ಮಂಗಳೂರು: ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿಗೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಡಾ.ತಾಳ್ತಜೆ ವಸಂತ ಕುಮಾರ್ (2022ರ ಸಾಲಿನ ಪ್ರಶಸ್ತಿ) ಹಾಗೂ ವಿಮರ್ಶಕ ಡಾ.ಒ.ಎಲ್. ನಾಗಭೂಷಣ ಸ್ವಾಮಿ (2023ರ ಸಾಲಿನ ಪ್ರಶಸ್ತಿ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಬಹುಮಾನ ಒಳಗೊಂಡಿದೆ.