<p><strong>ಹೊನ್ನಾಳಿ</strong>: ಪಟ್ಟಣದ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ನ ಆಡಳಿತ ಮಂಡಳಿಗೆ ಜnವರಿ 21ರಂದು ಭಾನುವಾರ ಚುನಾವಣೆ ನಡೆಯಲಿದೆ.</p>.<p>ಜನವರಿ 6ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಜನವರಿ 13ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಜನವರಿ 14ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಿತು. ಒಟ್ಟು 38 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಒಂದು ನಾಮಪತ್ರ ಮಾತ್ರ ತಿರಸ್ಕೃತವಾಗಿತ್ತು. </p>.<p>37 ನಾಮಪತ್ರಗಳ ಪೈಕಿ 27 ಜನ ಸಾಮಾನ್ಯ ವರ್ಗಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಅ ವರ್ಗಕ್ಕೆ ಮೂರು ಜನ, ಬ ವರ್ಗಕ್ಕೆ 3 ಜನ, ಎಸ್ಸಿಗೆ ಒಂದು, ಎಸ್ಟಿಗೆ ಒಂದು ಹಾಗೂ ಮಹಿಳೆಯರ ಮೀಸಲಾತಿ ಅಡಿ ಇಬ್ಬರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. </p>.<p>ಅವಿರೋಧ ಆಯ್ಕೆ: ಎಸ್ಸಿ ವರ್ಗಕ್ಕೆ ಒಂದು, ಎಸ್ಟಿ ವರ್ಗಕ್ಕೆ ಒಂದು ಕ್ಷೇತ್ರಕ್ಕೆ ತಲಾ ಒಬ್ಬೊಬ್ಬರು ಹಾಗೂ ಮಹಿಳಾ ಮೀಸಲಾತಿ ಅಡಿ ಇಬ್ಬರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. </p>.<p>ಸಾಮಾನ್ಯ ವರ್ಗಕ್ಕೆ 9 ಜನ ಆಯ್ಕೆಯಾಗಬೇಕಾಗಿದ್ದು, 12 ಜನರು ಕಣದಲ್ಲಿದ್ದಾರೆ. ಅ ವರ್ಗದಲ್ಲಿ ಮೂರು ಜನ ಹಾಗೂ ಬ ವರ್ಗದಲ್ಲಿ ಇಬ್ಬರು ಕಣದಲ್ಲಿದ್ದು, ಒಬ್ಬೊಬ್ಬರನ್ನು ಮಾತ್ರ ಚುನಾಯಿಸಬೇಕಾಗಿದೆ. </p>.<p>ಕಣದಲ್ಲಿ ಉಳಿದವರು: ಸಾಮಾನ್ಯ ವರ್ಗದಲ್ಲಿ ಕಣದಲ್ಲಿರುವವರು ಎಚ್.ಎಂ.ಅರುಣ್ಕುಮಾರ್, ಬಿ.ಎಚ್.ಉಮೇಶ್ ಬೆಳಗುತ್ತಿ, ಎನ್.ಜಯರಾವ್, ಕೆ.ಆರ್.ನಾಗರಾಜ್, ಜಿ.ಆರ್.ಪ್ರಕಾಶ್, ಎಚ್.ಬಿ.ಮೋಹನ್, ಮಂಜಪ್ಪ ಎಚ್., ಸಿ.ಕೆ.ರವಿಕುಮಾರ್, ರಾಜ್ಕುಮಾರ್ ಎಚ್.ಪಿ., ಎಚ್.ವೀರೇಶಪ್ಪ, ಕೆ.ಎಂ.ಶಿವಾನಂದಸ್ವಾಮಿ, ಎನ್.ಆರ್. ಸುಂದರೇಶ್. </p>.<p>ಪ್ರವರ್ಗ ‘ಅ’ ದಲ್ಲಿ ಅನಿಲ ಬಿ.ಎ., ಕೆ.ಎಂ.ರಘು, ಎಚ್.ಎಂ.ಶಿವಮೂರ್ತಿ ಹಾಗೂ ಪ್ರವರ್ಗ ‘ಬ’ದಲ್ಲಿ ಸಿ.ಎಚ್. ನಾಗರಾಜ್ ಮಾಸಡಿ ಹಾಗೂ ಡಿ.ಎನ್.ಶಾಂತಲಾ ಕಣದಲ್ಲಿದ್ದಾರೆ. 1,232 ಜನ ಅರ್ಹ ಮತದಾರರು ಇದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ನವಿನ್ಕುಮಾರ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊನ್ನಾಳಿ</strong>: ಪಟ್ಟಣದ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ನ ಆಡಳಿತ ಮಂಡಳಿಗೆ ಜnವರಿ 21ರಂದು ಭಾನುವಾರ ಚುನಾವಣೆ ನಡೆಯಲಿದೆ.</p>.<p>ಜನವರಿ 6ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಜನವರಿ 13ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಜನವರಿ 14ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಿತು. ಒಟ್ಟು 38 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಒಂದು ನಾಮಪತ್ರ ಮಾತ್ರ ತಿರಸ್ಕೃತವಾಗಿತ್ತು. </p>.<p>37 ನಾಮಪತ್ರಗಳ ಪೈಕಿ 27 ಜನ ಸಾಮಾನ್ಯ ವರ್ಗಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಅ ವರ್ಗಕ್ಕೆ ಮೂರು ಜನ, ಬ ವರ್ಗಕ್ಕೆ 3 ಜನ, ಎಸ್ಸಿಗೆ ಒಂದು, ಎಸ್ಟಿಗೆ ಒಂದು ಹಾಗೂ ಮಹಿಳೆಯರ ಮೀಸಲಾತಿ ಅಡಿ ಇಬ್ಬರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. </p>.<p>ಅವಿರೋಧ ಆಯ್ಕೆ: ಎಸ್ಸಿ ವರ್ಗಕ್ಕೆ ಒಂದು, ಎಸ್ಟಿ ವರ್ಗಕ್ಕೆ ಒಂದು ಕ್ಷೇತ್ರಕ್ಕೆ ತಲಾ ಒಬ್ಬೊಬ್ಬರು ಹಾಗೂ ಮಹಿಳಾ ಮೀಸಲಾತಿ ಅಡಿ ಇಬ್ಬರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. </p>.<p>ಸಾಮಾನ್ಯ ವರ್ಗಕ್ಕೆ 9 ಜನ ಆಯ್ಕೆಯಾಗಬೇಕಾಗಿದ್ದು, 12 ಜನರು ಕಣದಲ್ಲಿದ್ದಾರೆ. ಅ ವರ್ಗದಲ್ಲಿ ಮೂರು ಜನ ಹಾಗೂ ಬ ವರ್ಗದಲ್ಲಿ ಇಬ್ಬರು ಕಣದಲ್ಲಿದ್ದು, ಒಬ್ಬೊಬ್ಬರನ್ನು ಮಾತ್ರ ಚುನಾಯಿಸಬೇಕಾಗಿದೆ. </p>.<p>ಕಣದಲ್ಲಿ ಉಳಿದವರು: ಸಾಮಾನ್ಯ ವರ್ಗದಲ್ಲಿ ಕಣದಲ್ಲಿರುವವರು ಎಚ್.ಎಂ.ಅರುಣ್ಕುಮಾರ್, ಬಿ.ಎಚ್.ಉಮೇಶ್ ಬೆಳಗುತ್ತಿ, ಎನ್.ಜಯರಾವ್, ಕೆ.ಆರ್.ನಾಗರಾಜ್, ಜಿ.ಆರ್.ಪ್ರಕಾಶ್, ಎಚ್.ಬಿ.ಮೋಹನ್, ಮಂಜಪ್ಪ ಎಚ್., ಸಿ.ಕೆ.ರವಿಕುಮಾರ್, ರಾಜ್ಕುಮಾರ್ ಎಚ್.ಪಿ., ಎಚ್.ವೀರೇಶಪ್ಪ, ಕೆ.ಎಂ.ಶಿವಾನಂದಸ್ವಾಮಿ, ಎನ್.ಆರ್. ಸುಂದರೇಶ್. </p>.<p>ಪ್ರವರ್ಗ ‘ಅ’ ದಲ್ಲಿ ಅನಿಲ ಬಿ.ಎ., ಕೆ.ಎಂ.ರಘು, ಎಚ್.ಎಂ.ಶಿವಮೂರ್ತಿ ಹಾಗೂ ಪ್ರವರ್ಗ ‘ಬ’ದಲ್ಲಿ ಸಿ.ಎಚ್. ನಾಗರಾಜ್ ಮಾಸಡಿ ಹಾಗೂ ಡಿ.ಎನ್.ಶಾಂತಲಾ ಕಣದಲ್ಲಿದ್ದಾರೆ. 1,232 ಜನ ಅರ್ಹ ಮತದಾರರು ಇದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ನವಿನ್ಕುಮಾರ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>