<p>ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಪಾಲಿಕೆ ಹಸಿಕಸದಿಂದ ಸಿಎನ್ಜಿ ತಯಾರಿಸುವ ಮೂಲಕ ಕಸವು ವ್ಯರ್ಥ ಪದಾರ್ಥ ವಲ್ಲ. ಅದರಿಂದ ವರಮಾನವನ್ನೂ ಗಳಿಸಬಹುದು, ಇಂಧನ ವೆಚ್ಚವನ್ನೂ ಉಳಿಸಬಹುದು ಎಂದು ತೋರಿಸಿಕೊಟ್ಟಿದೆ. ಬಯೋಗ್ಯಾಸ್ ಯೋಜನೆಯಡಿ ಪುತ್ತೂರಿನ ಹೊರವಲಯದ ಬನ್ನೂರಿನಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಳೀಯ ರೋಟರಿ ಕ್ಲಬ್ನ ಸ್ವಚ್ಛ ಭಾರತ್ ಟ್ರಸ್ಟ್, ಕೃಷ್ಣ ಮುಳಿಯ ಗ್ರೀನ್ ಎನರ್ಜಿ ಸಂಸ್ಥೆ ಹಾಗೂ ರಿಟ್ಯಾಪ್ ಸಲ್ಯೂಷನ್ಸ್ ಸಂಸ್ಥೆಗಳು ಈ ಯೋಜನೆ ಅನುಷ್ಠಾನದಲ್ಲಿ ಕೈಜೋಡಿಸಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>