ವಿಜಯನಗರದ ಸಂಗಮ ವಂಶದ 1ನೇ ದೇವರಾಯನ ಮಗ ರಾಮಚಂದ್ರ (ಕಾಲ 1422)ನ ಅವಧಿಯಲ್ಲಿ 3.4ಗ್ರಾಂ ತೂಕದ ರಾಮ, ಲಕ್ಷ್ಮಣರಿರುವ ಚಿನ್ನದ ಕೋದಂಡ ಗದ್ಯಾಣ ಚಲಾವಣೆಗೆ ತಂದಿದ್ದ ಎನ್ನಲಾಗಿದೆ. ಬಳಿಕ ಆರವೀಡು ವಂಶದ ರಾಜ ತಿರುಮಲರಾಯನ ಕಾಲ (1570-78)ದಲ್ಲಿ 3.4ಗ್ರಾಂ ತೂಕದ ರಾಮ, ಲಕ್ಷ್ಮಣ, ಸೀತೆ ಇರುವ ಚಿನ್ನದ ವರಹ, 1.7 ಗ್ರಾಂ ತೂಕದ ಅರ್ಧ ವರಹ ಚಲಾವಣೆಗೆ ತಂದಿದ್ದ ಎಂದು ನಿತ್ಯಾನಂದ ಪೈ ನೆನಪಿಸುತ್ತಾರೆ.