ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸುಳ್ಳನ್ನೇ ಮಾರುಕಟ್ಟೆ ಮಾಡಿದ ಬಿಜೆಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 5 ಮೇ 2024, 7:14 IST
Last Updated : 5 ಮೇ 2024, 7:14 IST
ಫಾಲೋ ಮಾಡಿ
Comments
‘ಮುಖಂಡರು ಕಾರ್ಯಕರ್ತರ ಇಚ್ಛೆಯಂತೆ ಪ್ರಭಾ ಅಭ್ಯರ್ಥಿ’
‘ಕಾಂಗ್ರೆಸ್‌ ಜಿಲ್ಲಾ ಘಟಕದ ಮುಖಂಡರು ಕಾರ್ಯಕರ್ತರ ಇಚ್ಚೆಯಂತೆ ಶಾಮನೂರು ಕುಟುಂಬದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಜಿ.ಬಿ. ವಿನಯ್‌ಕುಮಾರ್‌ ಪಕ್ಷಕ್ಕೆ ಬಂದು 6 ತಿಂಗಳಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬ 40 ವರ್ಷಗಳಿಂದ ಕಾಂಗ್ರೆಸ್‌ ಜತೆಗಿದೆ. ಅದಕ್ಕೆ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಬೇಕು‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.  ‘ನಾನು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ‍ಪುರಿ ಸ್ವಾಮೀಜಿ ಎಚ್‌.ಎಂ.ರೇವಣ್ಣ ಕರೆದು ಮಾತನಾಡಿದರೂ ವಿನಯ್‌ಕುಮಾರ್‌ ಮಾತು ಕೇಳಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಅವರಿಗೆ ಏನು ಲಾಭವಿದೆ. ಅದು ಬಿಜೆಪಿಗೆ ಅಲ್ಲವೇ’ ಎಂದು ಪ್ರಶ್ನಿಸಿದರು. ‘ವಿನಯ್‌ಕುಮಾರ್‌ ಮನೆಗೆ ಮಾಜಿ ಸಚಿವ ಬೈರತಿ ಬಸವರಾಜ ರಾತ್ರೋರಾತ್ರಿ ಹೋಗಿದ್ದಾರೆ. ಏಕೆ ಹೋಗಿದ್ದಾರೆ? ವ್ಯವಹಾರ ಕುದುರಿಸಲಾ’ ಎಂದು ಆರೋಪಿಸಿದ ಸಿಎಂ ‘ಹಿಂದಿನ ಚುನಾವಣೆಯಲ್ಲಿ ಬೇರೆಯವರ ಟಿಕೆಟ್‌ ತಪ್ಪಿಸಿ ಬೈರತಿ ಬಸವರಾಜಗೆ ನೀಡಿದರೂ ಆತ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಅಂತಹವರಿಗೆ ಬೆಂಬಲ ನೀಡುವಿರಾ’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ನೋಡಲು ಮುಗಿಬಿದ್ದ ಅಭಿಮಾನಿಗಳು 
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೋಡಲು ಅಪಾರ ಸಂಖ್ಯೆಯಲ್ಲಿ ಸಮುದಾಯದವರು ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳು ಅವರು ಬರುವ ಹಾದಿಯಲ್ಲೇ ಫೋಟೊ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಯುವತಿಯರು ಮಹಿಳೆಯರು ದೂರದಿಂದಲೇ ಸಿದ್ದರಾಮಯ್ಯ ಫೋಟೊ ಕ್ಲಿಕ್ಕಿಸಿಕೊಂಡರು. ಸಿದ್ದರಾಮಯ್ಯ ಬರುತ್ತಿದ್ದಂತೆ ಘೋಷಣೆ ಕೂಗಿದರು. ಕಾರ್ಯಕ್ರಮದ ಹೊರಗೆ ಸಿದ್ದರಾಮಯ್ಯ ಚಿತ್ರ ಮುದ್ರಿಸಿದ್ದ ಕಂಬಳಿ ಮಾರಾಟ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಬಾಪೂಜಿ ಬ್ಯಾಂಕ್‌ ಸಮುದಾಯ ಭವನದಲ್ಲಿ ಸೇರಿದ್ದ ಜನರು ‘ಕುರುಬರೋ ನಾವು ಕುರುಬರೋ‘.. ‘ಟಗರು ಬಂತು ಟಗರು‘ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT