ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಸೇರಿದಂತೆ ಹಲವು ಪ್ರದೇಶದ ಜನರಿಗೆ ಸಂಪರ್ಕದ್ದೆ ಸವಾಲು. ಸುಮಾರು 1,300 ಜನರು ಇರುವ ಈ ಊರಿನ ಜನರಿಗೆ ಮಳೆಗಾಲದಲ್ಲಿ ಸೇತುವೆಯದ್ದೇ ಚಿಂತೆ. ಪ್ರತಿ ವರ್ಷ ಮರದ ಪಾಲ ಹಾಕಿ, ನದಿ ದಾಟು ತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.