ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಪುತ್ರ ರಾಹುಲ್ ಬಲ್ಲಾಳ್ ಕಾನೂನು ಪದವೀಧರರು. ಚೆನ್ನೈ, ಬೆಂಗಳೂರು, ಮಂಗಳೂರು, ಮೂಡುಬಿದಿರೆಯಲ್ಲಿ ಅವರ ಹೋಟೆಲ್ ಉದ್ಯಮ ಇವೆ. ಪ್ರಗತಿಪರ ಕೃಷಿ, ವಿದೇಶಿ ಹಸುಗಳ ಹೈನುಗಾರಿಕೆ (ರಾಜ್ಯದ ಪ್ರಥಮ ಹವಾನಿಯಂತ್ರಿತ ದನದ ಕೊಟ್ಟಿಗೆ), ಸಾರಿಗೆ, ಆಸ್ಪತ್ರೆ ಮುಂತಾದ ಕ್ಷೇತ್ರಗಳಲ್ಲಿ ವಹಿವಾಟು ಹೊಂದಿರುವ ಬಲ್ಲಾಳ್ ಕುಟುಂಬದ ರಾಹುಲ್ ಅವರು, ಬಸದಿಗಳು, ಹಿಂದೂ ದೇವಸ್ಥಾನಗಳು, ಪೂಜಾ ಮಂದಿರಗಳ ಸ್ಥಾಪಕರಾಗಿ, ಭೂತಾಲಯಗಳ ಅನುವಂಶೀಯ ಆಡಳಿತ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿದ್ದರು.