ಮಳೆಯನ್ನು ಬೇಡದೆ, ಇಬ್ಬನಿಗೆ ಅತ್ಯುತ್ತಮ ಇಳುವರಿ ನೀಡುವ ಕಡಲೆ ಬೆಳೆ ಹೆಚ್ಚು ಖರ್ಚಿಲ್ಲದ, ರೈತರಿಗೆ ಲಾಭದಾಯಕವಾದ ಬೆಳೆಯಾಗಿದೆ.ಎರೆ ಭೂಮಿಯಲ್ಲಿ, ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯ ತೇವಾಂಶದಿಂದ ನೆರವಿನಿಂದಲೇ ಸಮೃದ್ಧವಾಗಿ ಬೆಳೆಯುವ ಕಡಲೆ ಮಳೆಯಾಶ್ರಿತ ಭೂಮಿಯಲ್ಲಿ ಎರಡನೇ ಬೆಳೆಯಾಗಿ ರೈತರಿಗೆ ಲಾಭ ತರುತ್ತದೆ. ಇದು ದ್ವಿದಳ ಧಾನ್ಯ ಬೆಳೆಯಾಗಿರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಸಹಕಾರಿಯಾಗಿದೆ.