‘ಕಳೆದ ಮಳೆಗಾಲದಲ್ಲಿ ಉತ್ತಮ ಇಳುವರಿ ಬಂದಿತ್ತು. ದರವೂ ಕ್ವಿಂಟಲ್ಗೆ ₹3,000ವರೆಗೆ ಏರಿಕೆಯಾಗಿತ್ತು. ಆದರೆ ಬೇಸಿಗೆ ಬೆಳೆಯಲ್ಲಿ ಬೆಳೆದ ಭತ್ತಕ್ಕೆ ಕ್ವಿಂಟಲ್ಗೆ ₹2,500 ರಿಂದ ₹2,700 ದರ ಸಿಗುತ್ತಿದೆ. ಇತರ ಕಡೆಗಳಿಂದ ಭತ್ತದ ಆವಕ ಹೆಚ್ಚಿರುವುದರಿಂದ ವ್ಯಾಪಾರಿಗಳೂ ಸಹ ಹೆಚ್ಚಿನ ದರ ನೀಡಿ ಕೊಳ್ಳಲು ಮುಂದೆ ಬರುತ್ತಿಲ್ಲ. ಇದರಿಂದ ರೈತರಿಗೆ ಸಹಜವಾಗಿ ನಷ್ಟವುಂಟಾಗಿದೆ’ ಎಂದು ರೈತ ನಾಗೇಶ್ವರ ರಾವ್ ಹೇಳಿದರು.