<p><strong>ಮೂಡುಬಿದಿರೆ</strong>: ಪೊನ್ನೆಚ್ಚಾರು ಬಳಿ ಇರುವ ವಸತಿ ಸಮುಚ್ಚಯಗಳಿಂದ ಕೊಳಚೆ ನೀರನ್ನು ತೋಡಿಗೆ ಹರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ಕೊಳಚೆ ನೀರಿನಿಂದ ಈ ಪರಿಸರದಲ್ಲಿ ದುರ್ವಾಸನೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಿದೆ. ಪುರಸಭೆಗೆ ಸೇರಿದ ಕೊಳವೆ ಬಾವಿ, ಸುತ್ತಮುತ್ತಲಿನ ಮನೆಗಳ ಮೂರು ತೆರೆದ ಬಾವಿಗಳ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು. </p>.<p>ಪುರಸಭೆ ಕಚೇರಿ ಸಮೀಪ ಪೇಟೆಯ ಬಳಿಯೇ ಇರುವ ಪೊನ್ನೆಚ್ಚಾರಿ ಸೇತುವೆ ಬಳಿ ಐದು ವಸತಿ ಸಮುಚ್ಚಯಗಳಿದ್ದು, ಅದರಲ್ಲಿನ ಬಹುತೇಕ ಕಟ್ಟಡಗಳಿಂದ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತಿದೆ ಎನ್ನಲಾಗಿದೆ.</p>.<p>ಒಂದು ವಸತಿ ಸಮುಚ್ಚಯದವರು ಕೊಳಚೆ ನೀರನ್ನು ಫಿಲ್ಟರ್ ಮಾಡಿ ತೋಡಿಗೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಈ ನೀರನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿಯನ್ನು ನೀಡುವಂತೆ ವಸತಿ ಸಮುಚ್ಚಯದವರಿಗೆ ತಿಳಿಸಿದ್ದೇನೆ. ವರದಿ ಬರುವವರೆಗೆ ತೋಡಿಗೆ ಕೊಳಚೆ ನೀರು ಬಿಡದಂತೆ ಸೂಚಿಸಲಾಗಿದೆ ಎಂದು ಪುರಸಬೆ ಆರೋಗ್ಯಾಧಿಕಾರಿ ಶಶಿರೇಖಾ ಮಾಧ್ಯಮಕ್ಕೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ</strong>: ಪೊನ್ನೆಚ್ಚಾರು ಬಳಿ ಇರುವ ವಸತಿ ಸಮುಚ್ಚಯಗಳಿಂದ ಕೊಳಚೆ ನೀರನ್ನು ತೋಡಿಗೆ ಹರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>‘ಕೊಳಚೆ ನೀರಿನಿಂದ ಈ ಪರಿಸರದಲ್ಲಿ ದುರ್ವಾಸನೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಿದೆ. ಪುರಸಭೆಗೆ ಸೇರಿದ ಕೊಳವೆ ಬಾವಿ, ಸುತ್ತಮುತ್ತಲಿನ ಮನೆಗಳ ಮೂರು ತೆರೆದ ಬಾವಿಗಳ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು. </p>.<p>ಪುರಸಭೆ ಕಚೇರಿ ಸಮೀಪ ಪೇಟೆಯ ಬಳಿಯೇ ಇರುವ ಪೊನ್ನೆಚ್ಚಾರಿ ಸೇತುವೆ ಬಳಿ ಐದು ವಸತಿ ಸಮುಚ್ಚಯಗಳಿದ್ದು, ಅದರಲ್ಲಿನ ಬಹುತೇಕ ಕಟ್ಟಡಗಳಿಂದ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತಿದೆ ಎನ್ನಲಾಗಿದೆ.</p>.<p>ಒಂದು ವಸತಿ ಸಮುಚ್ಚಯದವರು ಕೊಳಚೆ ನೀರನ್ನು ಫಿಲ್ಟರ್ ಮಾಡಿ ತೋಡಿಗೆ ಬಿಡುತ್ತಿರುವುದಾಗಿ ತಿಳಿಸಿದ್ದಾರೆ. ಈ ನೀರನ್ನು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದರ ವರದಿಯನ್ನು ನೀಡುವಂತೆ ವಸತಿ ಸಮುಚ್ಚಯದವರಿಗೆ ತಿಳಿಸಿದ್ದೇನೆ. ವರದಿ ಬರುವವರೆಗೆ ತೋಡಿಗೆ ಕೊಳಚೆ ನೀರು ಬಿಡದಂತೆ ಸೂಚಿಸಲಾಗಿದೆ ಎಂದು ಪುರಸಬೆ ಆರೋಗ್ಯಾಧಿಕಾರಿ ಶಶಿರೇಖಾ ಮಾಧ್ಯಮಕ್ಕೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>