ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಭದ್ರತೆಯಲ್ಲಿ ಬಸ್‌ಗಳ ಸಂಚಾರ ಆರಂಭ

Last Updated 14 ಡಿಸೆಂಬರ್ 2020, 8:21 IST
ಅಕ್ಷರ ಗಾತ್ರ

ದಾವಣಗರೆ: ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.

ಮಧ್ಯಾಹ್ನದವರೆಗೆ ರಾಣೇಬೆನ್ನೂರು, ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್‌ಗಳು ಸಂಚರಿಸಿದವು.

ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್‌ಗಳು ಹೊರಡುತ್ತಿಲ್ಲ.

‘ದಾವಣಗೆರೆ 1,2 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್‌ಗಳಿಗೆ 7 ಬಸ್‌ಗಳು ಸಂಚರಿಸಿವೆ. ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ‍ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್‌ಗಳನ್ನು ಕಳುಹಿಸಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.

‘ದಿನಕ್ಕೆ ₹40 ಲಕ್ಷದಂತೆ ಮೂರು ದಿವದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಸರಿಹೋಗುವ ನಿರೀಕ್ಷೆ ಇದೆ’ ಎಂದು ಸಿದ್ದೇಶ್ವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT