<p><strong>ಪುತ್ತೂರು</strong>: ರೈತರೇ ಹೆಚ್ಚಾಗಿ ಬದುಕುತ್ತಿರುವ ನಮ್ಮ ಊರನ್ನು (ಕೆಯ್ಯೂರು ಗ್ರಾಮವನ್ನು) ಕಾಡಾನೆಯಿಂದ ಪಾರು ಮಾಡಿ ಎಂದು ಸಾಹಿತಿ ನರೇಂದ್ರ ರೈ ದೇರ್ಲ ಅವರು, ಕಾಡಾನೆ ಉಪಟಳಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಲಗತ್ತಿಸಿ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.</p>.<p>ರೈತರೇ ಇರುವ ಈ ಊರಲ್ಲಿ ಹಲವು ದಿನಗಳಿಂದ ಕಾಡಾನೆಯೊಂದು ತೊಂದರೆ ಕೊಡುತ್ತಿದೆ. ನಮ್ಮ ಪಕ್ಕದ ಕೊಳ್ತಿಗೆ ಊರಲ್ಲಿ ಇತ್ತೀಚೆಗೆ ಇದೇ ಆನೆ ಮಹಿಳೆಯನ್ನು ಕೊಂದು ಹಾಕಿದೆ. ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಈ ಆನೆಯನ್ನು ಸ್ಥಳಾಂತರಿಸುವ ಭರವಸೆಯನ್ನು ನೀಡಿದ್ದರೂ, ಅದು ಇದುವರೆಗೆ ಈಡೇರಲಿಲ್ಲ. ಗುರುವಾರ ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಇಡೀ ಊರನ್ನು ತಲ್ಲಣ ಗೊಳಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.</p>.<p>ನಮ್ಮ ಮನವಿಗೆ ಸ್ಪಂದಿಸಿ ಅರಣ್ಯಾಧಿಕಾರಿ ಪ್ರತಿಬಾರಿಯೂ ಬಂದು ನಮ್ಮ ಜತೆಗೆ ಸಹಕರಿಸುತ್ತಾರೆ. ಆದರೆ, ಪದೇ ಪದೇ ಬರುತ್ತಿರುವುದರಿಂದ ಕಾಡಾನೆಯಿಂದಾಗಿ ಅವರ ಶ್ರಮ ವ್ಯಯವಾಗುತ್ತಿದ್ದು, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.</p>.<p>ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರವಾಸದಲ್ಲಿರುವ ಸಚಿವರು ಸೋಮವಾರ ಬೆಂಗಳೂರಿಗೆ ಬಂದ ಬಳಿಕ ಮನವಿಯನ್ನು ಅವರ ಗಮನಕ್ಕೆ ತರಲಾಗುವುದು ಎಂದು ಅರಣ್ಯ ಸಚಿವರ ಮಾಧ್ಯಮ ಕಾರ್ಯದರ್ಶಿ ಟಿ.ಎಂ.ಸತೀಶ್ ಅವರು ಸಂದೇಶದ ಮೂಲಕ ನರೇಂದ್ರ ರೈ ದೇರ್ಲ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ರೈತರೇ ಹೆಚ್ಚಾಗಿ ಬದುಕುತ್ತಿರುವ ನಮ್ಮ ಊರನ್ನು (ಕೆಯ್ಯೂರು ಗ್ರಾಮವನ್ನು) ಕಾಡಾನೆಯಿಂದ ಪಾರು ಮಾಡಿ ಎಂದು ಸಾಹಿತಿ ನರೇಂದ್ರ ರೈ ದೇರ್ಲ ಅವರು, ಕಾಡಾನೆ ಉಪಟಳಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಲಗತ್ತಿಸಿ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.</p>.<p>ರೈತರೇ ಇರುವ ಈ ಊರಲ್ಲಿ ಹಲವು ದಿನಗಳಿಂದ ಕಾಡಾನೆಯೊಂದು ತೊಂದರೆ ಕೊಡುತ್ತಿದೆ. ನಮ್ಮ ಪಕ್ಕದ ಕೊಳ್ತಿಗೆ ಊರಲ್ಲಿ ಇತ್ತೀಚೆಗೆ ಇದೇ ಆನೆ ಮಹಿಳೆಯನ್ನು ಕೊಂದು ಹಾಕಿದೆ. ಸ್ಥಳೀಯ ಜನಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಈ ಆನೆಯನ್ನು ಸ್ಥಳಾಂತರಿಸುವ ಭರವಸೆಯನ್ನು ನೀಡಿದ್ದರೂ, ಅದು ಇದುವರೆಗೆ ಈಡೇರಲಿಲ್ಲ. ಗುರುವಾರ ಮತ್ತೆ ಕಾಡಾನೆ ಕಾಣಿಸಿಕೊಂಡಿದೆ. ಇಡೀ ಊರನ್ನು ತಲ್ಲಣ ಗೊಳಿಸಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.</p>.<p>ನಮ್ಮ ಮನವಿಗೆ ಸ್ಪಂದಿಸಿ ಅರಣ್ಯಾಧಿಕಾರಿ ಪ್ರತಿಬಾರಿಯೂ ಬಂದು ನಮ್ಮ ಜತೆಗೆ ಸಹಕರಿಸುತ್ತಾರೆ. ಆದರೆ, ಪದೇ ಪದೇ ಬರುತ್ತಿರುವುದರಿಂದ ಕಾಡಾನೆಯಿಂದಾಗಿ ಅವರ ಶ್ರಮ ವ್ಯಯವಾಗುತ್ತಿದ್ದು, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.</p>.<p>ಈ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪ್ರವಾಸದಲ್ಲಿರುವ ಸಚಿವರು ಸೋಮವಾರ ಬೆಂಗಳೂರಿಗೆ ಬಂದ ಬಳಿಕ ಮನವಿಯನ್ನು ಅವರ ಗಮನಕ್ಕೆ ತರಲಾಗುವುದು ಎಂದು ಅರಣ್ಯ ಸಚಿವರ ಮಾಧ್ಯಮ ಕಾರ್ಯದರ್ಶಿ ಟಿ.ಎಂ.ಸತೀಶ್ ಅವರು ಸಂದೇಶದ ಮೂಲಕ ನರೇಂದ್ರ ರೈ ದೇರ್ಲ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>