<p><strong>ದಾವಣಗರೆ:</strong> ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್ಗಳ ಸಂಚಾರ ಆರಂಭಿಸಲಾಗಿದೆ.</p>.<p>ಮಧ್ಯಾಹ್ನದವರೆಗೆ ರಾಣೇಬೆನ್ನೂರು, ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್ಗಳು ಸಂಚರಿಸಿದವು.</p>.<p>ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್ಗಳು ಹೊರಡುತ್ತಿಲ್ಲ.</p>.<p>‘ದಾವಣಗೆರೆ 1,2 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್ಗಳಿಗೆ 7 ಬಸ್ಗಳು ಸಂಚರಿಸಿವೆ. ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್ಗಳನ್ನು ಕಳುಹಿಸಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.</p>.<p>‘ದಿನಕ್ಕೆ ₹40 ಲಕ್ಷದಂತೆ ಮೂರು ದಿವದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಸರಿಹೋಗುವ ನಿರೀಕ್ಷೆ ಇದೆ’ ಎಂದು ಸಿದ್ದೇಶ್ವರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗರೆ:</strong> ನಗರದಲ್ಲಿ ಪೊಲೀಸ್ ಭದ್ರತೆಯಲ್ಲಿ ಸೋಮವಾರ ಬಸ್ಗಳ ಸಂಚಾರ ಆರಂಭಿಸಲಾಗಿದೆ.</p>.<p>ಮಧ್ಯಾಹ್ನದವರೆಗೆ ರಾಣೇಬೆನ್ನೂರು, ಚಿತ್ರದುರ್ಗ ಹಾಗೂ ಹರಿಹರ ಪಟ್ಟಣಗಳಿಗೆ ತಲಾ ಎರಡು ಹಾಗೂ ಹರಪನಹಳ್ಳಿಗೆ ಒಂದು ಸೇರಿ 7 ಬಸ್ಗಳು ಸಂಚರಿಸಿದವು.</p>.<p>ಬಸ್ ಸಂಚಾರ ಆರಂಭವಾಗುತ್ತಿರುವ ಸುದ್ದಿ ತಿಳಿದು ವಿವಿಧ ನಗರ ಹಾಗೂ ಪಟ್ಟಣಗಳಿಗೆ ತೆರಳಲು ನಿಲ್ದಾಣಗಳತ್ತ ಬರುತ್ತಿದ್ದು, ಕೆಲವು ಪ್ರಯಾಣಿಕರು ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಆದರೆ ನಿಗದಿತ ಸಮಯಕ್ಕೆ ಬಸ್ಗಳು ಹೊರಡುತ್ತಿಲ್ಲ.</p>.<p>‘ದಾವಣಗೆರೆ 1,2 ಹಾಗೂ ಹರಿಹರ ಘಟಕಗಳ 1,132 ನೌಕರರಲ್ಲಿ ಕೇವಲ 14 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರು, ಕಲಬುರ್ಗಿ, ರಾಯಚೂರು, ಹುಮ್ನಾಬಾದ್ಗಳಿಗೆ 7 ಬಸ್ಗಳು ಸಂಚರಿಸಿವೆ. ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದ್ದು, ಯಾವುದೇ ತೊಂದರೆಯಾಗಿಲ್ಲ. ಚಾಲಕರು ಬಂದ ನಂತರ ಪ್ರಯಾಣಿಕರ ಅಗತ್ಯಗಳನ್ನು ನೋಡಿಕೊಂಡು ಬಸ್ಗಳನ್ನು ಕಳುಹಿಸಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್ ತಿಳಿಸಿದರು.</p>.<p>‘ದಿನಕ್ಕೆ ₹40 ಲಕ್ಷದಂತೆ ಮೂರು ದಿವದಿಂದ ₹1.20 ಕೋಟಿ ನಷ್ಟವಾಗಿದೆ. ಚಾಲಕರು ಸ್ವಇಚ್ಛೆಯಿಂದ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಸಂಜೆಯ ವೇಳೆಗೆ ಸರಿಹೋಗುವ ನಿರೀಕ್ಷೆ ಇದೆ’ ಎಂದು ಸಿದ್ದೇಶ್ವರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>