<p><strong>ದಾವಣಗೆರೆ</strong>: ‘2023ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಅರ್ಹ ರೈತರಿಗೆ ಈವರೆಗೆ ಒಟ್ಟು ₹60.23 ಕೋಟಿ ಪರಿಹಾರ ಪಾವತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.</p>.<p>‘2023ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದಾಗಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿಯ ಅನ್ವಯ ಮೊದಲ ಕಂತಿನಲ್ಲಿ 82,928 ರೈತರ ಖಾತೆಗೆ ಗರಿಷ್ಠ ₹2,000 ದಂತೆ ₹15.88 ಕೋಟಿ ಪಾವತಿಸಲಾಗಿತ್ತು’ ಎಂದು ಹೇಳಿದ್ದಾರೆ.</p>.<p>‘ಮೇ 2ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಜಿಲ್ಲೆಯ 69,575 ರೈತರ ಖಾತೆಗಳಿಗೆ ಎರಡನೇ ಕಂತಿನಲ್ಲಿ ₹44,35,31,000 ಮೊತ್ತವನ್ನು ನೇರವಾಗಿ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ₹ 60,23,46,381 ಮೊತ್ತವನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಮೊದಲ ಕಂತಿನಲ್ಲಿ ಚನ್ನಗಿರಿ ತಾಲ್ಲೂಕಿನ 16,398 ರೈತರಿಗೆ ₹3,07,12,576, ದಾವಣಗೆರೆಯ 17,015 ರೈತರಿಗೆ ₹3,22,94,548, ಹೊನ್ನಾಳಿಯ 8,795 ರೈತರಿಗೆ ₹1,66,55,292, ಜಗಳೂರಿನ 27,263 ರೈತರಿಗೆ ₹5,36,64,034, ನ್ಯಾಮತಿಯ 9,189 ರೈತರಿಗೆ ₹1,74,61,001 ಹಾಗೂ ಹರಿಹರ ತಾಲ್ಲೂಕಿನ 4,268 ರೈತರಿಗೆ ₹80,27,929 ಗಳನ್ನು ಪಾವತಿಸಲಾಗಿದೆ’ ಎಂದು ತಿಳಿಸಿದರು.</p>.<p>‘ಬಾಕಿ ಇದ್ದ ಬೆಳೆ ಪರಿಹಾರದಲ್ಲಿ ಚನ್ನಗಿರಿಯ 12,758 ರೈತರಿಗೆ ₹6,50,30,311, ದಾವಣಗೆರೆಯ ₹13,914 ರೈತರಿಗೆ ₹8,34,19,466, ಹೊನ್ನಾಳಿಯ 7,177 ರೈತರಿಗೆ ₹3,87,43,550, ಜಗಳೂರಿನ 24,493 ರೈತರಿಗೆ ₹19,29,18,592, ನ್ಯಾಮತಿಯ 8,025 ರೈತರಿಗೆ ₹4,58,94,470 ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ ₹1,75,24,611 ಮೊತ್ತವನ್ನು ಈಗ ಪಾವತಿ ಮಾಡಲಾಗಿದೆ’ ಎಂದು ವಿವರಿಸಿದರು.</p>.<p>ರೈತರಿಗೆ ಬೆಳೆ ಪರಿಹಾರದ ಕುರಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆ ಮಾಡಬಹುದಾಗಿದೆ.</p>.<p>ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ (7892481962), ದಾವಣಗೆರೆ (9731254380), ಹೊನ್ನಾಳಿ (9686136015), ಜಗಳೂರು (8431977870), ನ್ಯಾಮತಿ (8073951245), ಹರಿಹರ (8618868370) ಸಂಪರ್ಕಿಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘2023ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟ ಉಂಟಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಅರ್ಹ ರೈತರಿಗೆ ಈವರೆಗೆ ಒಟ್ಟು ₹60.23 ಕೋಟಿ ಪರಿಹಾರ ಪಾವತಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದ್ದಾರೆ.</p>.<p>‘2023ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದಾಗಿ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಮಾರ್ಗಸೂಚಿಯ ಅನ್ವಯ ಮೊದಲ ಕಂತಿನಲ್ಲಿ 82,928 ರೈತರ ಖಾತೆಗೆ ಗರಿಷ್ಠ ₹2,000 ದಂತೆ ₹15.88 ಕೋಟಿ ಪಾವತಿಸಲಾಗಿತ್ತು’ ಎಂದು ಹೇಳಿದ್ದಾರೆ.</p>.<p>‘ಮೇ 2ರಂದು ಸರ್ಕಾರ ಹೊರಡಿಸಿದ್ದ ಆದೇಶದ ಅನ್ವಯ ಜಿಲ್ಲೆಯ 69,575 ರೈತರ ಖಾತೆಗಳಿಗೆ ಎರಡನೇ ಕಂತಿನಲ್ಲಿ ₹44,35,31,000 ಮೊತ್ತವನ್ನು ನೇರವಾಗಿ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈವರೆಗೆ ₹ 60,23,46,381 ಮೊತ್ತವನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಮೊದಲ ಕಂತಿನಲ್ಲಿ ಚನ್ನಗಿರಿ ತಾಲ್ಲೂಕಿನ 16,398 ರೈತರಿಗೆ ₹3,07,12,576, ದಾವಣಗೆರೆಯ 17,015 ರೈತರಿಗೆ ₹3,22,94,548, ಹೊನ್ನಾಳಿಯ 8,795 ರೈತರಿಗೆ ₹1,66,55,292, ಜಗಳೂರಿನ 27,263 ರೈತರಿಗೆ ₹5,36,64,034, ನ್ಯಾಮತಿಯ 9,189 ರೈತರಿಗೆ ₹1,74,61,001 ಹಾಗೂ ಹರಿಹರ ತಾಲ್ಲೂಕಿನ 4,268 ರೈತರಿಗೆ ₹80,27,929 ಗಳನ್ನು ಪಾವತಿಸಲಾಗಿದೆ’ ಎಂದು ತಿಳಿಸಿದರು.</p>.<p>‘ಬಾಕಿ ಇದ್ದ ಬೆಳೆ ಪರಿಹಾರದಲ್ಲಿ ಚನ್ನಗಿರಿಯ 12,758 ರೈತರಿಗೆ ₹6,50,30,311, ದಾವಣಗೆರೆಯ ₹13,914 ರೈತರಿಗೆ ₹8,34,19,466, ಹೊನ್ನಾಳಿಯ 7,177 ರೈತರಿಗೆ ₹3,87,43,550, ಜಗಳೂರಿನ 24,493 ರೈತರಿಗೆ ₹19,29,18,592, ನ್ಯಾಮತಿಯ 8,025 ರೈತರಿಗೆ ₹4,58,94,470 ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ ₹1,75,24,611 ಮೊತ್ತವನ್ನು ಈಗ ಪಾವತಿ ಮಾಡಲಾಗಿದೆ’ ಎಂದು ವಿವರಿಸಿದರು.</p>.<p>ರೈತರಿಗೆ ಬೆಳೆ ಪರಿಹಾರದ ಕುರಿತ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆ ಮಾಡಬಹುದಾಗಿದೆ.</p>.<p>ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ (7892481962), ದಾವಣಗೆರೆ (9731254380), ಹೊನ್ನಾಳಿ (9686136015), ಜಗಳೂರು (8431977870), ನ್ಯಾಮತಿ (8073951245), ಹರಿಹರ (8618868370) ಸಂಪರ್ಕಿಸಬಹುದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>