<p>ಉಚ್ಚಂಗಿದುರ್ಗ: ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಸಹೋದರ ಪಿ.ಟಿ. ಶಿವಾಜಿನಾಯ್ಕ ಹಾಗೂ ಶರಣಾನಾಯ್ಕ ಸಂಬಂಧಿಕರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಅರಸೀಕೆರೆ ಪೊಲೀಸರು 6 ಜನರನ್ನು<br />ಬಂಧಿಸಿದ್ದಾರೆ.</p>.<p>ಗಾಯಾಳು ಶರಣನಾಯ್ಕ ಅವರ ಸೊಸೆ ಶ್ರೀದೇವಿ ನೀಡಿದ ದೂರಿನ ಅನ್ವಯ ಪಿ.ಟಿ. ಶಿವಾಜಿನಾಯ್ಕ, ಕುಮಾರಿ ಬಾಯಿ, ರಾಹುಲ್ ಎಂಬುವವರನ್ನು ಬಂಧಿಸಲಾಗಿದೆ.</p>.<p>ಪಿ.ಟಿ. ಶಿವಾಜಿನಾಯ್ಕ ಅವರ ಪತ್ನಿ ಕುಮಾರಿಬಾಯಿ ಅವರೂ ನೀಡಿದ್ದ ಪ್ರತಿ ದೂರು ಆಧರಿಸಿ ಶ್ರೀದೇವಿ, ಶಿವಕುಮಾರ್, ಜಗದೀಶ ಅವರನ್ನೂ ಬಂಧಿಸಲಾಗಿದೆ.</p>.<p>ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿರುವ ಶರಣನಾಯ್ಕ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಿಬಾಯಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ</p>.<p>ಜೂನ್ 29ರಂದು ಶಾಸಕರ ತವರು ಲಕ್ಷ್ಮೀಪುರ ಗ್ರಾಮದಲ್ಲಿ ಸಹೋದರ ಪಿ.ಟಿ. ಶಿವಾಜಿನಾಯ್ಕ ಅವರ ಮನೆಯ ಸುತ್ತಲೂ ತಂತಿಬೇಲಿ ನಿರ್ಮಿಸಲು ಗುಂಡಿ ತೋಡುತ್ತಿರುವಾಗ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ಅರಸೀಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಚ್ಚಂಗಿದುರ್ಗ: ಸಮೀಪದ ಲಕ್ಷ್ಮೀಪುರ ಗ್ರಾಮದಲ್ಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಸಹೋದರ ಪಿ.ಟಿ. ಶಿವಾಜಿನಾಯ್ಕ ಹಾಗೂ ಶರಣಾನಾಯ್ಕ ಸಂಬಂಧಿಕರ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಅರಸೀಕೆರೆ ಪೊಲೀಸರು 6 ಜನರನ್ನು<br />ಬಂಧಿಸಿದ್ದಾರೆ.</p>.<p>ಗಾಯಾಳು ಶರಣನಾಯ್ಕ ಅವರ ಸೊಸೆ ಶ್ರೀದೇವಿ ನೀಡಿದ ದೂರಿನ ಅನ್ವಯ ಪಿ.ಟಿ. ಶಿವಾಜಿನಾಯ್ಕ, ಕುಮಾರಿ ಬಾಯಿ, ರಾಹುಲ್ ಎಂಬುವವರನ್ನು ಬಂಧಿಸಲಾಗಿದೆ.</p>.<p>ಪಿ.ಟಿ. ಶಿವಾಜಿನಾಯ್ಕ ಅವರ ಪತ್ನಿ ಕುಮಾರಿಬಾಯಿ ಅವರೂ ನೀಡಿದ್ದ ಪ್ರತಿ ದೂರು ಆಧರಿಸಿ ಶ್ರೀದೇವಿ, ಶಿವಕುಮಾರ್, ಜಗದೀಶ ಅವರನ್ನೂ ಬಂಧಿಸಲಾಗಿದೆ.</p>.<p>ಹಲ್ಲೆ ಪ್ರಕರಣದಲ್ಲಿ ಗಾಯಗೊಂಡಿರುವ ಶರಣನಾಯ್ಕ ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವಿಬಾಯಿ ಎಂಬುವವರು ತಲೆಮರೆಸಿಕೊಂಡಿದ್ದಾರೆ.ಆರೋಪಿಗಳನ್ನು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ</p>.<p>ಜೂನ್ 29ರಂದು ಶಾಸಕರ ತವರು ಲಕ್ಷ್ಮೀಪುರ ಗ್ರಾಮದಲ್ಲಿ ಸಹೋದರ ಪಿ.ಟಿ. ಶಿವಾಜಿನಾಯ್ಕ ಅವರ ಮನೆಯ ಸುತ್ತಲೂ ತಂತಿಬೇಲಿ ನಿರ್ಮಿಸಲು ಗುಂಡಿ ತೋಡುತ್ತಿರುವಾಗ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ಅರಸೀಕೆರೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>