<p><strong>ಮಲೇಬೆನ್ನೂರು: </strong>ಪಟ್ಟಣದ ಗ್ರಾಮ ದೇವತೆ ಏಕನಾಥೇಶ್ವರಿ(ಹೊರಗಿನಮ್ಮ) ದೇವಾಲಯದ ಆವರಣದಲ್ಲಿ ಗುರುವಾರ ‘ಹೂವಿನ ಬಾಣ ಬಿಟ್ಟು ಅಂಬು ಛೇದನ ಮಾಡಿ ಬನ್ನಿ ಮುಡಿದು ನಾಡಹಬ್ಬ ವಿಜಯದಶಮಿ' ಆಚರಿಸಿದರು.</p>.<p>ಗ್ರಾಮದ ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಹಟ್ಟಿ ದುರ್ಗಮ್ಮ, ಕಾಳಮ್ಮ, ಜೋಡಿ ಆಂಜನೇಯ, ಬಸವೇಶ್ವರ, ಬೀರಲಿಂಗೇಶ್ವರ ಉತ್ಸವಮೂರ್ತಿ ಪಾಲ್ಗೊಂಡಿದ್ದವು.</p>.<p>ಬನ್ನಿವೃಕ್ಷಕ್ಕೆ ಸಲ್ಲಿಸಿ ಪೂಜೆ ಸಲ್ಲಿಸಿದ ನಂತರ ರೈತ ಸಮೂಹ ಬೆಳೆ ಸಮರ್ಪಿಸಿದರು. ಕಿರಿಯರು ಹಿರಿಯರಿಗೆ ಬನ್ನಿಪತ್ರೆ ಕೊಟ್ಟು ಆಶೀರ್ವಾದ ಪಡೆದು ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಬನ್ನಿಮುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು.</p>.<p>ಗ್ರಾಮದ ಸರ್ವ ದೇವರ ರಾಜಬೀದಿ ಉತ್ಸವದೊಂದಿಗೆ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.</p>.<p><strong>ಬೀರಲಿಂಗೇಶ್ವರ ಕಾರಣಿಕ</strong>: ಪಟ್ಟಣದ ಬೀರಲಿಂಗೇಶ್ವರ ದೇವತೆ ಆವಾಹಿತ <strong><em>‘ಬಂಗಾರದ ಕಳಸಕ್ಕೆ ಮುತ್ತು ಸುರಿದೀತು,ಅದಕೆ ನಾನು ಅದೀನಿ, ಪರಾಕ್’</em></strong> ಎಂದು ಕಾರಣಿಕ ನುಡಿದ.</p>.<p><strong>ಮರಿಬನ್ನಿ ಆರಂಭ </strong>: ಇಲ್ಲಿನ ಬೀರಲಿಂಗೇಶ್ವರ ದೇವಾಲಯದಲ್ಲಿ ‘ಮರಿಬನ್ನಿ’ ಉತ್ಸವ ಗೋಧೂಳಿ ಲಗ್ನದಲ್ಲಿ ಆರಂಭವಾಯಿತು.</p>.<p>ದೇವಾಲಯವನ್ನು ತಳಿರು ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಗ್ರಾಮದ ಸಕಲ ದೇವತೆಗಳ ಉತ್ಸವ ಮೂರ್ತಿಗಳು ಇದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಪಟ್ಟಣದ ಗ್ರಾಮ ದೇವತೆ ಏಕನಾಥೇಶ್ವರಿ(ಹೊರಗಿನಮ್ಮ) ದೇವಾಲಯದ ಆವರಣದಲ್ಲಿ ಗುರುವಾರ ‘ಹೂವಿನ ಬಾಣ ಬಿಟ್ಟು ಅಂಬು ಛೇದನ ಮಾಡಿ ಬನ್ನಿ ಮುಡಿದು ನಾಡಹಬ್ಬ ವಿಜಯದಶಮಿ' ಆಚರಿಸಿದರು.</p>.<p>ಗ್ರಾಮದ ಏಕನಾಥೇಶ್ವರಿ, ಕೋಡಿಮಾರೇಶ್ವರಿ, ಹಟ್ಟಿ ದುರ್ಗಮ್ಮ, ಕಾಳಮ್ಮ, ಜೋಡಿ ಆಂಜನೇಯ, ಬಸವೇಶ್ವರ, ಬೀರಲಿಂಗೇಶ್ವರ ಉತ್ಸವಮೂರ್ತಿ ಪಾಲ್ಗೊಂಡಿದ್ದವು.</p>.<p>ಬನ್ನಿವೃಕ್ಷಕ್ಕೆ ಸಲ್ಲಿಸಿ ಪೂಜೆ ಸಲ್ಲಿಸಿದ ನಂತರ ರೈತ ಸಮೂಹ ಬೆಳೆ ಸಮರ್ಪಿಸಿದರು. ಕಿರಿಯರು ಹಿರಿಯರಿಗೆ ಬನ್ನಿಪತ್ರೆ ಕೊಟ್ಟು ಆಶೀರ್ವಾದ ಪಡೆದು ಶುಭಾಶಯ ವಿನಿಮಯ ಮಾಡಿಕೊಂಡರು.</p>.<p>ಬನ್ನಿಮುಡಿಯಲು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು.</p>.<p>ಗ್ರಾಮದ ಸರ್ವ ದೇವರ ರಾಜಬೀದಿ ಉತ್ಸವದೊಂದಿಗೆ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.</p>.<p><strong>ಬೀರಲಿಂಗೇಶ್ವರ ಕಾರಣಿಕ</strong>: ಪಟ್ಟಣದ ಬೀರಲಿಂಗೇಶ್ವರ ದೇವತೆ ಆವಾಹಿತ <strong><em>‘ಬಂಗಾರದ ಕಳಸಕ್ಕೆ ಮುತ್ತು ಸುರಿದೀತು,ಅದಕೆ ನಾನು ಅದೀನಿ, ಪರಾಕ್’</em></strong> ಎಂದು ಕಾರಣಿಕ ನುಡಿದ.</p>.<p><strong>ಮರಿಬನ್ನಿ ಆರಂಭ </strong>: ಇಲ್ಲಿನ ಬೀರಲಿಂಗೇಶ್ವರ ದೇವಾಲಯದಲ್ಲಿ ‘ಮರಿಬನ್ನಿ’ ಉತ್ಸವ ಗೋಧೂಳಿ ಲಗ್ನದಲ್ಲಿ ಆರಂಭವಾಯಿತು.</p>.<p>ದೇವಾಲಯವನ್ನು ತಳಿರು ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಗ್ರಾಮದ ಸಕಲ ದೇವತೆಗಳ ಉತ್ಸವ ಮೂರ್ತಿಗಳು ಇದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>