<p><strong>ಕಾಸರಗೋಡು:</strong> ಶಬರಿಮಲೆ ಅಯ್ಯಪ್ಪ ಕ್ಷೇತ್ರದ 18ನೇ ಮೆಟ್ಟಿಲೇರಲು ಮೋಹನ ಕಲ್ಲೂರಾಯ ಸ್ವಾಮಿ ಒಂಟಿಯಾಗಿ, ಮತ್ತೊಮ್ಮೆ ಬರಿಗಾಲಲ್ಲಿ ಬೆಂಗಳೂರು ಬಿಡದಿಯಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ ಮುಂದುವರಿಸಿದ್ದಾರೆ.</p>.<p>67 ವರ್ಷ ವಯಸ್ಸಿನ ಮೋಹನ ಕಲ್ಲೂರಾಯರು 18ನೇ ಬಾರಿ ಶಬರಿಮಲೆಗೆ ಏಕಾಂಗಿಯಾಗಿ, ಪಾದಚಾರಿಯಾಗಿ ಹೋಗುತ್ತಿದ್ದಾರೆ. ಕಪ್ಪು ಬಟ್ಟೆ, ಕಪ್ಪು ಅಂಗಿ ತೊಟ್ಟು, ತಲೆಯಲ್ಲಿ ಇರುಮುಡಿ ಕಟ್ಟು ಹೊತ್ತು, ಮನಸ್ಸಿನಲ್ಲಿ ಅಯ್ಯಪ್ಪನಾಮ ಮಂತ್ರ ಪಠಿಸುತ್ತಾ, ರಾತ್ರಿ ಹಗಲೆನ್ನದೆ ಅವರು ಸ್ವಾಮಿಯ ದರ್ಶನಕ್ಕಾಗಿ ತವಕದಿಂದ ಸಾಗುತ್ತಿದ್ದಾರೆ.</p>.<p>ಬೆಂಗಳೂರು ಬಿಡದಿಯಿಂದ ಮೈಸೂರು, ಕಾಸರಗೋಡು ದಾರಿಯಾಗಿ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಸುಮಾರು 900 ಕಿ.ಮೀ. ಸಂಚರಿಸಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವ ಬಯಕೆ ಅವರದ್ದು. ಒಂದು ತಿಂಗಳ ಅವಧಿಯಲ್ಲಿ ಬಿಡದಿಯಿಂದ ಶಬರಿಮಲೆಗೆ ತಲಪುವ ಗುರಿ ಅವರದ್ದು.</p>.<p>‘ಪ್ರತಿದಿನ ನಸುಕಿಗೆ ಎದ್ದು ಸ್ನಾನ, ಧ್ಯಾನ ಪೂರ್ತಿಗೊಳಿಸಿ 3 ಗಂಟೆಗೆ ಕಾಲ್ನಡಿಗೆ. 9 ಗಂಟೆಯವರೆಗೆ ನಡೆದು ಬಳಿಕ ವಿಶ್ರಾಂತಿ. ಸಂಜೆ 3ಗಂಟೆಯಿಂದ 7ಗಂಟೆಯವರೆಗೆ ಪುನಃ ನಡಿಗೆ. ಪ್ರತಿದಿನ 40 ಕಿ.ಮೀ. ನಡೆಯುತ್ತೇನೆ ಎನ್ನುತ್ತಾರೆ’ ಕಲ್ಲೂರಾಯ ಸ್ವಾಮಿ.</p>.<p>ಕಾಸರಗೋಡಿಗೆ ಬುಧವಾರ ತಲುಪಿದ್ದ ಕಲ್ಲೂರಾಯರು ಮಧೂರು ಕ್ಷೇತ್ರ ದರ್ಶನ ಮಾಡಿ ಅಲ್ಲಿನ ಅರ್ಚಕರಾದ ಕೃಷ್ಣ ಉಪಾಧ್ಯಾಯರ ಮನೆಯಲ್ಲಿ ತಂಗಿದ ಬಳಿಕ ಗುರುವಾರ ಬೆಳಿಗ್ಗೆ ಮೂರು ಗಂಟೆಗೆ ಪಾದಯಾತ್ರೆ ಮುಂದುವರಿಸಿದರು.</p>.<p>18ನೇ ವರ್ಷದ ಅಯ್ಯಪ್ಪ ದರ್ಶನದ ಸಂಕೇತವಾಗಿ ಶಬರಿಮಲೆಯಲ್ಲಿ ನೆಡಲು ತೆಂಗಿನ ಗಿಡವನ್ನೂ ಜತೆಯಲ್ಲಿ ಒಯ್ಯುತ್ತಿದ್ದಾರೆ ಅವರು. ಕಾಲ್ನಡಿಗೆಯಲ್ಲಿ ಅಯ್ಯಪ್ಪ ದರ್ಶನ ಇದೇ ಕೊನೆಯ ಬಾರಿ ಎಂದು ತಿಳಿಸಿದ ಅವರು, ಮುಂದಿನ ವರ್ಷದಿಂದ ವಾಹನದಲ್ಲಿ ಶಬರಿಮಲೆಗೆ ತೆರಳುವುದಾಗಿ ಹೇಳಿದರು. ಈ ತಿಂಗಳ 22 ರಂದು ಶಬರಿಮಲೆಗೆ ತಲಪುವ ನಿರೀಕ್ಷೆ ಇರಿಸಿದ್ದಾರೆ.</p>.<p>40 ವರ್ಷಗಳ ಹಿಂದೆ ಪುತ್ತೂರಿನಿಂದ ಬಿಡದಿಗೆ ತೆರಳಿ ಅಲ್ಲೇ ಕಾಯಂ ವಾಸ ಆಗಿರುವ ಕಲ್ಲೂರಾಯರು ಸಹಕಾರಿ ಬ್ಯಾಂಕಿನ ನಿವೃತ್ತ ಅಧಿಕಾರಿ. ಪತ್ನಿ ಶಿಕ್ಷಕಿ. ಇಬ್ಬರು ಮಕ್ಕಳಲ್ಲಿ ಒಬ್ಬರು ಲಂಡನ್ ನಲ್ಲಿ ವೈದ್ಯರಾದರೆ, ಇನ್ನೊಬ್ಬರು ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು:</strong> ಶಬರಿಮಲೆ ಅಯ್ಯಪ್ಪ ಕ್ಷೇತ್ರದ 18ನೇ ಮೆಟ್ಟಿಲೇರಲು ಮೋಹನ ಕಲ್ಲೂರಾಯ ಸ್ವಾಮಿ ಒಂಟಿಯಾಗಿ, ಮತ್ತೊಮ್ಮೆ ಬರಿಗಾಲಲ್ಲಿ ಬೆಂಗಳೂರು ಬಿಡದಿಯಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ ಮುಂದುವರಿಸಿದ್ದಾರೆ.</p>.<p>67 ವರ್ಷ ವಯಸ್ಸಿನ ಮೋಹನ ಕಲ್ಲೂರಾಯರು 18ನೇ ಬಾರಿ ಶಬರಿಮಲೆಗೆ ಏಕಾಂಗಿಯಾಗಿ, ಪಾದಚಾರಿಯಾಗಿ ಹೋಗುತ್ತಿದ್ದಾರೆ. ಕಪ್ಪು ಬಟ್ಟೆ, ಕಪ್ಪು ಅಂಗಿ ತೊಟ್ಟು, ತಲೆಯಲ್ಲಿ ಇರುಮುಡಿ ಕಟ್ಟು ಹೊತ್ತು, ಮನಸ್ಸಿನಲ್ಲಿ ಅಯ್ಯಪ್ಪನಾಮ ಮಂತ್ರ ಪಠಿಸುತ್ತಾ, ರಾತ್ರಿ ಹಗಲೆನ್ನದೆ ಅವರು ಸ್ವಾಮಿಯ ದರ್ಶನಕ್ಕಾಗಿ ತವಕದಿಂದ ಸಾಗುತ್ತಿದ್ದಾರೆ.</p>.<p>ಬೆಂಗಳೂರು ಬಿಡದಿಯಿಂದ ಮೈಸೂರು, ಕಾಸರಗೋಡು ದಾರಿಯಾಗಿ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಸುಮಾರು 900 ಕಿ.ಮೀ. ಸಂಚರಿಸಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವ ಬಯಕೆ ಅವರದ್ದು. ಒಂದು ತಿಂಗಳ ಅವಧಿಯಲ್ಲಿ ಬಿಡದಿಯಿಂದ ಶಬರಿಮಲೆಗೆ ತಲಪುವ ಗುರಿ ಅವರದ್ದು.</p>.<p>‘ಪ್ರತಿದಿನ ನಸುಕಿಗೆ ಎದ್ದು ಸ್ನಾನ, ಧ್ಯಾನ ಪೂರ್ತಿಗೊಳಿಸಿ 3 ಗಂಟೆಗೆ ಕಾಲ್ನಡಿಗೆ. 9 ಗಂಟೆಯವರೆಗೆ ನಡೆದು ಬಳಿಕ ವಿಶ್ರಾಂತಿ. ಸಂಜೆ 3ಗಂಟೆಯಿಂದ 7ಗಂಟೆಯವರೆಗೆ ಪುನಃ ನಡಿಗೆ. ಪ್ರತಿದಿನ 40 ಕಿ.ಮೀ. ನಡೆಯುತ್ತೇನೆ ಎನ್ನುತ್ತಾರೆ’ ಕಲ್ಲೂರಾಯ ಸ್ವಾಮಿ.</p>.<p>ಕಾಸರಗೋಡಿಗೆ ಬುಧವಾರ ತಲುಪಿದ್ದ ಕಲ್ಲೂರಾಯರು ಮಧೂರು ಕ್ಷೇತ್ರ ದರ್ಶನ ಮಾಡಿ ಅಲ್ಲಿನ ಅರ್ಚಕರಾದ ಕೃಷ್ಣ ಉಪಾಧ್ಯಾಯರ ಮನೆಯಲ್ಲಿ ತಂಗಿದ ಬಳಿಕ ಗುರುವಾರ ಬೆಳಿಗ್ಗೆ ಮೂರು ಗಂಟೆಗೆ ಪಾದಯಾತ್ರೆ ಮುಂದುವರಿಸಿದರು.</p>.<p>18ನೇ ವರ್ಷದ ಅಯ್ಯಪ್ಪ ದರ್ಶನದ ಸಂಕೇತವಾಗಿ ಶಬರಿಮಲೆಯಲ್ಲಿ ನೆಡಲು ತೆಂಗಿನ ಗಿಡವನ್ನೂ ಜತೆಯಲ್ಲಿ ಒಯ್ಯುತ್ತಿದ್ದಾರೆ ಅವರು. ಕಾಲ್ನಡಿಗೆಯಲ್ಲಿ ಅಯ್ಯಪ್ಪ ದರ್ಶನ ಇದೇ ಕೊನೆಯ ಬಾರಿ ಎಂದು ತಿಳಿಸಿದ ಅವರು, ಮುಂದಿನ ವರ್ಷದಿಂದ ವಾಹನದಲ್ಲಿ ಶಬರಿಮಲೆಗೆ ತೆರಳುವುದಾಗಿ ಹೇಳಿದರು. ಈ ತಿಂಗಳ 22 ರಂದು ಶಬರಿಮಲೆಗೆ ತಲಪುವ ನಿರೀಕ್ಷೆ ಇರಿಸಿದ್ದಾರೆ.</p>.<p>40 ವರ್ಷಗಳ ಹಿಂದೆ ಪುತ್ತೂರಿನಿಂದ ಬಿಡದಿಗೆ ತೆರಳಿ ಅಲ್ಲೇ ಕಾಯಂ ವಾಸ ಆಗಿರುವ ಕಲ್ಲೂರಾಯರು ಸಹಕಾರಿ ಬ್ಯಾಂಕಿನ ನಿವೃತ್ತ ಅಧಿಕಾರಿ. ಪತ್ನಿ ಶಿಕ್ಷಕಿ. ಇಬ್ಬರು ಮಕ್ಕಳಲ್ಲಿ ಒಬ್ಬರು ಲಂಡನ್ ನಲ್ಲಿ ವೈದ್ಯರಾದರೆ, ಇನ್ನೊಬ್ಬರು ಕಂಪನಿಯೊಂದರ ಉದ್ಯೋಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>