‘ದೊಡ್ಡ ಮಗಳಿಗೆ ತೆಲೆಸೇಮಿಯಾ ತೊಂದರೆಯಿದೆ. ಪ್ರತಿ 15 ದಿನಗಳಿಗೊಮ್ಮೆ ರಕ್ತ ನೀಡಬೇಕಾಗುತ್ತದೆ. ಇನ್ನೊಬ್ಬಳು ಮಗಳಿಗೆ ಒಂದು ವರ್ಷ. ನನ್ನೆದುರು ಹಲವಾರು ಸವಾಲುಗಳು ಇದ್ದವು. ಆದರೆ, ಕೊರೊನಾ ಸೋಂಕು ತಗುಲುವುದೇ ಆದರೆ, ಎಲ್ಲಿದ್ದರೂ ಬರಬಹುದು. ಕರ್ತವ್ಯ ನಿರ್ವಹಣೆ ಮುಖ್ಯವೆಂದು ಭಾವಿಸಿದೆ. ನಮಗೆ ರೋಗಿಗಳ ಸಾಮೀಪ್ಯ ಹೋಗುವ ಸಂದರ್ಭ ಇರುವುದಿಲ್ಲ. ಆದರೆ, ಆತಂಕ ಇದ್ದೇ ಇತ್ತು. ಯಾರಾದರೂ ಮೃತಪಟ್ಟರೆ, ತಕ್ಷಣಕ್ಕೆ ಸರ್ಕಾರಿ ವ್ಯವಸ್ಥೆಯ ವಿವಿಧ ಸ್ತರಗಳಿಗೆ ಮಾಹಿತಿ ಒದಗಿಸಬೇಕಿತ್ತು. ಅಂತಹ ಸಂದರ್ಭದಲ್ಲಿ, ಊಟ, ನಿದ್ದೆಯಿಲ್ಲದೇ ಕೆಲಸ ಮಾಡಿದ ದಿನಗಳೂ ಇವೆ’ ಎಂದು ಅವರು ನೆನಪಿಸಿಕೊಂಡರು.