ಬುಧವಾರ ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕೆ ಶಿಬಿರ ನಡೆಯುತ್ತಿತ್ತು. ಕೂಟೇಲು ಸಿಆರ್ಸಿಯ ಬಾಲಸುಬ್ರಹ್ಮಣ್ಯಂ ಅವರ ಪುತ್ರ, ಕೆ.ಬಿ. ಅರುಣ್ ಮೊದಲ ಡೋಸ್ ಪಡೆಯಲು ಬಂದಿದ್ದರು. ಆರೋಗ್ಯ ಸಹಾಯಕಿಯು ಅರುಣ್ ಅವರಿಗೆ ಲಸಿಕೆ ನೀಡಿದ್ದರು. ಇದಾದ ನಂತರವೂ ಮಾತ್ರೆ ಪಡೆಯುವ ಉದ್ದೇಶದಿಂದ ಅರುಣ್ ಅಲ್ಲೇ ಕುಳಿತಿದ್ದರು. ಸ್ವಲ್ಪ ಸಮಯದಲ್ಲಿ ಹೊಸ ಸಿರಿಂಜ್ನೊಂದಿಗೆ ಬಂದ ಆರೋಗ್ಯ ಸಹಾಯಕಿಯು ಬೇರೆಯವರು ಕುಳಿತಿದ್ದಾರೆ ಎಂದು ಭಾವಿಸಿ ಪುನಃ ಅರುಣ್ ಅವರಿಗೇ ಲಸಿಕೆ ನೀಡಿದ್ದಾರೆ.