‘ನಮ್ಮ ಊರು ಬಳ್ಳಾರಿ. ಲಾಕ್ಡೌನ್ ಸಡಿಲಗೊಂಡ ಮೇಲೆ ಊರಿಗೆ ಹೋಗುವ ಬಸ್ ಹೊರಟಿತು. ಊರಿಗಿಂತ ಕರ್ತವ್ಯ ಪ್ರಧಾನವೆಂದು ಭಾವಿಸಿದೆ ನಾನು. ಬೀದಿಯಲ್ಲಿ ಕೆಲಸ ಮಾಡುವವರು ನಾವು. ನಮ್ಮನ್ನು ಕಂಡರೆ ಜನರು ದೂರ ಸರಿಯುತ್ತಿದ್ದರು. ಅವರ ಆತಂಕ ಸಹಜವೆಂದು ಭಾವಿಸಿದೆ. ಆ ಕಷ್ಟದ ನಡುವೆಯೂ ಹಲವರು ನಮಗೆ ಚಹಾ ಮಾಡಿಕೊಟ್ಟು, ನೀರುಕೊಟ್ಟು ಹಸಿವನ್ನು ತಣಿಸಿದರು. ಹೀಗೆ ನೆರವಾಗುವವರ ಋಣ ತೀರಿಸುವ ಕೆಲಸವೇ ಹಾದಿ–ಬೀದಿ ಸ್ವಚ್ಛತೆ’ ಎಂಬುದು ಲಕ್ಷ್ಮಿಬಾಯಿ ನಿಲುವು.