<p><strong>ಮಾಯಕೊಂಡ</strong>: ಸಮೀಪದ ಒಂಟಿಹಾಳು ಬಳಿ ಜಮೀನಿನಲ್ಲಿ ಎಳೆಯ ಹುಲ್ಲು, ಅಲಸಂದೆ ಬಳ್ಳಿಯನ್ನು ಹೆಚ್ಚಾಗಿ ತಿಂದು, ಆಹಾರ ವಿಷಪೂರಿತವಾಗಿ 35 ಕುರಿಗಳು ಶನಿವಾರ ಸಂಜೆ ಸಾವನ್ನಪ್ಪಿವೆ.</p>.<p>ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದ ಕುರಿಗಾಹಿಗಳಾದ ಮಂಜಪ್ಪ, ಶಿವಣ್ಣ, ಕರಿಯಪ್ಪ, ಚಿದಾನಂದ, ಈರಣ್ಣ ಅವರಿಗೆ ಸೇರಿದ ಕುರಿಗಳು ಇವಾಗಿವೆ.</p>.<p>ಪ್ರತಿದಿನದಂತೆ ಕುರಿಗಾಹಿಗಳು ಕುರಿ ಮೇಯಿಸಿಕೊಂಡು ಬರುವ ದಾರಿಯಲ್ಲಿ ಸಂಜೆ ರೊಪ್ಪ ಸೇರುವ ಮುನ್ನವೇ ಕುರಿಗಳು ನಿತ್ರಾಣಗೊಂಡು ಬಳಿಕ ಸಾವನ್ನಪ್ಪಿವೆ. ಜಾನುವಾರು ಅಧಿಕಾರಿ ಈ. ಪುರಂದರ ಹಾಗೂ ಸಹಾಯಕ ಹರೀಶ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಕೆಲವು ಕುರಿಗಳು ಪ್ರಾಣಪಾಯದಿಂದ ಪಾರಾಗಿವೆ.</p>.<p>'ಒಂದೊಂದು ಕುರಿಗಳು ₹25 ಸಾವಿರಕ್ಕು ಹೆಚ್ಚು ಬೆಲೆಬಾಳುತ್ತಿದ್ದವು. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿವೆ. ಏನು ಮಾಡಬೇಕು ಎಂಬುದೇ ತೋಚದಂತಾಗಿದೆ’ ಎಂದು ಕುರಿಗಾಹಿ ಕರಿಯಪ್ಪ ನೊಂದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಯಕೊಂಡ</strong>: ಸಮೀಪದ ಒಂಟಿಹಾಳು ಬಳಿ ಜಮೀನಿನಲ್ಲಿ ಎಳೆಯ ಹುಲ್ಲು, ಅಲಸಂದೆ ಬಳ್ಳಿಯನ್ನು ಹೆಚ್ಚಾಗಿ ತಿಂದು, ಆಹಾರ ವಿಷಪೂರಿತವಾಗಿ 35 ಕುರಿಗಳು ಶನಿವಾರ ಸಂಜೆ ಸಾವನ್ನಪ್ಪಿವೆ.</p>.<p>ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದ ಕುರಿಗಾಹಿಗಳಾದ ಮಂಜಪ್ಪ, ಶಿವಣ್ಣ, ಕರಿಯಪ್ಪ, ಚಿದಾನಂದ, ಈರಣ್ಣ ಅವರಿಗೆ ಸೇರಿದ ಕುರಿಗಳು ಇವಾಗಿವೆ.</p>.<p>ಪ್ರತಿದಿನದಂತೆ ಕುರಿಗಾಹಿಗಳು ಕುರಿ ಮೇಯಿಸಿಕೊಂಡು ಬರುವ ದಾರಿಯಲ್ಲಿ ಸಂಜೆ ರೊಪ್ಪ ಸೇರುವ ಮುನ್ನವೇ ಕುರಿಗಳು ನಿತ್ರಾಣಗೊಂಡು ಬಳಿಕ ಸಾವನ್ನಪ್ಪಿವೆ. ಜಾನುವಾರು ಅಧಿಕಾರಿ ಈ. ಪುರಂದರ ಹಾಗೂ ಸಹಾಯಕ ಹರೀಶ್ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಕೆಲವು ಕುರಿಗಳು ಪ್ರಾಣಪಾಯದಿಂದ ಪಾರಾಗಿವೆ.</p>.<p>'ಒಂದೊಂದು ಕುರಿಗಳು ₹25 ಸಾವಿರಕ್ಕು ಹೆಚ್ಚು ಬೆಲೆಬಾಳುತ್ತಿದ್ದವು. ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿವೆ. ಏನು ಮಾಡಬೇಕು ಎಂಬುದೇ ತೋಚದಂತಾಗಿದೆ’ ಎಂದು ಕುರಿಗಾಹಿ ಕರಿಯಪ್ಪ ನೊಂದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>