<p><strong>ಮಲೇಬೆನ್ನೂರು: </strong>ಪಟ್ಟಣದಲ್ಲಿ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ನೌಕರರು ‘ಪ್ರಜಾಪ್ರಭುತ್ವ ದಿನ‘ದ ಅಂಗವಾಗಿ ಮಾನವ ಸರಪಳಿ ರಚಿಸಿದರು. </p>.<p>ಕೊಮಾರನಹಳ್ಳಿ ಕಣಿವೆಮನೆ ಪ್ರದೇಶದ ತಾಲ್ಲೂಕು ಗಡಿಯಿಂದ ಸಾಲಾಗಿ ನಿಂತು ಗಮನ ಸೆಳೆದರು. </p>.<p>ಛದ್ಮವೇ಼ಷಧಾರಿ ಮಕ್ಕಳು, ಬ್ಯಾಂಡ್ ವಾದನ, ಡೊಳ್ಳು, ನಾಸಿಕ್ ಡೋಲು, ತಮಟೆ ಮೇಳ, ವೀರ ಭದ್ರ ದೇವರ ಕುಣಿತ, ಮಂಟೆ ಸ್ವಾಮಿ ಪದ, ಬೀಸು ಕಂಸಾಳೆ ನೃತ್ಯ ಮಾಡಿದರು. </p>.<p>ಪುರಸಭಾ ಕಚೇರಿ ಬಳಿ ಉಪತಹಶೀಲ್ದಾರ್ ಆರ್.ರವಿ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಸದಸ್ಯರು, ಸಿಬ್ಬಂದಿ ಇದ್ದರು. </p>.<p>ರಾಜ್ಯ ಹೆದ್ದಾರಿ 25ರಲ್ಲಿ ನೆರೆದಿದ್ದವರಿಗೆ ದೂಳಿನ ಮಜ್ಜನವಾಯ್ತು. ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಕಚೇರಿಯಿಂದ ಗಡಿಯವರೆಗೂ ವಿದ್ಯಾರ್ಥಿ, ಶಿಕ್ಷಕರು ಬೆಳಿಗ್ಗೆ 7 ರಿಂದ 10 ಗಂಟೆ ತನಕ ಬಿಸಿಲಿನಲ್ಲಿ ನಿಂತು ಹಿಡಿಶಾಪ ಹಾಕಿದರು. </p>.<p>ಕೆಲವೆಡೆ ಸಾರ್ವಜನಿಕರು, ಹೋಟೆಲ್, ಸ್ವಸಹಾಯ ಸಂಘದವರು ಕುಡಿಯುವ ನೀರು, ಬಿಸ್ಕತ್ ವಿತರಿಸಿದರು. ಕೊಮಾರನಹಳ್ಳಿ ಬಳಿ ವಿದ್ಯಾರ್ಥಿನಿಯೊಬ್ಬಳು ಮೂರ್ಛೆ ಹೋದ ಘಟನೆಯೂ ನಡೆಯಿತು. ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿದರು. </p>.<p>‘ದೂರದ ಶಾಲೆಗಳಿಂದ ವಾಹನಗಳ ಮೂಲಕ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಕರೆ ತಂದಿರುವುದು ತಪ್ಪು. ಅವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ, ಕನಿಷ್ಠ ಕುಡಿಯುವ ನೀರು ಸರಬರಾಜು ಮಾಡಿಲ್ಲ. 3 ಗಂಟೆ ಮಕ್ಕಳು ಕಲುಷಿತ ವಾತಾವರಣದಲ್ಲಿ ನಿಲ್ಲಬೇಕಾಯಿತು’ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು: </strong>ಪಟ್ಟಣದಲ್ಲಿ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಶಾಲೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ನೌಕರರು ‘ಪ್ರಜಾಪ್ರಭುತ್ವ ದಿನ‘ದ ಅಂಗವಾಗಿ ಮಾನವ ಸರಪಳಿ ರಚಿಸಿದರು. </p>.<p>ಕೊಮಾರನಹಳ್ಳಿ ಕಣಿವೆಮನೆ ಪ್ರದೇಶದ ತಾಲ್ಲೂಕು ಗಡಿಯಿಂದ ಸಾಲಾಗಿ ನಿಂತು ಗಮನ ಸೆಳೆದರು. </p>.<p>ಛದ್ಮವೇ಼ಷಧಾರಿ ಮಕ್ಕಳು, ಬ್ಯಾಂಡ್ ವಾದನ, ಡೊಳ್ಳು, ನಾಸಿಕ್ ಡೋಲು, ತಮಟೆ ಮೇಳ, ವೀರ ಭದ್ರ ದೇವರ ಕುಣಿತ, ಮಂಟೆ ಸ್ವಾಮಿ ಪದ, ಬೀಸು ಕಂಸಾಳೆ ನೃತ್ಯ ಮಾಡಿದರು. </p>.<p>ಪುರಸಭಾ ಕಚೇರಿ ಬಳಿ ಉಪತಹಶೀಲ್ದಾರ್ ಆರ್.ರವಿ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಸದಸ್ಯರು, ಸಿಬ್ಬಂದಿ ಇದ್ದರು. </p>.<p>ರಾಜ್ಯ ಹೆದ್ದಾರಿ 25ರಲ್ಲಿ ನೆರೆದಿದ್ದವರಿಗೆ ದೂಳಿನ ಮಜ್ಜನವಾಯ್ತು. ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಕಚೇರಿಯಿಂದ ಗಡಿಯವರೆಗೂ ವಿದ್ಯಾರ್ಥಿ, ಶಿಕ್ಷಕರು ಬೆಳಿಗ್ಗೆ 7 ರಿಂದ 10 ಗಂಟೆ ತನಕ ಬಿಸಿಲಿನಲ್ಲಿ ನಿಂತು ಹಿಡಿಶಾಪ ಹಾಕಿದರು. </p>.<p>ಕೆಲವೆಡೆ ಸಾರ್ವಜನಿಕರು, ಹೋಟೆಲ್, ಸ್ವಸಹಾಯ ಸಂಘದವರು ಕುಡಿಯುವ ನೀರು, ಬಿಸ್ಕತ್ ವಿತರಿಸಿದರು. ಕೊಮಾರನಹಳ್ಳಿ ಬಳಿ ವಿದ್ಯಾರ್ಥಿನಿಯೊಬ್ಬಳು ಮೂರ್ಛೆ ಹೋದ ಘಟನೆಯೂ ನಡೆಯಿತು. ಶಿಕ್ಷಕರು ಪ್ರಥಮ ಚಿಕಿತ್ಸೆ ನೀಡಿದರು. </p>.<p>‘ದೂರದ ಶಾಲೆಗಳಿಂದ ವಾಹನಗಳ ಮೂಲಕ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಕರೆ ತಂದಿರುವುದು ತಪ್ಪು. ಅವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ, ಕನಿಷ್ಠ ಕುಡಿಯುವ ನೀರು ಸರಬರಾಜು ಮಾಡಿಲ್ಲ. 3 ಗಂಟೆ ಮಕ್ಕಳು ಕಲುಷಿತ ವಾತಾವರಣದಲ್ಲಿ ನಿಲ್ಲಬೇಕಾಯಿತು’ ಎಂದು ಬಿಜೆಪಿ ಮುಖಂಡ ಹನಗವಾಡಿ ವೀರೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>