<p><strong>ಸಾಸ್ವೆಹಳ್ಳಿ:</strong> ಸಮೀಪದ ಕಮ್ಮಾರಗಟ್ಟೆಯಲ್ಲಿ ಹೆಳವನಕಟ್ಟೆ ಗಿರಿಯಮ್ಮ ಐಕ್ಯಸ್ಥಳ ಮಾರ್ಗದ ರಸ್ತೆ ಹಾಳಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಶನಿವಾರ ಪ್ರತಿಭಟನೆ ಮಾಡಿದರು.</p>.<p>ಆ.8 ಮತ್ತು 9ರ ಗರುಡ ಪಂಚಮಿಯಂದು ಇಲ್ಲಿನ ಆಂಜನೇಯ ಸ್ವಾಮಿಯ ಕಾರ್ಣಿಕೋತ್ಸವ ನಡೆಯಲಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಅಪಾರ ಭಕ್ತರು ಇಂತಹ ರಸ್ತೆಯಲ್ಲಿಯೇ ಓಡಾಡಬೇಕಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಂ.ಕೆ ಶಾಂತರಾಜ್.</p>.<p>ಹೊಸ ಬಟ್ಟೆ ಧರಿಸಿ ಬರುವ ಜನರು ಕೆಸರುಮಯ ರಸ್ತೆಯಲ್ಲೇ ಓಡಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಾತ್ರೆಗೂ ಮುನ್ನವೇ ಕೆಸರು ಗದ್ದೆಯಾಗಿರುವ ಈ ಸ್ಥಳವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.</p>.<p>ಈ ರಸ್ತೆಗೆ ಮಣ್ಣು ಹಾಕಿಸಿ ಸರಿಪಡಿಸದಿದ್ದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. </p>.<p>ಶಾಂತನಗೌಡ, ಮಾದಪ್ಪ, ಭಾಗ್ಯ, ಹಾಲೇಶ, ಸುರೇಶ, ಶ್ರೀನಿವಾಸ ಪಾಟೀಲ್, ಪೂಜಾರ್ ಪ್ರಶಾಂತ, ಗಣೇಶ, ಹನುಮಂತ, ನವೀನ, ಮಂಜನಾಥ, ಕೆ.ವಿ ಪ್ರಶಾಂತ, ಕೆ.ವಿ ಶ್ರೀಕಾಂತ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ:</strong> ಸಮೀಪದ ಕಮ್ಮಾರಗಟ್ಟೆಯಲ್ಲಿ ಹೆಳವನಕಟ್ಟೆ ಗಿರಿಯಮ್ಮ ಐಕ್ಯಸ್ಥಳ ಮಾರ್ಗದ ರಸ್ತೆ ಹಾಳಾಗಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಶನಿವಾರ ಪ್ರತಿಭಟನೆ ಮಾಡಿದರು.</p>.<p>ಆ.8 ಮತ್ತು 9ರ ಗರುಡ ಪಂಚಮಿಯಂದು ಇಲ್ಲಿನ ಆಂಜನೇಯ ಸ್ವಾಮಿಯ ಕಾರ್ಣಿಕೋತ್ಸವ ನಡೆಯಲಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಅಪಾರ ಭಕ್ತರು ಇಂತಹ ರಸ್ತೆಯಲ್ಲಿಯೇ ಓಡಾಡಬೇಕಿದೆ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಕೋಶಾಧ್ಯಕ್ಷ ಎಂ.ಕೆ ಶಾಂತರಾಜ್.</p>.<p>ಹೊಸ ಬಟ್ಟೆ ಧರಿಸಿ ಬರುವ ಜನರು ಕೆಸರುಮಯ ರಸ್ತೆಯಲ್ಲೇ ಓಡಾಡಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಾತ್ರೆಗೂ ಮುನ್ನವೇ ಕೆಸರು ಗದ್ದೆಯಾಗಿರುವ ಈ ಸ್ಥಳವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.</p>.<p>ಈ ರಸ್ತೆಗೆ ಮಣ್ಣು ಹಾಕಿಸಿ ಸರಿಪಡಿಸದಿದ್ದರೆ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. </p>.<p>ಶಾಂತನಗೌಡ, ಮಾದಪ್ಪ, ಭಾಗ್ಯ, ಹಾಲೇಶ, ಸುರೇಶ, ಶ್ರೀನಿವಾಸ ಪಾಟೀಲ್, ಪೂಜಾರ್ ಪ್ರಶಾಂತ, ಗಣೇಶ, ಹನುಮಂತ, ನವೀನ, ಮಂಜನಾಥ, ಕೆ.ವಿ ಪ್ರಶಾಂತ, ಕೆ.ವಿ ಶ್ರೀಕಾಂತ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>