<p><strong>ಜಗಳೂರು</strong>: ‘ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾಗಿರುವ ನನ್ನನ್ನು ಲಾಟರಿ ಶಾಸಕ ಎಂದು ಮೂದಲಿಸುವ ಮೂಲಕ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಕ್ಷೇತ್ರದ ಮತದಾರರು ಹಾಗೂ ಸಂವಿಧಾನವನ್ನು ಅವಹೇಳನ ಮಾಡಿದ್ದಾರೆ’ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.</p>.<p>ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ತಾವೇ ಶಾಸಕ ಅಥವಾ ತಾವೇ ಮುಖ್ಯಮಂತ್ರಿ ಅಂದರೂ ನನ್ನ ಆಕ್ಷೇಪ ಇಲ್ಲ. ಆದರೆ ನನ್ನನ್ನು ಲಾಟರಿ ಟಿಕೆಟ್ಗೆ ಹೋಲಿಸಿದ್ದು ಏಕೆ? ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಏಕೆ ಹೂಡಬಾರದು?’ ಎಂದು ಪ್ರಶ್ನಿಸಿದರು.</p>.<p>‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ, ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದೀರಿ. ಈ ಬಾರಿಯೂ ನಿಮ್ಮ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂಬುದು ನಿಮಗೆ ಖಾತ್ರಿಯಾಗಿದೆ. ಆದರೆ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ನಿಮ್ಮನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ಅರಸಿಕೆರೆ ದೇವೇಂದ್ರಪ್ಪ ಅವರು ಸಂಘಟಿಸಿದ್ದ ಕಾಂಗ್ರೆಸ್ ಪಕ್ಷದಿಂದ 2013ರಲ್ಲಿ ನೀವು ಶಾಸಕರಾಗಿ ಆರಿಸಿ ಬಂದಿರಲ್ಲವೇ’ ಎಂದು ವ್ಯಂಗ್ಯವಾಡಿದರು.</p>.<p>‘ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರನ್ನು ಅವಮಾನಿಸಿದ್ದು ಮರೆತಿದ್ದೀರಾ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೋದಿರಿ. ಇಬ್ಬರು ಮಾಜಿ ಶಾಸಕರು ಸೇರಿಕೊಂಡರೂ ನಮ್ಮ ಪಕ್ಷಕ್ಕೆ 27,000 ಮುನ್ನಡೆ ಬಂತು. ಏನು ನಿಮ್ಮ ಸಾಧನೆ’ ಎಂದು ಶಾಸಕ ತಿರುಗೇಟು ನೀಡಿದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಪ್ರಕಾಶ ರೆಡ್ಡಿ, ಸುರೇಶ್ ಗೌಡ, ಮಹೇಶ್ವರಪ್ಪ, ಶೇಖರಪ್ಪ, ಚಿತ್ತಪ್ಪ, ಶಕೀಲ್ ಅಹ್ಮದ್, ರಮೇಶ್ ರೆಡ್ಡಿ, ಶಿಲ್ಪಾ ಸಾವಿತ್ರಮ್ಮ ಇದ್ದರು.</p>.<p> <strong>‘₹600 ಕೊಟಿ ಅನುದಾನ’</strong> </p><p>ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ₹600 ಕೊಟಿ ಅನುದಾನ ತಂದಿದ್ದೇನೆ. ತಾಲ್ಲೂಕಿನ 166 ಹಳ್ಳಿಗಳಿಗೆ ₹482 ಕೋಟಿ ವೆಚ್ಚದ ಬಹುಗ್ರಾಮ ಯೋಜನೆಯಡಿ ಶೇ 50ರಷ್ಟು ಕಾಮಗಾರಿ ಮುಗಿದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 9 ಕೆರೆ ತುಂಬಿಸುವ ₹1025 ಕೋಟಿ ಮೊತ್ತದ ಯೋಜನೆಯಡಿ ತಾಲ್ಲೂಕಿನಲ್ಲಿ ₹312 ವೆಚ್ಚದಲ್ಲಿ ಶೇ 34ರಷ್ಟು ಕಾಮಗಾರಿ ಮುಗಿದಿವೆ ಎಂದು ಶಾಸಕ ದೇವೇಂದ್ರಪ್ಪ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗಳೂರು</strong>: ‘ಚುನಾವಣೆಯಲ್ಲಿ ಗೆದ್ದು ಶಾಸಕನಾಗಿ ಆಯ್ಕೆಯಾಗಿರುವ ನನ್ನನ್ನು ಲಾಟರಿ ಶಾಸಕ ಎಂದು ಮೂದಲಿಸುವ ಮೂಲಕ ಮಾಜಿ ಶಾಸಕ ಎಚ್.ಪಿ. ರಾಜೇಶ್ ಅವರು ಕ್ಷೇತ್ರದ ಮತದಾರರು ಹಾಗೂ ಸಂವಿಧಾನವನ್ನು ಅವಹೇಳನ ಮಾಡಿದ್ದಾರೆ’ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.</p>.<p>ಪಟ್ಟಣದ ಜನಸಂಪರ್ಕ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ತಾವೇ ಶಾಸಕ ಅಥವಾ ತಾವೇ ಮುಖ್ಯಮಂತ್ರಿ ಅಂದರೂ ನನ್ನ ಆಕ್ಷೇಪ ಇಲ್ಲ. ಆದರೆ ನನ್ನನ್ನು ಲಾಟರಿ ಟಿಕೆಟ್ಗೆ ಹೋಲಿಸಿದ್ದು ಏಕೆ? ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಏಕೆ ಹೂಡಬಾರದು?’ ಎಂದು ಪ್ರಶ್ನಿಸಿದರು.</p>.<p>‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬನ್ನಿ, ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದೀರಿ. ಈ ಬಾರಿಯೂ ನಿಮ್ಮ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂಬುದು ನಿಮಗೆ ಖಾತ್ರಿಯಾಗಿದೆ. ಆದರೆ ಐದು ಚುನಾವಣೆಗಳಲ್ಲಿ ನಾಲ್ಕು ಬಾರಿ ನಿಮ್ಮನ್ನು ಕ್ಷೇತ್ರದ ಮತದಾರರು ತಿರಸ್ಕರಿಸಿದ್ದಾರೆ. ಅರಸಿಕೆರೆ ದೇವೇಂದ್ರಪ್ಪ ಅವರು ಸಂಘಟಿಸಿದ್ದ ಕಾಂಗ್ರೆಸ್ ಪಕ್ಷದಿಂದ 2013ರಲ್ಲಿ ನೀವು ಶಾಸಕರಾಗಿ ಆರಿಸಿ ಬಂದಿರಲ್ಲವೇ’ ಎಂದು ವ್ಯಂಗ್ಯವಾಡಿದರು.</p>.<p>‘ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರನ್ನು ಅವಮಾನಿಸಿದ್ದು ಮರೆತಿದ್ದೀರಾ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೋದಿರಿ. ಇಬ್ಬರು ಮಾಜಿ ಶಾಸಕರು ಸೇರಿಕೊಂಡರೂ ನಮ್ಮ ಪಕ್ಷಕ್ಕೆ 27,000 ಮುನ್ನಡೆ ಬಂತು. ಏನು ನಿಮ್ಮ ಸಾಧನೆ’ ಎಂದು ಶಾಸಕ ತಿರುಗೇಟು ನೀಡಿದರು.</p>.<p>ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್. ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಮುಖಂಡರಾದ ಸಿ.ತಿಪ್ಪೇಸ್ವಾಮಿ, ಪ್ರಕಾಶ ರೆಡ್ಡಿ, ಸುರೇಶ್ ಗೌಡ, ಮಹೇಶ್ವರಪ್ಪ, ಶೇಖರಪ್ಪ, ಚಿತ್ತಪ್ಪ, ಶಕೀಲ್ ಅಹ್ಮದ್, ರಮೇಶ್ ರೆಡ್ಡಿ, ಶಿಲ್ಪಾ ಸಾವಿತ್ರಮ್ಮ ಇದ್ದರು.</p>.<p> <strong>‘₹600 ಕೊಟಿ ಅನುದಾನ’</strong> </p><p>ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ₹600 ಕೊಟಿ ಅನುದಾನ ತಂದಿದ್ದೇನೆ. ತಾಲ್ಲೂಕಿನ 166 ಹಳ್ಳಿಗಳಿಗೆ ₹482 ಕೋಟಿ ವೆಚ್ಚದ ಬಹುಗ್ರಾಮ ಯೋಜನೆಯಡಿ ಶೇ 50ರಷ್ಟು ಕಾಮಗಾರಿ ಮುಗಿದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 9 ಕೆರೆ ತುಂಬಿಸುವ ₹1025 ಕೋಟಿ ಮೊತ್ತದ ಯೋಜನೆಯಡಿ ತಾಲ್ಲೂಕಿನಲ್ಲಿ ₹312 ವೆಚ್ಚದಲ್ಲಿ ಶೇ 34ರಷ್ಟು ಕಾಮಗಾರಿ ಮುಗಿದಿವೆ ಎಂದು ಶಾಸಕ ದೇವೇಂದ್ರಪ್ಪ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>