<p><strong>ಚಳ್ಳಕೆರೆ</strong>: ‘ದಾವಣಗೆರೆಯಲ್ಲಿ ಪ್ರತ್ಯೇಕವಾಗಿ 14 ಎಕರೆ ಪ್ರದೇಶದಲ್ಲಿ ₹310 ಕೋಟಿ ವೆಚ್ಚದ ಮೆಗಾಡೈರಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು. </p>.<p>ನಗರದ ಶಿಮೂಲ್ ಒಕ್ಕೂಟದ ಉಪ ಕಚೇರಿ ಕುರಿಯಾನ್ ಸಂಭಾಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. </p>.<p>‘ಸರ್ಕಾರದ ಅನುದಾನ ವಿಳಂಬವಾಗಿರುವ ಕಾರಣ ಮೆಗಾಡೈರಿ ಸ್ಥಾಪನೆಗೆ ಹಾಲು ಒಕ್ಕೂಟದಿಂದ ಸಾಲ ಪಡೆಯಲಾಗಿದೆ. ಶಿಮೂಲ್ಗೆ ಪ್ರತಿ ದಿನ ಬರುವ 8.5 ಲಕ್ಷ ಲೀಟರ್ ಹಾಲಿನಲ್ಲಿ 4 ಲಕ್ಷ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲಿನಲ್ಲಿ ತುಪ್ಪ, ಬೆಣ್ಣೆ, ಸಿಹಿ ತಿನಿಸುಗಳು ಮತ್ತು ವಿದ್ಯಾರ್ಥಿಗಳಿಗೆ ಕ್ಷೀರಾ ಭಾಗ್ಯ ಹಾಲು ನೀಡಲಾಗುತ್ತಿದೆ’ ಎಂದರು. </p>.<p>‘ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರ ಆರ್ಥಿಕ ಸಂಕಷ್ಟ ಸುಧಾರಣೆಗೆ ಹಾಲು ಉತ್ಪಾದಕರ ಸಂಘಗಳಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ. ಸಹಕಾರ ಸಂಘಗಳ ಸಂಖ್ಯೆ 326ರಿಂದ 380ಕ್ಕೆ ಏರಿಕೆಯಾಗಿದೆ. ದೊಡ್ಡಉಳ್ಳಾರ್ತಿ, ಸಿದ್ದಾಪುರ ಗ್ರಾಮದಲ್ಲಿ ಬಿಸಿಎಂ ಘಟಕ ತೆರೆಯಲಾಗಿದೆ’ ಎಂದು ತಿಳಿಸಿದರು. </p>.<p>‘ಗುಣಮಟ್ಟದ ನಂದಿನಿ ಸಿಹಿ ಉತ್ಪನ್ನಗಳನ್ನು ಗ್ರಾಹಕರು ಬಳಸುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕಾಗಿದೆ. ಸಿಹಿ ಉತ್ಪನ್ನಗಳ ಪ್ರಚಾರದ ಸಲುವಾಗಿ ಚಿತ್ರದುರ್ಗ 10, ಚಳ್ಳಕೆರೆ 2, ನಾಯಕನಹಟ್ಟಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 13 ನಂದಿನಿ ಪಾರ್ಲರ್ ತೆರೆಯಲು ಸಿದ್ಧತೆ ನಡೆಸಲಾಗಿದೆ. ಚಳ್ಳಕೆರೆ ನಗರ ಪ್ರದೇಶದಲ್ಲಿ ನಂದಿನಿ ಬ್ರೆಡ್ ಮತ್ತು ಶುದ್ಧ ಕುಡಿಯುವ ನೀರಿನ ಕಾರ್ಖಾನೆ ಆರಂಭಿಸಲಾಗುವುದು’ ಎಂದು <br />ಹೇಳಿದರು. </p>.<p>ಶಿಮೂಲ್ ಮಾರಾಟ ವಿಭಾಗದ ಅಧಿಕಾರಿ ಇರ್ಫಾನ್, ‘ಶಿಮೂಲ್ನಿಂದ ನಂದಿನಿಯ 172 ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ಹೇಳಿದರು.</p>.<p>ಕಚೇರಿ ಸಿಬ್ಬಂದಿ ಸುರೇಶ್ಬಾಬು, ಅಭಿಷೇಕ್, ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳ್ಳಕೆರೆ</strong>: ‘ದಾವಣಗೆರೆಯಲ್ಲಿ ಪ್ರತ್ಯೇಕವಾಗಿ 14 ಎಕರೆ ಪ್ರದೇಶದಲ್ಲಿ ₹310 ಕೋಟಿ ವೆಚ್ಚದ ಮೆಗಾಡೈರಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಶಿಮೂಲ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ತಿಳಿಸಿದರು. </p>.<p>ನಗರದ ಶಿಮೂಲ್ ಒಕ್ಕೂಟದ ಉಪ ಕಚೇರಿ ಕುರಿಯಾನ್ ಸಂಭಾಗಣದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. </p>.<p>‘ಸರ್ಕಾರದ ಅನುದಾನ ವಿಳಂಬವಾಗಿರುವ ಕಾರಣ ಮೆಗಾಡೈರಿ ಸ್ಥಾಪನೆಗೆ ಹಾಲು ಒಕ್ಕೂಟದಿಂದ ಸಾಲ ಪಡೆಯಲಾಗಿದೆ. ಶಿಮೂಲ್ಗೆ ಪ್ರತಿ ದಿನ ಬರುವ 8.5 ಲಕ್ಷ ಲೀಟರ್ ಹಾಲಿನಲ್ಲಿ 4 ಲಕ್ಷ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲಿನಲ್ಲಿ ತುಪ್ಪ, ಬೆಣ್ಣೆ, ಸಿಹಿ ತಿನಿಸುಗಳು ಮತ್ತು ವಿದ್ಯಾರ್ಥಿಗಳಿಗೆ ಕ್ಷೀರಾ ಭಾಗ್ಯ ಹಾಲು ನೀಡಲಾಗುತ್ತಿದೆ’ ಎಂದರು. </p>.<p>‘ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕಿನ ರೈತರ ಆರ್ಥಿಕ ಸಂಕಷ್ಟ ಸುಧಾರಣೆಗೆ ಹಾಲು ಉತ್ಪಾದಕರ ಸಂಘಗಳಿಗೆ ಹೆಚ್ಚು ಉತ್ತೇಜನ ನೀಡಲಾಗಿದೆ. ಸಹಕಾರ ಸಂಘಗಳ ಸಂಖ್ಯೆ 326ರಿಂದ 380ಕ್ಕೆ ಏರಿಕೆಯಾಗಿದೆ. ದೊಡ್ಡಉಳ್ಳಾರ್ತಿ, ಸಿದ್ದಾಪುರ ಗ್ರಾಮದಲ್ಲಿ ಬಿಸಿಎಂ ಘಟಕ ತೆರೆಯಲಾಗಿದೆ’ ಎಂದು ತಿಳಿಸಿದರು. </p>.<p>‘ಗುಣಮಟ್ಟದ ನಂದಿನಿ ಸಿಹಿ ಉತ್ಪನ್ನಗಳನ್ನು ಗ್ರಾಹಕರು ಬಳಸುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕಾಗಿದೆ. ಸಿಹಿ ಉತ್ಪನ್ನಗಳ ಪ್ರಚಾರದ ಸಲುವಾಗಿ ಚಿತ್ರದುರ್ಗ 10, ಚಳ್ಳಕೆರೆ 2, ನಾಯಕನಹಟ್ಟಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 13 ನಂದಿನಿ ಪಾರ್ಲರ್ ತೆರೆಯಲು ಸಿದ್ಧತೆ ನಡೆಸಲಾಗಿದೆ. ಚಳ್ಳಕೆರೆ ನಗರ ಪ್ರದೇಶದಲ್ಲಿ ನಂದಿನಿ ಬ್ರೆಡ್ ಮತ್ತು ಶುದ್ಧ ಕುಡಿಯುವ ನೀರಿನ ಕಾರ್ಖಾನೆ ಆರಂಭಿಸಲಾಗುವುದು’ ಎಂದು <br />ಹೇಳಿದರು. </p>.<p>ಶಿಮೂಲ್ ಮಾರಾಟ ವಿಭಾಗದ ಅಧಿಕಾರಿ ಇರ್ಫಾನ್, ‘ಶಿಮೂಲ್ನಿಂದ ನಂದಿನಿಯ 172 ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ಹೇಳಿದರು.</p>.<p>ಕಚೇರಿ ಸಿಬ್ಬಂದಿ ಸುರೇಶ್ಬಾಬು, ಅಭಿಷೇಕ್, ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>