<p><strong>ಮಲೇಬೆನ್ನೂರು</strong>: ‘ಅಪೌಷ್ಟಿಕತೆ, ರಕ್ತ ಹೀನತೆ ಸಮಸ್ಯೆಯಿಂದ ಪಾರಾಗಲು ಧಾನ್ಯ, ತರಕಾರಿ, ನಾರಿನ ಅಂಶವಿರುವ ತರಕಾರಿ ಸೇವಿಸಿ’ ಎಂದು ಡಾ.ಪ್ರಶಾಂತ್ ಸಲಹೆ ನೀಡಿದರು.</p>.<p>ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ‘ಪೋಷಣ್ ಮಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗರ್ಭಿಣಿಯರು ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ದೂರ ಇಡಲು ಸಾಧ್ಯ. ತಾಯಿ– ಮಗು ರಕ್ಷಣೆಗೆ ನಿಯಮಿತ ಆಹಾರ ಪದ್ಧತಿ ಅನುಸರಿಸಿ. ಜಂಕ್ಫುಡ್, ಫಾಸ್ಟ್ ಫುಡ್, ಎಣ್ಣೆ ತಿಂಡಿಯಿಂದ ದೂರವಿರಿ’ ಎಂದು ತಿಳಿಸಿದರು.</p>.<p>ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾತನಾಡಿ, ಗರ್ಭಿಣಿಯರು ಸಮತೋಲ ಆಹಾರ ಸೇವಿಸಿ. ನಿಯಮಿತ ವ್ಯಾಯಾಮ, ಆಹಾರ ಪದ್ಧತಿ ಅನುಸರಿಸಿ’ ಎಂದು ಸಲಹೆ ನೀಡಿದರು.</p>.<p>ಪುರಸಭೆ ಉಪಾಧ್ಯಕ್ಷೆ ನಪ್ಸಿಯಾ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಶು ಯೋಜನಾಧಿಕಾರಿ ರಷೀದಾಬಾನು, ಪುರಸಭಾ ಸದಸ್ಯ ನಯಾಜ್, ಗೌಡ್ರ ಮಂಜಣ್ಣ, ಬಿ.ಸುರೇಶ್ ಮಾತನಾಡಿದರು.</p>.<p>ನಿಸಾರ್ ಅಹ್ಮದ್, ಗೀತಮ್ಮ, ವಿಮಲಾ, ಶೀಲಾ, ವಿಜಯಲಕ್ಷ್ಮೀ, ಸುಲೋಚನಮ್ಮ, ಪುರಸಭಾ ಸದಸ್ಯರು, ನಾಗರಿಕರು ಹಾಗೂ ಗರ್ಭಿಣಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲೇಬೆನ್ನೂರು</strong>: ‘ಅಪೌಷ್ಟಿಕತೆ, ರಕ್ತ ಹೀನತೆ ಸಮಸ್ಯೆಯಿಂದ ಪಾರಾಗಲು ಧಾನ್ಯ, ತರಕಾರಿ, ನಾರಿನ ಅಂಶವಿರುವ ತರಕಾರಿ ಸೇವಿಸಿ’ ಎಂದು ಡಾ.ಪ್ರಶಾಂತ್ ಸಲಹೆ ನೀಡಿದರು.</p>.<p>ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ‘ಪೋಷಣ್ ಮಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಗರ್ಭಿಣಿಯರು ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ದೂರ ಇಡಲು ಸಾಧ್ಯ. ತಾಯಿ– ಮಗು ರಕ್ಷಣೆಗೆ ನಿಯಮಿತ ಆಹಾರ ಪದ್ಧತಿ ಅನುಸರಿಸಿ. ಜಂಕ್ಫುಡ್, ಫಾಸ್ಟ್ ಫುಡ್, ಎಣ್ಣೆ ತಿಂಡಿಯಿಂದ ದೂರವಿರಿ’ ಎಂದು ತಿಳಿಸಿದರು.</p>.<p>ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾತನಾಡಿ, ಗರ್ಭಿಣಿಯರು ಸಮತೋಲ ಆಹಾರ ಸೇವಿಸಿ. ನಿಯಮಿತ ವ್ಯಾಯಾಮ, ಆಹಾರ ಪದ್ಧತಿ ಅನುಸರಿಸಿ’ ಎಂದು ಸಲಹೆ ನೀಡಿದರು.</p>.<p>ಪುರಸಭೆ ಉಪಾಧ್ಯಕ್ಷೆ ನಪ್ಸಿಯಾ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಶು ಯೋಜನಾಧಿಕಾರಿ ರಷೀದಾಬಾನು, ಪುರಸಭಾ ಸದಸ್ಯ ನಯಾಜ್, ಗೌಡ್ರ ಮಂಜಣ್ಣ, ಬಿ.ಸುರೇಶ್ ಮಾತನಾಡಿದರು.</p>.<p>ನಿಸಾರ್ ಅಹ್ಮದ್, ಗೀತಮ್ಮ, ವಿಮಲಾ, ಶೀಲಾ, ವಿಜಯಲಕ್ಷ್ಮೀ, ಸುಲೋಚನಮ್ಮ, ಪುರಸಭಾ ಸದಸ್ಯರು, ನಾಗರಿಕರು ಹಾಗೂ ಗರ್ಭಿಣಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>