ಮಂಗಳೂರು: ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 250 ಬೆಡ್ಗಳನ್ನು ಜಿಲ್ಲಾಡಳಿತ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿದೆ. ಆದರೆ ಇಲ್ಲಿ ಅಗತ್ಯ ದಾದಿಯರು (ನರ್ಸ್), ವೈದ್ಯರು ಇದ್ದಂತಿಲ್ಲ. ವಾರ್ಡ್ಗಳಲ್ಲಿ ಕೋವಿಡ್ ರೋಗಿಗಳ ಶುಶ್ರೂಷೆಗೆ ಅಗತ್ಯ ಸಿಬ್ಬಂದಿ ಇಲ್ಲ ಎಂದು ಒಳರೋಗಿಗಳ ಕುಟುಂಬದವರು ಆರೋಪಿಸಿದ್ದು, ಜಿಲ್ಲಾಡಳಿತ, ಚುನಾಯಿತ ಶಾಸಕರು, ಸಂಸದರು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಎ.ಸಿ. ವಿನಯರಾಜ್ ಆಗ್ರಹಿಸಿದ್ದಾರೆ.