ಕಾಶ್ಮೀರ ಕಣಿವೆಯಲ್ಲಿ ಸೈನಿಕರ ಮೇಲೆ ಕಲ್ಲೆಸೆಯುವುದು, ಭಾರತದ ರಾಷ್ಟ್ರಧ್ವಜವನ್ನು ಸುಡುವುದು, ಭಾರತ ವಿರೋಧಿ ಘೋಷಣೆಯನ್ನು ಕೂಗುವುದು ಮುಂತಾದ ದೇಶವಿರೋಧಿ ಕೃತ್ಯಗಳನ್ನು ಮಾಡಲಾಗುತ್ತಿದೆ. ಆ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಸುರಕ್ಷಾ ದಳದ 4,515 ಸೈನಿಕರು ಹಾಗೂ 3,356 ನಾಗರಿಕರು ಗಾಯಾಳುಗಳಾಗಿದ್ದಾರೆ. ಹೀಗಿರುವಾಗ ಕಲ್ಲೆಸೆತೆದಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದ ಸುಮಾರು 4,500 ಕ್ಕಿಂತ ಅಧಿಕ ಯುವಕರ ಮೇಲೆ ದಾಖಲಿಸಲಾಗಿದ್ದ ದೂರನ್ನು ಹಿಂತೆಗೆದುಕೊಳ್ಳುವ ನಿರ್ಣಯ ತೆಗೆದುಕೊಳ್ಳಬಾರದು ಎಂದೂ ಮನವಿ ಮಾಡಲಾಯಿತು.