‘ಘಾಟಿ ಪ್ರದೇಶದಲ್ಲಿ ಭೂಕುಸಿತದ ಅಪಾಯ ಹೆಚ್ಚಿರುವುದರಿಂದ ಕಾಮಗಾರಿಯ ಸ್ಥಳಕ್ಕೆ ಕೌಶಲ ಹೊಂದಿದ ಕಾರ್ಮಿಕರನ್ನು ಕಳುಹಿಸುವುದು, ಸಾಮಗ್ರಿಗಳ ಪೂರೈಕೆ ಮಾಡುವುದು ಪ್ರಯಾಸದ ಕೆಲಸವಾಗಿತ್ತು. ಕೇಬಲ್ ಅಳವಡಿಸಲು ಜಮೀನು ಅಗೆಯುವುದು, ಬಂಡೆಗಳನ್ನು ಒಡೆಯುವುದು ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.