<p><strong>ದಾವಣಗೆರೆ: </strong>ಮುಸ್ಲಿಮರನ್ನು ಹಿಂದೂಗಳನ್ನಾಗಿ ಮಾಡಬೇಕು. ಹಿಂದೂ ಧರ್ಮಕ್ಕೆ ಮತಾಂತರ ಸಾಧ್ಯವಿಲ್ಲ. ಯಾವುದಾದರೂ ಜಾತಿಗೆ ಸೇರಿಸಲು ಮಾತ್ರ ಸಾಧ್ಯ. ಹಾಗಾಗಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಲು ಬ್ರಾಹ್ಮಣ್ಯ ಹೊರಟಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದಿಸಿದರು.</p>.<p>ಮೇ ಸಾಹಿತ್ಯ ಮೇಳದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ, ನವಲಕಲ್ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>ಹಿಜಾಬ್ನಿಂದ ಶುರುವಾಯಿತು. ಹಲಾಲ್, ಆಜಾನ್ ವಿವಾದವಾಯಿತು. ಬಳಿಕ ದೇವಸ್ಥಾನಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು. ಅವರ ಆಟೊ, ಟ್ಯಾಕ್ಸಿಗಳಲ್ಲಿ ಹೋಗಬಾರದು ಎಂದೆಲ್ಲ ಶುರು ಮಾಡಿದರು. ಹಿಂದುಗಳು, ಹಿಂದೂ ರಾಷ್ಟ್ರ ಅನ್ನಿಸಿಕೊಳ್ಳಲು ಇದೆಲ್ಲ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.</p>.<p>ಪ್ರಜಾಪ್ರಭುತ್ವ ಅವಹೇಳನಕ್ಕೆ ಒಳಗಾಗಿದೆ. ಬಾಯಿ ಮಾತಿನಪ್ರಜಾಪ್ರಭುತ್ವ ಮಾತ್ರ ಕಾಣುತ್ತಿದ್ದೇವೆ. ನಡೆಯುತ್ತಿರುವುದು ಬೇರೆ.<br />ಸಾಮಾಜಿಕ ಮೌಲ್ಯ, ಮಾನವೀಯ ಮೌಲ್ಯ ಯಾಕೆ ಕಳೆದುಕೊಳ್ಳುತ್ತದೆ. ಜನರಲ್ಲಿ, ವ್ಯವಸ್ಥೆಯಲ್ಲಿ ಏನಿದೆಯೋ ಅದೇ ಪ್ರಭುತ್ವದಲ್ಲಿ ವ್ಯಕ್ತವಾಗಿದೆ. ಜನರು ಇಷ್ಟು ಅಮಾನವೀಯರಾಗಲು ಮಾಧ್ಯಮ ಅದರಲ್ಲೂ ದೃಶ್ಯಮಾಧ್ಯಮ ಕಾರಣ. ಯಾರನ್ನಾದರೂ ಎತ್ತಿಕಟ್ಟುವ ಕೆಲಸ ಈ ಮಾಧ್ಯಮ ಮಾಡುತ್ತಿದೆ. ಇದು ಮಾಧ್ಯಮ ಜಿಹಾದ್ ಎಂದು ಆಪಾದಿಸಿದರು.</p>.<p>ಬ್ರಾಹ್ಮಣರ ಸಂಖ್ಯೆ ಶೇ 3 ಇದೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಜನಪರವಾಗಿ ಇದ್ದಾರೆ. ಮತ್ತೆ<br />ಒಂದು ಭಾಗದಷ್ಟು ಜನರು ಜನಪರ, ಜನವಿರೋಧಿ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದಾರೆ. ಉಳಿದ ಒಂದು ಭಾಗ ಮಾತ್ರ ಬ್ರಾಹ್ಮಣ್ಯವನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂಘಪರಿವಾರದಲ್ಲಿ ಅವರೇ ಇದ್ದಾರೆ. ಇವರೇ ಸಮಾಜಕ್ಕೆ ಅಪಾಯಕಾರಿ ಎಂದು ವಿಶ್ಲೇಷಿಸಿದರು.</p>.<p>ಬಡವರಿಗೆ ಹಿಂಸೆ ಕೊಡುವುದರಲ್ಲೇ ಪ್ರಭುತ್ವ ಖುಷಿ ಪಡುತ್ತಿದೆ. ಕೆಲವೇ ಜನರ ಸುಖಕ್ಕಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ.</p>.<p>ಅನುಕೂಲ ಜಾತಿಗಳು ಅಂದರೆ ಶೂದ್ರರಲ್ಲಿ ಮೇಲ್ಜಾತಿಗಳು ಬ್ರಾಹ್ಮಣ್ಯವನ್ನು ಅನುಸರಿಸುತ್ತವೆ. ಹಿಂದೂ ಪದ್ಧತಿಯಲ್ಲಿ ಜಾತಿಗಳಿವೆ. ಆದರೆ ಮುಸ್ಲಿಮರು, ಕ್ರೈಸ್ತರು ಕೂಡ ಜಾತಿ ಅನುಸರಿಸುತ್ತಾರೆ ಎಂದರೆ ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.</p>.<p>ದಲಿತರು ಮತ್ತೆ ಮತ್ತೆ ದೇವಸ್ಥಾನಕ್ಕೆ ಹೋಗುತ್ತಾರೆ ಹೊರದಬ್ಬಿಸಿಕೊಳ್ಲುತ್ತಾರೆ. ಹಿಂದೂಗಳು ಎಂದು ಕರೆಸಿಕೊಳ್ಳಲು ಹಾತೊರೆಯುವ ಶೂದ್ರರು, ಅತಿಶೂದ್ರರು ಭಾರತದ ಇತಿಹಾಸವನ್ನು ತಿಳಿಯಬೇಕು. ಸ್ವಾತಂತ್ರ್ಯ ಬರುವ ಹಿಂದಿನ 250 ವರ್ಷ ಬ್ರಿಟಿಷರು ಆಳಿದ್ದರು. ಅದಕ್ಕಿಂತ ಹಿಂದೆ 800 ವರ್ಷ ಮುಸ್ಲಿಮರು ಆಳಿದ್ದರು. ಈ ದೇಶದಲ್ಲಿ ಒಂದು ಸಾವಿರ ವರ್ಷಗಳ ಕಾಲ ಬೌದ್ಧರಿದ್ದರು. ಈ ಒಂದು ಸಾವಿರ ವರ್ಷಗಳ ಇತಿಹಾಸವನ್ನು ಸಂಪೂರ್ಣವಾಗಿ ಅಳಿಸಿಹಾಕಿದ್ದರು. ಬ್ರಿಟಿಷರು ಬಂದ ಮೇಲೆ ಸಂಶೋಧನೆ ಮಾಡಿದಾಗ ಇದು ಬೆಳಕಿಗೆ ಬಂತು ಎಂದು ಮಾಹಿತಿ ನೀಡಿದರು.</p>.<p>ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯನ್ನು ಮಕ್ಕಳಿಗೆ ಪಠ್ಯ ಮಾಡಬೇಕು ಎಂದು ಆಗ್ರಹಿಸಿದರು.</p>.<p>ವಿ.ಎ. ಲಕ್ಷ್ಮಣ್ ಬೆಂಗಳೂರು, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ ಅಂಕೋಲ ಅವರಿಗೆ 2020, 2021 ಮತ್ತು 2022ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಜೆ.ಎಸ್. ಜಯದೇವ ಚಾಮರಾಜನಗರ, ಎಸ್. ಶಾಂತಮ್ಮ ಕೋಲಾರ, ಸಿ.<br />ಚನ್ನಬಸವಣ್ಣ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿ ನೀಡಲಾಯಿತು. ಸಾಹಿತಿ ಬಿ.ಟಿ. ಜಾಹ್ನವಿ ಅವರಿಗೆ ‘ನವಲಕಲ್ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p class="Briefhead"><strong>‘ದೇವಸ್ಥಾನ ಅಗೆದರೆ ಬೌದ್ಧರ ಆಲಯ ಸಿಗಲಿವೆ’</strong><br />ದೇವಸ್ಥಾನ ಆಗಿತ್ತು ಎಂದು ಮಸೀದಿಗಳನ್ನು ಅಗೆಯಲಾಗುತ್ತಿದೆ. ಮಸೀದಿ ಬಿಟ್ಟು ದೇವಸ್ಥಾನಗಳನ್ನು ಅಗೆದರೆ ಬೌದ್ಧರ ಆಲಯಗಳು ಸಿಗಲಿವೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.</p>.<p>ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಹಿಡಿದು ವಾರಣಾಸಿವರೆಗೆ, ತಿರುಪತಿಯಿಂದ ಹಿಡಿದು ಹೆಚ್ಚು ಜನ ಸೇರುವ ಎಲ್ಲ ದೇವಸ್ಥಾನಗಳು ಬೌದ್ಧರದ್ದಾಗಿದ್ದವು. ಅಲ್ಲಿ ಇರುವುದು ಬುದ್ಧನ ಮೂರ್ತಿಗಳು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಮುಸ್ಲಿಮರನ್ನು ಹಿಂದೂಗಳನ್ನಾಗಿ ಮಾಡಬೇಕು. ಹಿಂದೂ ಧರ್ಮಕ್ಕೆ ಮತಾಂತರ ಸಾಧ್ಯವಿಲ್ಲ. ಯಾವುದಾದರೂ ಜಾತಿಗೆ ಸೇರಿಸಲು ಮಾತ್ರ ಸಾಧ್ಯ. ಹಾಗಾಗಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಲು ಬ್ರಾಹ್ಮಣ್ಯ ಹೊರಟಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ವಿಷಾದಿಸಿದರು.</p>.<p>ಮೇ ಸಾಹಿತ್ಯ ಮೇಳದಲ್ಲಿ ವಿಭಾ ಸಾಹಿತ್ಯ ಪ್ರಶಸ್ತಿ, ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ, ನವಲಕಲ್ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.</p>.<p>ಹಿಜಾಬ್ನಿಂದ ಶುರುವಾಯಿತು. ಹಲಾಲ್, ಆಜಾನ್ ವಿವಾದವಾಯಿತು. ಬಳಿಕ ದೇವಸ್ಥಾನಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು. ಅವರ ಆಟೊ, ಟ್ಯಾಕ್ಸಿಗಳಲ್ಲಿ ಹೋಗಬಾರದು ಎಂದೆಲ್ಲ ಶುರು ಮಾಡಿದರು. ಹಿಂದುಗಳು, ಹಿಂದೂ ರಾಷ್ಟ್ರ ಅನ್ನಿಸಿಕೊಳ್ಳಲು ಇದೆಲ್ಲ ಮಾಡಬೇಕಿತ್ತಾ ಎಂದು ಪ್ರಶ್ನಿಸಿದರು.</p>.<p>ಪ್ರಜಾಪ್ರಭುತ್ವ ಅವಹೇಳನಕ್ಕೆ ಒಳಗಾಗಿದೆ. ಬಾಯಿ ಮಾತಿನಪ್ರಜಾಪ್ರಭುತ್ವ ಮಾತ್ರ ಕಾಣುತ್ತಿದ್ದೇವೆ. ನಡೆಯುತ್ತಿರುವುದು ಬೇರೆ.<br />ಸಾಮಾಜಿಕ ಮೌಲ್ಯ, ಮಾನವೀಯ ಮೌಲ್ಯ ಯಾಕೆ ಕಳೆದುಕೊಳ್ಳುತ್ತದೆ. ಜನರಲ್ಲಿ, ವ್ಯವಸ್ಥೆಯಲ್ಲಿ ಏನಿದೆಯೋ ಅದೇ ಪ್ರಭುತ್ವದಲ್ಲಿ ವ್ಯಕ್ತವಾಗಿದೆ. ಜನರು ಇಷ್ಟು ಅಮಾನವೀಯರಾಗಲು ಮಾಧ್ಯಮ ಅದರಲ್ಲೂ ದೃಶ್ಯಮಾಧ್ಯಮ ಕಾರಣ. ಯಾರನ್ನಾದರೂ ಎತ್ತಿಕಟ್ಟುವ ಕೆಲಸ ಈ ಮಾಧ್ಯಮ ಮಾಡುತ್ತಿದೆ. ಇದು ಮಾಧ್ಯಮ ಜಿಹಾದ್ ಎಂದು ಆಪಾದಿಸಿದರು.</p>.<p>ಬ್ರಾಹ್ಮಣರ ಸಂಖ್ಯೆ ಶೇ 3 ಇದೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಜನಪರವಾಗಿ ಇದ್ದಾರೆ. ಮತ್ತೆ<br />ಒಂದು ಭಾಗದಷ್ಟು ಜನರು ಜನಪರ, ಜನವಿರೋಧಿ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದಾರೆ. ಉಳಿದ ಒಂದು ಭಾಗ ಮಾತ್ರ ಬ್ರಾಹ್ಮಣ್ಯವನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂಘಪರಿವಾರದಲ್ಲಿ ಅವರೇ ಇದ್ದಾರೆ. ಇವರೇ ಸಮಾಜಕ್ಕೆ ಅಪಾಯಕಾರಿ ಎಂದು ವಿಶ್ಲೇಷಿಸಿದರು.</p>.<p>ಬಡವರಿಗೆ ಹಿಂಸೆ ಕೊಡುವುದರಲ್ಲೇ ಪ್ರಭುತ್ವ ಖುಷಿ ಪಡುತ್ತಿದೆ. ಕೆಲವೇ ಜನರ ಸುಖಕ್ಕಾಗಿ ಈ ಸರ್ಕಾರ ಕೆಲಸ ಮಾಡುತ್ತಿದೆ.</p>.<p>ಅನುಕೂಲ ಜಾತಿಗಳು ಅಂದರೆ ಶೂದ್ರರಲ್ಲಿ ಮೇಲ್ಜಾತಿಗಳು ಬ್ರಾಹ್ಮಣ್ಯವನ್ನು ಅನುಸರಿಸುತ್ತವೆ. ಹಿಂದೂ ಪದ್ಧತಿಯಲ್ಲಿ ಜಾತಿಗಳಿವೆ. ಆದರೆ ಮುಸ್ಲಿಮರು, ಕ್ರೈಸ್ತರು ಕೂಡ ಜಾತಿ ಅನುಸರಿಸುತ್ತಾರೆ ಎಂದರೆ ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.</p>.<p>ದಲಿತರು ಮತ್ತೆ ಮತ್ತೆ ದೇವಸ್ಥಾನಕ್ಕೆ ಹೋಗುತ್ತಾರೆ ಹೊರದಬ್ಬಿಸಿಕೊಳ್ಲುತ್ತಾರೆ. ಹಿಂದೂಗಳು ಎಂದು ಕರೆಸಿಕೊಳ್ಳಲು ಹಾತೊರೆಯುವ ಶೂದ್ರರು, ಅತಿಶೂದ್ರರು ಭಾರತದ ಇತಿಹಾಸವನ್ನು ತಿಳಿಯಬೇಕು. ಸ್ವಾತಂತ್ರ್ಯ ಬರುವ ಹಿಂದಿನ 250 ವರ್ಷ ಬ್ರಿಟಿಷರು ಆಳಿದ್ದರು. ಅದಕ್ಕಿಂತ ಹಿಂದೆ 800 ವರ್ಷ ಮುಸ್ಲಿಮರು ಆಳಿದ್ದರು. ಈ ದೇಶದಲ್ಲಿ ಒಂದು ಸಾವಿರ ವರ್ಷಗಳ ಕಾಲ ಬೌದ್ಧರಿದ್ದರು. ಈ ಒಂದು ಸಾವಿರ ವರ್ಷಗಳ ಇತಿಹಾಸವನ್ನು ಸಂಪೂರ್ಣವಾಗಿ ಅಳಿಸಿಹಾಕಿದ್ದರು. ಬ್ರಿಟಿಷರು ಬಂದ ಮೇಲೆ ಸಂಶೋಧನೆ ಮಾಡಿದಾಗ ಇದು ಬೆಳಕಿಗೆ ಬಂತು ಎಂದು ಮಾಹಿತಿ ನೀಡಿದರು.</p>.<p>ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯನ್ನು ಮಕ್ಕಳಿಗೆ ಪಠ್ಯ ಮಾಡಬೇಕು ಎಂದು ಆಗ್ರಹಿಸಿದರು.</p>.<p>ವಿ.ಎ. ಲಕ್ಷ್ಮಣ್ ಬೆಂಗಳೂರು, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ ಅಂಕೋಲ ಅವರಿಗೆ 2020, 2021 ಮತ್ತು 2022ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಜೆ.ಎಸ್. ಜಯದೇವ ಚಾಮರಾಜನಗರ, ಎಸ್. ಶಾಂತಮ್ಮ ಕೋಲಾರ, ಸಿ.<br />ಚನ್ನಬಸವಣ್ಣ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿ ನೀಡಲಾಯಿತು. ಸಾಹಿತಿ ಬಿ.ಟಿ. ಜಾಹ್ನವಿ ಅವರಿಗೆ ‘ನವಲಕಲ್ ಬ್ರಹನ್ಮಠ ಶಾಂತವೀರಮ್ಮ ಮಹಾತಾಯಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<p class="Briefhead"><strong>‘ದೇವಸ್ಥಾನ ಅಗೆದರೆ ಬೌದ್ಧರ ಆಲಯ ಸಿಗಲಿವೆ’</strong><br />ದೇವಸ್ಥಾನ ಆಗಿತ್ತು ಎಂದು ಮಸೀದಿಗಳನ್ನು ಅಗೆಯಲಾಗುತ್ತಿದೆ. ಮಸೀದಿ ಬಿಟ್ಟು ದೇವಸ್ಥಾನಗಳನ್ನು ಅಗೆದರೆ ಬೌದ್ಧರ ಆಲಯಗಳು ಸಿಗಲಿವೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.</p>.<p>ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಹಿಡಿದು ವಾರಣಾಸಿವರೆಗೆ, ತಿರುಪತಿಯಿಂದ ಹಿಡಿದು ಹೆಚ್ಚು ಜನ ಸೇರುವ ಎಲ್ಲ ದೇವಸ್ಥಾನಗಳು ಬೌದ್ಧರದ್ದಾಗಿದ್ದವು. ಅಲ್ಲಿ ಇರುವುದು ಬುದ್ಧನ ಮೂರ್ತಿಗಳು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>