೀತಿಯಿಂದ ಜೋನಸ್ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಫಾದರ್‌ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಆರೋಪಿ ಜೋನಸ್, ಶ್ರೀಮತಿ‌ ಶೆಟ್ಟಿ ಅವರಿಂದ ₹1ಲಕ್ಷ ಸಾಲ ಪಡೆದಿದ್ದ. ಅದರಲ್ಲಿ‌ ಇನ್ನೂ ₹60 ಸಾವಿರ ಕೊಡಬೇಕಿತ್ತು.
ಶನಿವಾರ ಶ್ರೀಮತಿ‌ ಶೆಟ್ಟಿ‌ ಅವರು ಜೋನಸ್ ಮನೆಗೆ ತೆರಳಿ ಹಣ ಕೊಡುವಂತೆ‌ ಕೇಳಿದ್ದರು. ಆದರೆ, ಹಣ ಹಿಂದಿರುಗಿಸಲು ಆಗದ ಜೋನಸ್, ಶ್ರೀಮತಿ‌ ಶೆಟ್ಟಿಯನ್ನು ಮನೆಯಲ್ಲಿಯೇ ಹೊಡೆದು ಕೊಲೆ ಮಾಡಿದ್ದ. ಇಡೀ ದಿನ ಶವ ಆತನ ಮನೆಯಲ್ಲಿಯೇ ಇತ್ತು. ರಾತ್ರಿ ಶವವನ್ನು ತುಂಡರಿಸಿ, ನಗರದ ಬೇರೆ ಬೇರೆ ಭಾಗಗಳಲ್ಲಿ ಹಾಕಿದ್ದ.

ಇದೀಗ ಕೃತ್ಯಕ್ಕೆ ಜೋನಸ್ ಬಳಸಿದ್ದ ದ್ವಿಚಕ್ರ‌ವಾಹನ ಹಾಗೂ ಕೊಲೆಯಾದ ಶ್ರೀಮತಿ‌ ಶೆಟ್ಟಿ‌ ಮೈಮೇಲಿದ್ದ ಚಿನ್ನದ‌ ಸರ ಹಾಗೂ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ ತಿಳಿಸಿದರು.

ಜೋನಸ್ ಪತ್ನಿ ವಿಕ್ಟೋರಿಯಾ ಕೂಡ ಕೊಲೆಯಾದ ಸಂದರ್ಭದಲ್ಲಿ‌ ಮನೆಯಲ್ಲಿಯೇ ಇದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT