ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ| 6000 ಲೀಟರ್‌ ಆಮ್ಲಜನಕ ಎಲ್ಲಿ ಹೋಗುತ್ತದೆ: ಅಧಿಕಾರಿಗಳಿಗೆ ಸಚಿವ ತರಾಟೆ

Last Updated 22 ಮೇ 2021, 1:42 IST
ಅಕ್ಷರ ಗಾತ್ರ

ದಾವಣಗೆರೆ: ಕೆಲವು ಜಿಲ್ಲೆಗಳಿಗೆ 400–500 ಲೀಟರ್‌ ಆಮ್ಲಜನಕ ಮಾತ್ರ ಪೂರೈಕೆಯಾಗುತ್ತಿದೆ. ಇಲ್ಲಿ 6 ಸಾವಿರ ಲೀಟರ್‌ ಆಮ್ಲಜನಕ ಒಂದೇ ಆಸ್ಪತ್ರೆಗೆ ಪೂರೈಕೆಯಾಗುತ್ತಿದೆ. ನಿಜಕ್ಕೂ ಅದು ಎಲ್ಲಿ ಹೋಗುತ್ತಿದೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರಶ್ನಿಸಿದ್ದಾರೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರು ಎಷ್ಟಿದ್ದಾರೆ ಎಂದು ಸಚಿವರು ಕೇಳಿದಾಗ, 300ಕ್ಕೂ ಅಧಿಕ ಮಂದಿ ಇರುವುದಾಗಿ ಅಧಿಕಾರಿಗಳು ತಿಳಿಸಿದರು. ‘ಎಲ್ಲರಿಗೂ ಆಮ್ಲಜನಕ ಕೊಡುತ್ತಿದ್ದೀರಾ? ಮತ್ತೆ ಹೇಗೆ ದಿನಕ್ಕೆ 6 ಸಾವಿರ ಲೀಟರ್‌ ಖಾಲಿಯಾಗುತ್ತಿದೆ? ಇಲ್ಲಿ ಏನೋ ನಡೆಯುತ್ತಿದೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಆಮ್ಲಜನಕ ನಿರ್ವಹಣೆಗಾಗಿ ಒಂದು ಸಮಿತಿ ಮಾಡಬೇಕು. ಯಾವ ರೋಗಿಗೆ ಎಷ್ಟು ಆಮ್ಲಜನಕ ನೀಡಲಾಗುತ್ತಿದೆ ಎಂಬ ‍ಪಕ್ಕಾ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ’ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT