<p><strong>ಮಾಯಕೊಂಡ:</strong> ಸಮೀಪದ ಕಬ್ಬೂರು ಗ್ರಾಮದಲ್ಲಿ 25ನೇ ವರ್ಷದ ಅಡಿಕೆ ರಾಶಿ ಪೂಜೆಯ ಸುಗ್ಗಿ ಸಂಭ್ರಮ ಮತ್ತು ರೈತರ ಧಾರ್ಮಿಕ ಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. </p>.<p>ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೂಮಿಯನ್ನು ಆರೋಗ್ಯದಿಂದ ನೋಡಿಕೊಳ್ಳಬೇಕು. ಕಳೆ ನಾಶಕ ಸಿಂಪಡಣೆಯಿಂದ ಭೂಮಿ ಸತ್ವ ಕಳೆದುಕೊಂಡು ಫಸಲು ವಿಷಯುಕ್ತವಾಗಿದೆ. ಭೂಮಿಯ ಸತ್ವ ಉಳಿಕೊಳ್ಳಬೇಕಿದೆ’ ಎಂದರು. </p>.<p>‘ರೈತರು ಸೋಮಾರಿಗಳಲ್ಲ, ಅಜ್ಞಾನಿಗಳಲ್ಲ. ಕೃಷಿ ಇಲಾಖೆಯ ವಿಜ್ಞಾನಿಗಳಿಗಿಂತ ಅನುಭವಿಗಳು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ ಹೇಳಿದರು. </p>.<p>‘ಅಡಿಕೆ ಬೆಳೆಯಿಂದ ರೈತರು ಆರ್ಥಿಕವಾಗಿ ಸಧೃಢರಾಗುತ್ತಿದ್ದಾರೆ. ಏಕ ಬೆಳೆ ಬೆಳೆಯುವ ಬದಲು ಬಹು ಬೆಳೆ ಪದ್ದತಿಗೆ ತೆರೆದುಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು. </p>.<p>‘ಅಡಿಕೆ ರಾಶಿ ಪೂಜೆ ಹೊಸ ಪ್ರಯತ್ನ. ಪೂರ್ವಜರ ಪದ್ದತಿಗಳನ್ನು ಮಕ್ಕಳಿಗೆ ತಿಳಿಸಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು. </p>.<p>ರೈತ ಹೆದ್ನೆ ಮುರಿಗೇಂದ್ರಪ್ಪ, ಕಬ್ಬೂರು ರಾಜೀವ್, ನಂದಿನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಣ್ಣಗೌಡ್ರು, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ವಿಶ್ವನಾಥ್, ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್, ಪ್ರಕಾಶ್ ಕುರೇಮಾಗೇನಹಳ್ಳಿ, ಕಬ್ಬೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಯಕೊಂಡ:</strong> ಸಮೀಪದ ಕಬ್ಬೂರು ಗ್ರಾಮದಲ್ಲಿ 25ನೇ ವರ್ಷದ ಅಡಿಕೆ ರಾಶಿ ಪೂಜೆಯ ಸುಗ್ಗಿ ಸಂಭ್ರಮ ಮತ್ತು ರೈತರ ಧಾರ್ಮಿಕ ಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು. </p>.<p>ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಭೂಮಿಯನ್ನು ಆರೋಗ್ಯದಿಂದ ನೋಡಿಕೊಳ್ಳಬೇಕು. ಕಳೆ ನಾಶಕ ಸಿಂಪಡಣೆಯಿಂದ ಭೂಮಿ ಸತ್ವ ಕಳೆದುಕೊಂಡು ಫಸಲು ವಿಷಯುಕ್ತವಾಗಿದೆ. ಭೂಮಿಯ ಸತ್ವ ಉಳಿಕೊಳ್ಳಬೇಕಿದೆ’ ಎಂದರು. </p>.<p>‘ರೈತರು ಸೋಮಾರಿಗಳಲ್ಲ, ಅಜ್ಞಾನಿಗಳಲ್ಲ. ಕೃಷಿ ಇಲಾಖೆಯ ವಿಜ್ಞಾನಿಗಳಿಗಿಂತ ಅನುಭವಿಗಳು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರು ಬಸವ ಸ್ವಾಮೀಜಿ ಹೇಳಿದರು. </p>.<p>‘ಅಡಿಕೆ ಬೆಳೆಯಿಂದ ರೈತರು ಆರ್ಥಿಕವಾಗಿ ಸಧೃಢರಾಗುತ್ತಿದ್ದಾರೆ. ಏಕ ಬೆಳೆ ಬೆಳೆಯುವ ಬದಲು ಬಹು ಬೆಳೆ ಪದ್ದತಿಗೆ ತೆರೆದುಕೊಳ್ಳಬೇಕು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು. </p>.<p>‘ಅಡಿಕೆ ರಾಶಿ ಪೂಜೆ ಹೊಸ ಪ್ರಯತ್ನ. ಪೂರ್ವಜರ ಪದ್ದತಿಗಳನ್ನು ಮಕ್ಕಳಿಗೆ ತಿಳಿಸಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ತಿಳಿಸಿದರು. </p>.<p>ರೈತ ಹೆದ್ನೆ ಮುರಿಗೇಂದ್ರಪ್ಪ, ಕಬ್ಬೂರು ರಾಜೀವ್, ನಂದಿನಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಣ್ಣಗೌಡ್ರು, ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ವಿಶ್ವನಾಥ್, ಸಹಾಯಕ ತೋಟಗಾರಿಕಾ ಅಧಿಕಾರಿ ರಮೇಶ್, ಪ್ರಕಾಶ್ ಕುರೇಮಾಗೇನಹಳ್ಳಿ, ಕಬ್ಬೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>