ರಾಮಕೃಷ್ಣಾಶ್ರಮದ ಸ್ವಾಮಿ ನಿತ್ಯಸ್ಥಾನಂದಜೀ, ‘ಕ್ರಿಶ್ಚಿಯನ್ ಧರ್ಮವೇ ಶ್ರೇಷ್ಠ. ಅದನ್ನು ಒಪ್ಪಿಕೊಂಡು, ವಿಶ್ವಮಾನ್ಯ ಧರ್ಮ ಎಂದು ಸ್ವೀಕರಿಸುವಂತೆ ಸಂದೇಶ ನೀಡಲು ಷಿಕಾಗೊದಲ್ಲಿ ಸರ್ವಧರ್ಮ ಸಮ್ಮೇಳನ ನಡೆಸಲಾಯಿತು. ಆದರೆ, ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ಸಾರಿದರು. ವಿವೇಕಾನಂದರು ಭಾಷಣ ಮಾಡದೇ ಇದ್ದರೆ ಷಿಕಾಗೊ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವೇ ಸಿಗುತ್ತಿರಲಿಲ್ಲ. ಭಾರತದತ್ತ ಯಾರೂ ಗಮನ ಹರಿಸುತ್ತಿರಲಿಲ್ಲ’ ಎಂದು ಹೇಳಿದರು.