ದಾವಣಗೆರೆ ನಗರದಲ್ಲಿ ಸ್ಮಾರ್ಟ್ ಸಿಟಿ, ಒಳ ಚರಂಡಿ, ಜಲಸಿರಿ, ವಿದ್ಯುತ್ ಕಾಮಗಾರಿ..ಹೀಗೆ ಒಂದಿಲ್ಲೊದು ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳಿಗಾಗಿ ಪದೇ ಪದೇ ನೆಲ ಅಗೆಯುವುದು, ಮುಚ್ಚುವುದು ಸಾಮಾನ್ಯವಾಗಿದೆ. ಒಂದು, ಎರಡು ವರ್ಷಗಳಾದರೂ ಈ ಕಾಮಗಾರಿ ಮುಗಿಯುತ್ತಿಲ್ಲ. ಇದರಿಂದ ಜನರು ಕಿರಿಕಿರಿ ಅನುಭವಿಸುವಂತಾಗಿದೆ