ಸೋಮವಾರ ಮೃತರಾಗಿದ್ದ ಎಸ್ಸಿ ಸಮುದಾಯದ ಚಂದ್ರಪ್ಪ ಅವರ ಶವ ಸಂಸ್ಕಾರ ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸರ್ಕಾರ ಸೂಚಿಸಿದ ಸ್ಥಳದಲ್ಲಿ ನಡೆಯಿತಾದರೂ ಮುಂದೆ ಈ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೊರೆತಿಲ್ಲ.
ಪ್ರತಿ ಬಾರಿ ಎಸ್ಸಿ ಸಮುದಾಯದವರು ಮೃತರಾದಾಗಲೂ ಇದೇ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಎರಡೂ ಸಮುದಾಯದವರೂ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದರು. ಇದಕ್ಕೆ ಸ್ಪಂದಿಸಿದ ಎಸ್.ಟಿ. ಜನಾಂಗದವರು ಎಸ್ಸಿ ಸಮುದಾಯದವರ ಸ್ಮಶಾನಕ್ಕಾಗಿ ಬೇರೆಡೆ ನಿವೇಶನ ಒದಗಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಎಸ್ಸಿ ಸಮುದಾಯದವರು ಒಪ್ಪಿಗೆ ಕೊಟ್ಟು ಸೌಹಾರ್ದ ಮೂಡಿಸಬೇಕಿದೆ.