<p><strong>ದಾವಣಗೆರೆ</strong>: ‘ಯಥಾ ರಾಜಾ, ತಥಾ ಪ್ರಜಾ; ಯಥಾ ರಾಜಾ, ತಥಾ ಅಧಿಕಾರಿ...’</p>.<p>ಮೈಸೂರಿನಲ್ಲಿ ನಡೆಯುತ್ತಿರುವ ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ ವ್ಯಾಖ್ಯಾನವಿದು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘರ್ಷಕ್ಕೆ ಸಚಿವರು ಕಾರಣ. ‘ಸಚಿವರು, ಶಾಸಕರು ಅಧಿಕಾರಕ್ಕಾಗಿ ಏನೆಲ್ಲ ಮಾಡುತ್ತಿದ್ದಾರೆ ನೀವೇ ಹೇಳಿ’ ಎಂದು ಪ್ರಶ್ನಿಸಿದರು.</p>.<p>‘ಸಚಿವರೊಬ್ಬರು ಸಿಡಿ ಹಿಡಿದುಕೊಂಡು (ಶಾಸಕ ಯತ್ನಾಳ್ ಪ್ರಸ್ತಾಪಿಸಿದ್ದ ಸಿಡಿ) ಮೈಸೂರಿನ ಸ್ವಾಮೀಜಿ ಬಳಿ ಹೋಗಿದ್ದರಂತೆ, ಅವರು ಬೈದು ಕಳುಹಿಸಿದ್ದಾರೆ’ ಎಂದು ಸಚಿವ ಯೋಗೇಶ್ವರ್ ಹೆಸರು ಹೇಳದೇ ಕುಟುಕಿದರು.</p>.<p>‘18–45 ವರ್ಷದೊಳಗಿನವರಿಗೆ ಲಸಿಕೆ ನೀಡಲು ಆನ್ಲೈನ್ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ. ಲಸಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಇದರಲ್ಲಿ ಮುಖ್ಯಮಂತ್ರಿ ಒಬ್ಬರದ್ದೇ ತಪ್ಪಿಲ್ಲ. ಕೇಂದ್ರವೂ ಈ ವಿಚಾರದಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ‘ಯಥಾ ರಾಜಾ, ತಥಾ ಪ್ರಜಾ; ಯಥಾ ರಾಜಾ, ತಥಾ ಅಧಿಕಾರಿ...’</p>.<p>ಮೈಸೂರಿನಲ್ಲಿ ನಡೆಯುತ್ತಿರುವ ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ ವ್ಯಾಖ್ಯಾನವಿದು.</p>.<p>ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘರ್ಷಕ್ಕೆ ಸಚಿವರು ಕಾರಣ. ‘ಸಚಿವರು, ಶಾಸಕರು ಅಧಿಕಾರಕ್ಕಾಗಿ ಏನೆಲ್ಲ ಮಾಡುತ್ತಿದ್ದಾರೆ ನೀವೇ ಹೇಳಿ’ ಎಂದು ಪ್ರಶ್ನಿಸಿದರು.</p>.<p>‘ಸಚಿವರೊಬ್ಬರು ಸಿಡಿ ಹಿಡಿದುಕೊಂಡು (ಶಾಸಕ ಯತ್ನಾಳ್ ಪ್ರಸ್ತಾಪಿಸಿದ್ದ ಸಿಡಿ) ಮೈಸೂರಿನ ಸ್ವಾಮೀಜಿ ಬಳಿ ಹೋಗಿದ್ದರಂತೆ, ಅವರು ಬೈದು ಕಳುಹಿಸಿದ್ದಾರೆ’ ಎಂದು ಸಚಿವ ಯೋಗೇಶ್ವರ್ ಹೆಸರು ಹೇಳದೇ ಕುಟುಕಿದರು.</p>.<p>‘18–45 ವರ್ಷದೊಳಗಿನವರಿಗೆ ಲಸಿಕೆ ನೀಡಲು ಆನ್ಲೈನ್ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ. ಲಸಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಇದರಲ್ಲಿ ಮುಖ್ಯಮಂತ್ರಿ ಒಬ್ಬರದ್ದೇ ತಪ್ಪಿಲ್ಲ. ಕೇಂದ್ರವೂ ಈ ವಿಚಾರದಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>