<p>ದಾವಣಗೆರೆ: ಜಿಲ್ಲೆಯಲ್ಲಿ 144 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 10 ಸಾವಿರ ದಾಟಿದೆ.</p>.<p>ಕುಂದವಾಡ ಕೆಎಚ್ಪಿ ಕಾಲೊನಿಯ 48 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು.</p>.<p>17 ವೃದ್ಧರು, 13 ವೃದ್ಧೆಯರು, 7 ಬಾಲಕಿಯರು, 4 ಬಾಲಕರಿಗೂ ಕೊರೊನಾ ಬಂದಿದೆ.</p>.<p>ಜಿಲ್ಲಾಧಿಕಾರಿ ವಾಹನದ ಚಾಲಕ, ಎಸ್ಎಸ್ ಆಸ್ಪತ್ರೆಯ ಮೂವರು, ಸಿ.ಜಿ. ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಜೆಜೆಎಂಎಂಸಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.</p>.<p>ದಾವಣಗೆರೆ ತಾಲ್ಲೂಕಿನ 46 ಮಂದಿಗೆ ಸೋಂಕು ಬಂದಿದೆ. ಹಳೇಬಿಸಲೇರಿ, ಜಂಪೇನಹಳ್ಳಿ, ದೊಗ್ಗಳ್ಳಿ, ಹಳೇಬಾತಿ ಹೀಗೆ ನಾಲ್ಕೈದು ಜನರನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಮಹಾನಗರ ಪಾಲಿಕೆಯ ವ್ಯಾಪ್ತಿಯವರು.</p>.<p>ಹರಿಹರದಲ್ಲಿ 69 ಮಂದಿಗೆ ಸೋಂಕು ತಗುಲಿದೆ. ಚನ್ನಗಿರಿಯ 17, ಹೊನ್ನಾಳಿ–ನ್ಯಾಮತಿಯ 9, ಜಗಳೂರಿನ 2 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಮತ್ತು ರಾಣೆಬೆನ್ನೂರಿನ ಇಬ್ಬರಿಗೆ ಕೊರೊನಾ ಬಂದಿದೆ.</p>.<p>ಸೋಂಕಿನಿಂದ ಗುಣಮುಖರಾಗಿ 322 ಮಂದಿ ಭಾನುವಾರ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 52 ವೃದ್ಧರು, 23 ವೃದ್ಧೆಯರು, ಏಳು ಬಾಲಕರು, ನಾಲ್ವರು ಬಾಲಕಿಯರು ಸೇರಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 12,897 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 10,293 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 226 ಮಂದಿ ಮೃತಪಟ್ಟಿದ್ದಾರೆ. 2378 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಜಿಲ್ಲೆಯಲ್ಲಿ 144 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 10 ಸಾವಿರ ದಾಟಿದೆ.</p>.<p>ಕುಂದವಾಡ ಕೆಎಚ್ಪಿ ಕಾಲೊನಿಯ 48 ವರ್ಷದ ಪುರುಷ ಮಧುಮೇಹ, ಅಧಿಕ ರಕ್ತದೊತ್ತಡ, ಉಸಿರಾಟದ ಸಮಸ್ಯೆಯಿಂದ ಮೃತಪಟ್ಟರು.</p>.<p>17 ವೃದ್ಧರು, 13 ವೃದ್ಧೆಯರು, 7 ಬಾಲಕಿಯರು, 4 ಬಾಲಕರಿಗೂ ಕೊರೊನಾ ಬಂದಿದೆ.</p>.<p>ಜಿಲ್ಲಾಧಿಕಾರಿ ವಾಹನದ ಚಾಲಕ, ಎಸ್ಎಸ್ ಆಸ್ಪತ್ರೆಯ ಮೂವರು, ಸಿ.ಜಿ. ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಜೆಜೆಎಂಎಂಸಿಯ ತಲಾ ಒಬ್ಬರಿಗೆ ಸೋಂಕು ತಗುಲಿದೆ.</p>.<p>ದಾವಣಗೆರೆ ತಾಲ್ಲೂಕಿನ 46 ಮಂದಿಗೆ ಸೋಂಕು ಬಂದಿದೆ. ಹಳೇಬಿಸಲೇರಿ, ಜಂಪೇನಹಳ್ಳಿ, ದೊಗ್ಗಳ್ಳಿ, ಹಳೇಬಾತಿ ಹೀಗೆ ನಾಲ್ಕೈದು ಜನರನ್ನು ಹೊರತುಪಡಿಸಿದರೆ ಉಳಿದ ಎಲ್ಲರೂ ಮಹಾನಗರ ಪಾಲಿಕೆಯ ವ್ಯಾಪ್ತಿಯವರು.</p>.<p>ಹರಿಹರದಲ್ಲಿ 69 ಮಂದಿಗೆ ಸೋಂಕು ತಗುಲಿದೆ. ಚನ್ನಗಿರಿಯ 17, ಹೊನ್ನಾಳಿ–ನ್ಯಾಮತಿಯ 9, ಜಗಳೂರಿನ 2 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾವೇರಿ ಮತ್ತು ರಾಣೆಬೆನ್ನೂರಿನ ಇಬ್ಬರಿಗೆ ಕೊರೊನಾ ಬಂದಿದೆ.</p>.<p>ಸೋಂಕಿನಿಂದ ಗುಣಮುಖರಾಗಿ 322 ಮಂದಿ ಭಾನುವಾರ ಬಿಡುಗಡೆಗೊಂಡಿದ್ದಾರೆ. ಅದರಲ್ಲಿ 52 ವೃದ್ಧರು, 23 ವೃದ್ಧೆಯರು, ಏಳು ಬಾಲಕರು, ನಾಲ್ವರು ಬಾಲಕಿಯರು ಸೇರಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 12,897 ಮಂದಿಗೆ ಕೊರೊನಾ ಬಂದಿದೆ. ಅದರಲ್ಲಿ 10,293 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 226 ಮಂದಿ ಮೃತಪಟ್ಟಿದ್ದಾರೆ. 2378 ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ ಏಳು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>